ಸಿಎಸ್ ಕೆ ಆಟಗಾರರಿಗೆ ಕಠಿಣ ಕ್ವಾರಂಟೈನ್: ರಾಯಲ್ಸ್ ವಿರುದ್ಧದ ಪಂದ್ಯ ಮುಂದೂಡಿಕೆ
Team Udayavani, May 4, 2021, 11:10 AM IST
ಹೊಸದಿಲ್ಲಿ: ಐಪಿಎಲ್ ಮೇಲೆ ಕೋವಿಡ್ ಕರಾಳ ಛಾಯೆ ಮತ್ತಷ್ಟು ವಿಸ್ತಾರವಾಗಿದೆ. ಸಿಎಸ್ ಕೆ ಬಳಗದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢವಾದ ಬಳಿಕ ಸಂಪೂರ್ಣ ತಂಡಕ್ಕೆ ಇದೀಗ ಆರು ದಿನಗಳ ಕಠಿಣ ಕ್ವಾರಂಟೈನ್ ವಿಧಿಸಲಾಗಿದೆ. ಹೀಗಾಗಿ ಬುಧವಾರ ನಡೆಯಬೇಕಿದ್ದ ಪಂದಗಯ ಮುಂದೂಡಲಾಗಿದೆ.
ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ದೃಢವಾಗಿದೆ. ರವಿವಾರ ಸೋಂಕು ದೃಢವಾಗಿದ್ದ ತಂಡದ ಸಿಇಓ ವಿಶ್ವನಾಥನ್ ಅವರಿಗೆ ಇದೀಗ ನೆಗೆಟಿವ್ ವರದಿಯಾಗಿದೆ.
ಇದನ್ನೂ ಓದಿ:ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇರಿಕೊಳ್ಳಲಿದ್ದಾರೆ ರವಿಚಂದ್ರನ್ ಅಶ್ವಿನ್
ಕಠಿಣ ಕ್ವಾರಂಟೈನ್ ಕಾರಣದಿಂದ ಬುಧವಾರ ನಡೆಯಬೇಕಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಮುಂದೂಡಲಾಗಿದೆ. ಸೋಮವಾರ ಕೋವಿಡ್ ಪಾಸಿಟಿವ್ ವರದಿಯಾದ ಬಳಿಕ ಚೆನ್ನೈ ತಂಡ ಯಾವುದೇ ಅಭ್ಯಾಸದಲ್ಲಿ ಭಾಗವಹಿಸಿಲ್ಲ.
ಸಿಎಸ್ ಕೆ ತಂಡದ ಯಾವುದೇ ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢವಾಗಿಲ್ಲ. ಆದರೆ ಕೋಚ್ ಬಾಲಾಜಿ ಶನಿವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತಂಡದೊಂದಿಗೆ ಡಗೌಟ್ ನಲ್ಲಿ ಕುಳಿತಿದ್ದರು.