ಐಪಿಎಲ್ 2022: ಗಾಯಗೊಂಡ ಲವ್ನಿತ್ ಬದಲಿಗೆ ಬೆಂಗಳೂರು ತಂಡ ಸೇರಿದ ಮಾಜಿ ಆರ್ ಸಿಬಿ ಆಟಗಾರ
Team Udayavani, Apr 4, 2022, 1:02 PM IST
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಉಳಿದ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ರಜತ್ ಪಾಟಿದಾರ್ ಅವರನ್ನು ಸೇರಿಸಿಕೊಂಡಿದೆ. ಗಾಯಗೊಂಡಿರುವ ಲವ್ನಿತ್ ಸಿಸೋಡಿಯಾ ಬದಲಿಗೆ ಪಾಟಿದಾರ್ ಆರ್ ಸಿಬಿ ಕ್ಯಾಂಪ್ ಸೇರಿದ್ದಾರೆ.
ದೇಶಿ ಕ್ರಿಕೆಟ್ ನಲ್ಲಿ ಮಧ್ಯ ಪ್ರದೇಶವನ್ನು ಪ್ರತಿನಿಧಿಸುವ ರಜತ್ ಪಾಟಿದಾರ್, 31 ಟಿ20 ಪಂದ್ಯಗಳಲ್ಲಿ 861 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಅರ್ಧಶತಕಗಳು ಸೇರಿವೆ. ಈ ಹಿಂದೆ ನಾಲ್ಕು ಬಾರಿ ಆರ್ ಸಿಬಿ ತಂಡದಲ್ಲಿದ್ದ ರಜತ್ ಈ ಬಾರಿಯ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು. ಇದೀಗ 20 ಲಕ್ಷ ರೂ ಮೂಲಬೆಲೆಗೆ ಮತ್ತೆ ಆರ್ ಸಿಬಿ ಕ್ಯಾಂಪ್ ಸೇರಿದ್ದಾರೆ.
2021ರ ಐಪಿಎಲ್ ಕೂಟದಲ್ಲಿ ರಜತ್ ಪಾಟಿದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 114.5ರ ಸ್ಟ್ರೈಕ್ ರೇಟ್ ನಲ್ಲಿ 71 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಹತ್ತೇ ದಿನದಲ್ಲಿ ರಜನಿಕಾಂತ್ ರ 2.0 ಚಿತ್ರದ ದಾಖಲೆ ಮುರಿದ ‘ಆರ್ ಆರ್ ಆರ್’
ಈ ಬಾರಿಯ ಕೂಟದಲ್ಲಿ ಆರ್ ಸಿಬಿ ತಂಡ ಎರಡು ಪಂದ್ಯವಾಡಿದ್ದು, ಒಂದು ಪಂದ್ಯ ಸೋತು ಮತ್ತೊಂದರಲ್ಲಿ ಗೆಲುವು ಕಂಡಿದೆ. ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಎಪ್ರಿಲ್ 5ರಂದು ವಾಂಖೆಡೆ ಮೈದಾನದಲ್ಲಿ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು