ಡಿಆರ್ಎಸ್ಗೆ ಮನವಿ ಬೇಡ: ಅಂಪೈರ್ರಿಂದಲೇ ಸಲಹೆ, ಅನಿಲ್ ಚೌಧರಿ ವಿವಾದ!
Team Udayavani, Oct 29, 2020, 4:09 PM IST
ದುಬೈ: ಈ ಘಟನೆಯನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ. ತಲೆ ಓಡದಿದ್ದರಿಂದ ನಡೆದಧ್ದೋ, ಉದ್ದೇಶಪೂರ್ವಕವಾಗಿಯೇ ಆಗಿಧ್ದೋ? ಅಂತೂ ಮಂಗಳವಾರ ಡೆಲ್ಲಿ ಮತ್ತು ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದಲ್ಲಿ ಅಂಪೈರ್ ಅನಿಲ್ ಚೌಧರಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಹೈದರಾಬಾದ್ನ ಬೃಹತ್ ಮೊತ್ತವನ್ನು ಡೆಲ್ಲಿ ಬೆನ್ನತ್ತುತ್ತಿತ್ತು. ಆಗ ಡೆಲ್ಲಿಯ ಆರ್.ಅಶ್ವಿನ್ ಕ್ರೀಸ್ನಲ್ಲಿದ್ದರು, ಸಂದೀಪ್ ಶರ್ಮ ಬೌಲಿಂಗ್ ಮಾಡುತ್ತಿದ್ದರು. ಆ ವೇಳೆ ಅಶ್ವಿನ್ ಹೊಡೆತವೊಂದು ಪ್ಯಾಡ್ಗೆ ಬಡಿಯಿತು. ಅಂಪೈರ್ ಔಟಲ್ಲ ಎಂದು ತೀರ್ಪಿತ್ತರು. ಆಗ ಚೌಧರಿ ತಮ್ಮ ಕೈಬೆರಳಿನ ನಲ್ಲಿ ಬಡಿದು, ಡಿಆರ್ಎಸ್ಗೆ ಮನವಿ ಮಾಡಬೇಡಿ, ಚೆಂಡು ಬ್ಯಾಟ್ಗೆ ಬಡಿದಿದೆ ಎಂದು ಹೈದರಾಬಾದ್ ಕ್ಷೇತ್ರರಕ್ಷಕರಿಗೆ ತಿಳಿಸಿದರು.
ಐಪಿಎಲ್ ನಿಯಮಗಳ ಪ್ರಕಾರ ಈ ವಿಚಾರದಲ್ಲಿ ಅಂಪೈರ್ ಸಹಾಯವನ್ನು ಆಟಗಾರರೂ ಕೇಳುವಂತಿಲ್ಲ, ಅಂಪೈರ್ ಕೂಡಾ ಕೊಡುವಂತಿಲ್ಲ. ಆದರೆ ಅಂಪೈರ್ ಅನಿಲ್ ಚೌಧರಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದರೂ ಅಥವಾ ಅಚಾತುರ್ಯದಿಂದ ನಡೆಯಿತೋ ತಿಳಿದಿಲ್ಲ. ಅಂದಹಾಗೆ ಆ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿಯಾಗಿ ಜಯ ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ