ಚೀನಾಕ್ಕೆ 8 ನಿಮಿಷದಲ್ಲೇ ತಕ್ಕ ಪಾಠ; ಭಾರತದ ವಾಯುಪಡೆ ಅದೆಷ್ಟು ಬಲಿಷ್ಠ ಗೊತ್ತಾ?
ಭಾರತೀಯ ಸೇನಾಪಡೆಗೂ 60 ದಿನಗಳ ಕಾಲ ಅಲರ್ಟ್ ಆಗಿರಲು ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದೆ.
Team Udayavani, Jun 29, 2020, 4:21 PM IST
ನವದೆಹಲಿ: ಗಡಿ ಕ್ಯಾತೆ ತೆಗೆದು ಸಂಘರ್ಷಕ್ಕೆ ಇಳಿದಿದ್ದ ಚೀನಾ ಇದೀಗ ಲಡಾಖ್ ನ ಗಾಲ್ವಾನ್ ಪ್ರದೇಶದಲ್ಲಿ ತನ್ನ ಸೇನೆಯ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ. ಮತ್ತೊಂದೆಡೆ ಭಾರತೀಯ ವಾಯುಪಡೆ ಕೂಡಾ ಅಲರ್ಟ್ ಆಗಿದ್ದು ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ ಎಸಿ) ಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.
ಭಾರತ ಮತ್ತು ಚೀನಾ ನಡುವೆ ಸಂಘರ್ಷ ಆರಂಭಗೊಂಡ ದಿನದಿಂದ ಭಾರತದ ವಾಯುಪಡೆ ತನ್ನ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳತೊಡಗಿದ್ದು, ಇದೀಗ ಭಾರತದ ವಾಯುಪಡೆ ಆಕಾಶದಲ್ಲೇ ಸನ್ನದ್ಧವಾಗಿ ಭಾರತೀಯ ಪಡೆಯನ್ನು ರಕ್ಷಿಸಿಕೊಳ್ಳುವ ವ್ಯೂಹ ರಚಿಸಿದ್ದು, ಶತ್ರುಪಡೆಯನ್ನು 8 ನಿಮಿಷದಲ್ಲೇ ಪ್ರಬಲ ದಾಳಿ ನಡೆಸಿ ಬುದ್ಧಿ ಕಲಿಸುವ ಸಾಮರ್ಥ್ಯ ಹೊಂದಿರುವುದಾಗಿ ವರದಿ ವಿವರಿಸಿದೆ.
ಭಾರತದ ಹೆಲಿಕಾಪ್ಟರ್ ಲಡಾಖ್ ನ ಕಠಿಣ ಭೌಗೋಳಿಕ ಪ್ರದೇಶದ ಪರ್ವತ ಶ್ರೇಣಿಯ ಕಿರಿದಾದ ಪ್ರದೇಶದ ಮೇಲೆಯೂ ನಿಂತು ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ಇಂಡಿಯಾ ಟಿವಿಗೆ ಲಭ್ಯವಾದ ಮಾಹಿತಿ ಪ್ರಕಾರ, ಭಾರತೀಯ ಸೇನಾಪಡೆಗೂ 60 ದಿನಗಳ ಕಾಲ ಅಲರ್ಟ್ ಆಗಿರಲು ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದೆ.
ಚೀನಾ ಗಡಿಭಾಗದಲ್ಲಿ ಪ್ರಸ್ತುತ ವಾಯುನೆಲೆಯನ್ನು ಸಕ್ರಿಯಗೊಳಿಸಿದೆ. ಲಡಾಖ್ ವಿರುದ್ಧವಾಗಿ ಚೀನಾದ ಪ್ರದೇಶದಲ್ಲಿ ಮೂರು ವಾಯುನೆಲೆಯನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಚೀನಾ ಪಾಕ್ ಆಕ್ರಮಿತ ಕಾಶ್ಮೀರದ ಸ್ಕರ್ದು ವಾಯುನೆಲೆ ಮೇಲೆ ಕಣ್ಣಿಟ್ಟಿರುವುದಾಗಿ ವರದಿ ವಿವರಿಸಿದೆ.
ಚೀನಾ ಹೋಟಾನ್ ನಲ್ಲಿ ಬೃಹತ್ ವಾಯುನೆಲೆ ನಿರ್ಮಾಣ ಮಾಡುತ್ತಿದೆ ಎಂದು ವರದಿ ಹೇಳಿದೆ. ಇದು 35ರಿಂದ 40 ವಿಮಾನ ನಿಲುಗಡೆಯ ನೆಲೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಜೆ.11, ಜೆ-8, ಬಾಂಬರ್ ವಿಮಾನಗಳು ಸೇರಿವೆ. ಅಷ್ಟೇ ಅಲ್ಲ ಪೂರ್ವ ಚೀನಾದ ಕಸ್ಗಾರ್ ಪ್ರಾಂತ್ಯದ ವಾಯುನೆಲೆಯ ಸಾಮರ್ಥ್ಯವನ್ನೂ ಹೆಚ್ಚಳ ಮಾಡಲು ಮುಂದಾಗಿದೆ.
ಇಂದು ಭಾರತ ಕೂಡಾ ಆಯಕಟ್ಟಿನ ಸ್ಥಳದಲ್ಲಿ ಸರ್ವಸನ್ನದ್ಧವಾಗಿದೆ!
ಇಂತಹ ಕಠಿಣ ಪರಿಸ್ಥಿತಿಯನ್ನು ಅರಿತಿರುವ ಭಾರತ ಇಂದು ಆಯ ಕಟ್ಟಿನ ಸ್ಥಳದಲ್ಲಿ ಸರ್ವಸನ್ನದ್ಧವಾಗಿದೆ. ಭಾರತದ ಯುದ್ಧ ವಿಮಾನಗಳು ಅತೀ ಎತ್ತರದ ಪ್ರದೇಶದಲ್ಲಿಯೂ ಲೀಲಾಜಾಲವಾಗಿ ಕಾರ್ಯಾಚರಿಸಬಲ್ಲದಾಗಿದೆ. ಭಾರತದ ವಾಯುಪಡೆಯಲ್ಲಿರುವ ಸುಖೋಯ್, ಮಿರಾಜ್, ಜಾಗ್ವಾರ್, ಮಿಗ್ ಲಡಾಖ್ ನ ಅತೀ ಎತ್ತರ ಪರ್ವತ ಶ್ರೇಣಿಯಲ್ಲಿ ಮಿಂಚಿನಂತೆ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ.
ಆದರೆ ಚೀನಾಕ್ಕೆ ಈ ಅವಕಾಶ ಇಲ್ಲ. ಯಾಕೆಂದರೆ ಸೂಕ್ತ ವಾಯುನೆಲೆ ಇಲ್ಲದ ಪರಿಣಾಮ ಪಾಕಿಸ್ತಾನದ ಸ್ಕರ್ದು ವಾಯುನೆಲೆಯ ಪ್ರಯೋಜನ ಪಡೆದುಕೊಳ್ಳುವ ಲೆಕ್ಕಚಾರ ಹಾಕಿಕೊಂಡಿದೆ. ಭಾರತ ಗಡಿಯಲ್ಲಿ ತನ್ನ ಸೇನೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ ಚೀನಾದ ದಾಳಿಯನ್ನು ಎದುರಿಸಲು ಭಾರತೀಯ ಸೇನೆ ಆಕಾಶ್ ಮಿಸೈಲ್ ಅನ್ನು ರವಾನಿಸಿದೆ. ಈ ಮಿಸೈಲ್ಸ್ ಗಳು ಶತ್ರುದೇಶದ ಯುದ್ಧ ವಿಮಾನ, ಡ್ರೋನ್ ಹಾಗೂ ಮಿಸೈಲ್ಸ್ ಅನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಬತ್ತಳಿಕೆಯಲ್ಲಿ ಬ್ರಹ್ಮೋಸ್ ಮಿಸೈಲ್ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ವಾಯುಪಡೆ ಹೊಂದಿರುವ ಭಾರತದ ಸೇನೆ ಚೀನಾ ದಾಳಿ ಎದುರಿಸಿ ತಕ್ಕಪಾಠ ಕಲಿಸಲು ಸಿದ್ಧವಾಗಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ