ಸುಂದರಿಯೊಂದಿಗೆ ಮದುವೆ ಮತ್ತು ಮೋಕ್ಷ


Team Udayavani, Jan 20, 2021, 6:45 AM IST

ಸುಂದರಿಯೊಂದಿಗೆ ಮದುವೆ ಮತ್ತು ಮೋಕ್ಷ

ಮೋಕ್ಷದ ದಾರಿಯಲ್ಲಿ ನಡೆಯುವುದು ಹೇಗೆ, ಜ್ಞಾನೋದಯ ಹೇಗಾಗುತ್ತದೆ, ಗುರುವಿನ ಕೆಲಸವೇನು ಎಂಬುದನ್ನು ಸುಂದರವಾಗಿ ವಿವರಿಸುವ ಒಂದು ಕತೆ ಪುರಾತನ ಚೀನೀ ಬೌದ್ಧರಲ್ಲಿದೆ.

ಒಂದು ಪಟ್ಟಣ. ಒಂದು ದಿನ ಮುಂಜಾನೆ ಒಬ್ಬಳು ಸುಂದರಿ ಅಲ್ಲಿ ಪ್ರತ್ಯಕ್ಷಳಾದಳು. ಆಕೆ ಎಲ್ಲಿಂದ ಬಂದಳು, ಊರ್ಯಾವುದು, ಕುಲಗೋತ್ರ ಯಾರಿಗೂ ತಿಳಿದಿರಲಿಲ್ಲ. ಆಕೆ ಮಾತ್ರ ಪರಮ ಸುಂದರಿ. ಆಕೆಯ ಸುತ್ತ ಇಡೀ ಪಟ್ಟಣದವರು ಜಮಾಯಿಸಿದರು. ಯುವಕರು ನಾ ಮುಂದು ತಾಮುಂದು ಎಂದು ಆಕೆಯನ್ನು ವರಿಸಲು ಹಾತೊರೆ ದರು. ಮುನ್ನೂರು ಮಂದಿ ಯೌವ್ವನಿಗರು ಆಕೆಯನ್ನು ವಿವಾಹ ವಾಗಲು ಸಿದ್ಧರಿದ್ದರು.

ಯುವತಿ ಹೇಳಿದಳು, “ನೀವು ಮುನ್ನೂರು ಮಂದಿ ಇದ್ದೀರಿ. ನಾನೊಬ್ಬಳೆ. ಯಾರಾದರೂ ಒಬ್ಬರನ್ನು ಮದುವೆಯಾಗಲು ಸಾಧ್ಯ. ಹಾಗಾಗಿ 24 ತಾಸು ಸಮಯ ಕೊಡುತ್ತೇನೆ. ಯಾರು ಬುದ್ಧನ ಪದ್ಮಸೂತ್ರವನ್ನು ನಾಳೆ ಇದೇ ಸಮಯದ ಒಳಗೆ ಕಂಠಸ್ಥ ಮಾಡಿಕೊಂಡು ಬರುತ್ತೀರೋ ಅವರನ್ನು ವರಿಸುತ್ತೇನೆ’. ಎಲ್ಲರೂ ಮನೆಗೆ ಹಿಂದಿರು ಗಿದರು. ಪೆಟ್ಟಿಗೆಯಿಂದ ಪದ್ಮಸೂತ್ರ ಗ್ರಂಥ ಹೊರತೆಗೆದು ಬಾಯಿಪಾಠ ಆರಂಭಿಸಿದರು.

ಮರುದಿನ ಸಂಖ್ಯೆ ಹತ್ತಕ್ಕೆ ಇಳಿದಿತ್ತು. ಯುವತಿ ಅವರಿಂದ ಪದ್ಮಸೂತ್ರ ಕೇಳಿದಳು. ಬಳಿಕ, “ಸಮಸ್ಯೆ ಈಗಲೂ ಬಗೆಹರಿದಿಲ್ಲ. ನೀವು ಹತ್ತು ಮಂದಿ, ನಾನೊಬ್ಬಳೆ. ಇನ್ನೂ 24 ತಾಸು ಸಮಯ ಕೊಡುತ್ತೇನೆ. ಯಾರು ನಾಳೆಯೊಳಗೆ ಪದ್ಮಸೂತ್ರವನ್ನು ವ್ಯಾಖ್ಯಾನಿಸಬಲ್ಲರೋ ಅವರೊಂದಿಗೆ ನನ್ನ ವಿವಾಹ’. ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿದರು. ಉಣ್ಣದೆ, ನಿದ್ರಿಸದೆ ಪದ್ಮಸೂತ್ರವನ್ನು ಜೀರ್ಣಿಸಿಕೊಂಡರು. ಮೂವರು ಇದರಲ್ಲಿ ಯಶಸ್ವಿಯಾದರು.

ಮರುದಿನ ಅವರು ಯುವತಿಯ ಮುಂದೆ ಯಶಸ್ವಿಯಾಗಿ ಪದ್ಮಸೂತ್ರವನ್ನು ವಾಖ್ಯಾನಿಸಿದರು. ಎಲ್ಲವನ್ನೂ ಕೇಳಿದ ಬಳಿಕ ಆ ಸುಂದರಿ, “ಸಮಸ್ಯೆ ಮುಂದು ವರಿದಿದೆ. ನಾಳೆ ಇದೇ ಸಮಯದ ಒಳಗೆ ಯಾರು ಪದ್ಮಸೂತ್ರವನ್ನು ಹೃದ್ಗತಗೊಳಿಸಿ ಕೊಳ್ಳುವರೋ ಅವರ ಕೈಹಿಡಿಯುವೆ. ನೀವು ಇದುವರೆಗೆ ಬಹಳ ಕಷ್ಟಪಟ್ಟಿದ್ದೀರಿ, ಒಳ್ಳೆಯದೇ. ಇದುವರೆಗೆ ನೀವು ಬಾಯಿಪಾಠ ಮಾಡಿದಿರಿ, ವ್ಯಾಖ್ಯಾನಿ ಸಿದಿರಿ. ಆದರೆ ಪದ್ಮಸೂತ್ರ ರಕ್ತಗತವಾಗ ಬೇಕು. ನಿಮ್ಮ ಕಣಕಣದಲ್ಲಿ ಅದರ ಸುವಾಸನೆ ಉಕ್ಕಬೇಕು’ ಎಂದಳು.

ಮೂವರೂ ಸಾಕಷ್ಟು ಶ್ರಮಿಸಿದರು. ಆದರೆ ಮರುದಿನ ಒಬ್ಬ ಯುವಕ ಮಾತ್ರ ಆಕೆಯಿದ್ದಲ್ಲಿಗೆ ಬಂದ. ಆತನ ಆಗಮನವೇ ಆತ ನಲ್ಲಾದ ಬದಲಾ ವಣೆಯನ್ನು ಸಾರಿಹೇಳು ತ್ತಿತ್ತು. ಆ ಯುವಕನ ಮುಖ ಅಪೂರ್ವ ತೇಜಸ್ಸಿನಿಂದ ಕೂಡಿತ್ತು.

ಯುವತಿ ಅವನ ಕೈಹಿಡಿದು ಪಟ್ಟಣದ ಹೊರಗೆ ತನ್ನ ಮನೆಗೆ ಕರೆದೊಯ್ದಳು. ಆ ಮನೆ ಅಲೌಕಿಕವಾಗಿತ್ತು. ಸ್ವರ್ಗಸದೃಶ ವಾಗಿತ್ತು. ಮನೆಯ ಹೆಬ್ಟಾಗಿಲಿನಲ್ಲಿ ಯುವತಿಯ ಹೆತ್ತವರು ನಿಂತಿದ್ದರು. ಅವರೊಡನೆ ಮಾತನಾಡುತ್ತ ಯುವಕ ಸ್ವಲ್ಪ ಹೊತ್ತು ನಿಂತ, ಯುವತಿ ಮನೆಯೊಳಗೆ ಹೊಕ್ಕಳು. ಮಾತುಕತೆಯ ಬಳಿಕ ಅವಳ ಹೆತ್ತವರು ಯುವಕನಿಗೆ ಹೇಳಿದರು, “ಒಳಗೆ ಹೋಗು, ಅವಳು ಕಾಯುತ್ತಿರಬಹುದು…’

ಯುವಕ ಒಳಹೊಕ್ಕ. ಆದರೆ ಅಲ್ಲಿ ಯಾರೂ ಇರಲಿಲ್ಲ. ಹಿಂದಿನ ಬಾಗಿಲು ತೆರೆದಿತ್ತು. ಆಕೆ ಎಲ್ಲೋ ಹೋಗಿದ್ದಂತೆ ಪಾದದ ಅಚ್ಚುಗಳಿದ್ದವು. ಯುವಕ ಅದನ್ನನುಸರಿಸಿ ನಡೆದ. ಪಥ ಒಂದು ನದಿಯ ದಂಡೆಯಲ್ಲಿ ಕೊನೆಯಾಗಿತ್ತು. ಅಲ್ಲೂ ಯುವತಿ ಇರಲಿಲ್ಲ. ಹೆಜ್ಜೆಯ ಅಚ್ಚುಗಳು ಅಲ್ಲಿ ಕೊನೆಯಾಗಿದ್ದವು. ಅಲ್ಲಿ ಯುವತಿಯ ಎರಡು ಸ್ವರ್ಣ ಪಾದರಕ್ಷೆಗಳಿದ್ದವು.

ಯುವಕನಿಗೆ ಅಚ್ಚರಿ. ಆತ ಹಿಂದಿರುಗಿ ನೋಡಿದ. ತಾನು ನಡೆದು ಬಂದಿದ್ದ ದಾರಿ, ಮನೆ ಎಲ್ಲವೂ ಮಾಯವಾಗಿದ್ದವು. ಮುಂದೆ ತಿರುಗಿದರೆ ನದಿ, ಪಾದರಕ್ಷೆಗಳೂ  ಮಾಯ. ಎಲ್ಲೆಡೆಯೂ ಅನಂತ ಶೂನ್ಯ ಮತ್ತು ಜ್ಞಾನೋದಯದ ನಗು ಕೇಳಿಸುತ್ತಿತ್ತು. ಯುವಕನಲ್ಲೂ ಮೆಲು ನಗು ಮೂಡಿತು.

ಜ್ಞಾನಪಥ, ಮೋಕ್ಷಪಥದಲ್ಲಿ ನಮ್ಮನ್ನು ಗುರು ಮುನ್ನಡೆಸುವುದು ಹೀಗೆ.

(ಸಾರ ಸಂಗ್ರಹ)

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.