ಪಂಚಭೂತಗಳೊಂದಿಗೆ ಒಡನಾಡುವ ವಾನಪ್ರಸ್ಥ
Team Udayavani, Nov 30, 2020, 8:32 AM IST
ಸಾಂದರ್ಭಿಕ ಚಿತ್ರ
ಈ ಭೂಮಿಗೆ ಮರ್ತ್ಯಲೋಕ ಎಂಬ ಹೆಸರೂ ಇದೆ. ಇಲ್ಲಿ ಜೀವ ತಳೆಯುವ ಎಲ್ಲರಿಗೂ ಮೃತ್ಯು ಖಚಿತ ಎಂಬುದನ್ನು ಹೇಳುವ, ನೆನಪಿಸುವ ಹೆಸರು ಅದು. ಇಲ್ಲಿ ಹುಟ್ಟುವ ಯಾರೂ, ಯಾವುದೂ ಶಾಶ್ವತ ವಲ್ಲ; ಅಸುವನ್ನು ನೀಗಿ ಭೂಮಿಗೆ ಮರಳ ಬೇಕು ಎಂಬರ್ಥವಿದೆ “ಮರ್ತ್ಯಲೋಕ’ಕ್ಕೆ.
ಜನರು ಐಹಿಕ ಬದುಕಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಬಳಿಕ “ವಾನಪ್ರಸ್ಥ’ಕ್ಕೆ ತೆರಳುವ ಕಥೆಗಳನ್ನು ಪುರಾಣ ಗಳಲ್ಲಿ ಕೇಳಿದ್ದೇವೆ. ನಾಲ್ಕು ಆಶ್ರಮ ಪರಿಕಲ್ಪನೆ ಗಳಲ್ಲಿ ಇದೂ ಒಂದು. ವಾನಪ್ರಸ್ಥ ಎಂದರೆ ಅರಣ್ಯದಲ್ಲಿ ವಾಸವಾಗಿರುವುದು ಎಂಬರ್ಥ. ಅದುವರೆಗೆ ಲೌಕಿಕದ ಜಂಜಡಗಳಲ್ಲಿ ಮುಳುಗಿದ್ದ ದೇಹ ಮತ್ತು ಮನಸ್ಸಿಗೆ “ಈ ಜೀವನ ಶಾಶ್ವತವಲ್ಲ’ ಎಂಬುದನ್ನು ನೆನಪಿಸಿ ಕೊಡುವ ಘಟ್ಟ ಇದು. ವಾನಪ್ರಸ್ಥವು ಅರಣ್ಯ ವಾಸವೇ ಆಗಿರಬೇಕಾಗಿಲ್ಲ. ನಾಲ್ಕು ಗೋಡೆ ಗಳಿಂದ ಹೊರಗೆ ಜೀವನ ನಡೆಸುವುದು ವಾನಪ್ರಸ್ಥ.
ಮನೆ ಎನ್ನುವುದು ಭದ್ರವಾದ ಒಂದು ಪೆಟ್ಟಿಗೆ. ಅದರೊಳಗೆ ಜೀವಿ ಸುವುದು ಅಮರ್ತ್ಯರು ಎಂಬ ಸುಳ್ಳು ನಂಬಿಕೆಯನ್ನು ಸೃಷ್ಟಿಸುತ್ತದೆ. ಮನೆಯ ನಾಲ್ಕು ಗೋಡೆಗಳ ಹೊರಗೆ ಜೀವಿಸುವುದು ಎಂದರೆ ಪಂಚಭೂತಗಳಿಗೆ ನಿಕಟ ವಾಗಿರುವುದು. ಅದು ಈ ದೇಹ ಮತ್ತು ಮನಸ್ಸಿಗೆ “ನೀನು ಚಿರಂಜೀವಿಯಲ್ಲ’ ಎಂಬುದನ್ನು ನೆನಪು ಮಾಡಿಕೊಡುತ್ತದೆ. ವಾನಪ್ರಸ್ಥದ ಮೂಲ ಆಶಯ ಇದು.
ನಾವು ಮನೆಯನ್ನು ಕಟ್ಟಿಕೊಳ್ಳಲಾರಂಭಿ ಸಿದ್ದು ಅಮರ್ತ್ಯರಾಗಿ ಉಳಿಯುವುದಕ್ಕಲ್ಲ. ನಮ್ಮ ಸಂತತಿ ಅಂದರೆ ನಮಗೆ ಮಕ್ಕಳಾದಾಗ ಕೆಲವು ವರ್ಷಗಳ ಕಾಲ ಅವರಿಗೆ ಸುರಕ್ಷಿತ ವಾತಾವರಣ, ಭದ್ರತೆ ಅಗತ್ಯವಾಗಿರುತ್ತದೆ. ಸಂತತಿಯು ಪ್ರಬುದ್ಧವಾಗುವ ತನಕ, ಅಂದರೆ ಹೊರ ಪ್ರಪಂಚದಲ್ಲಿ ಸ್ವತಂತ್ರವಾಗಿ ಬದುಕುಳಿಯುವುದಕ್ಕೆ ಅಗತ್ಯವಾದ ಶಕ್ತಿ ಸಾಮರ್ಥ್ಯಗಳನ್ನು ಗಳಿಸುವ ತನಕ ಅದನ್ನು ರಕ್ಷಿಸುವ ಪ್ರವೃತ್ತಿ ಎಲ್ಲ ಜೀವಸಂಕುಲ ಗಳಲ್ಲಿಯೂ ಕಂಡುಬರುತ್ತದೆ. ಹಕ್ಕಿ ಗೂಡು ಕಟ್ಟುವುದು ಇದಕ್ಕಾಗಿ. ನಾವು ಅಂದರೆ ಮನುಷ್ಯರೂ ಮನೆ ಕಟ್ಟಿಕೊಳ್ಳಲು ತೊಡಗಿದ್ದು ಇದಕ್ಕಾಗಿಯೇ.
ಇವತ್ತು ಏನಾಗಿದೆ ಎಂದರೆ, ಎಷ್ಟು ಸಾಧ್ಯವೋ ಅಷ್ಟು ಭದ್ರವಾದ ಮನೆಗಳನ್ನು ಕಟ್ಟಿಕೊಳ್ಳಲಾರಂಭಿಸಿದ್ದೇವೆ. ಇದರಿಂದ ಬೇರೂರುವುದು ನಾವು ಶಾಶ್ವತ ಎಂಬ ಸುಳ್ಳು. ಇದು ಸುಳ್ಳು ಎಂಬುದು ಮನಸ್ಸಿಗೆ ಮಾತ್ರ ಅಲ್ಲ; ಎಲ್ಲ ಆಯಾಮಗಳಿಂದಲೂ ಮನ ವರಿಕೆ ಆಗಬೇಕಾದರೆ ನಾಲ್ಕು ಗೋಡೆಗಳಿಂದ ಹೊರಗೆ ಬದುಕಬೇಕು. ಇದರರ್ಥ ನಾಳೆ ಯಿಂದ ಮನೆಗಳನ್ನು ಕೆಡವಿ ಹಾಕಿ ಬಟಾಬಯಲಿನಲ್ಲಿ ಜೀವಿಸಬೇಕು ಎಂದಲ್ಲ. ನಾವು ಪ್ರಕೃತಿಗೆ, ಪಂಚಭೂತಗಳಿಗೆ, ಭೂಮಿ ತಾಯಿಗೆ ನಿಕಟವಾಗಿ ಬದುಕಿದಾಗ ಮಾತ್ರ ಈ ಸತ್ಯ ಮನವರಿಕೆಯಾಗಲು ಸಾಧ್ಯ. ವಾನಪ್ರಸ್ಥ ಎಂದರೆ ಇದೇ.
ಭೂಮಿ ಮತ್ತು ಪಂಚ ಭೂತಗಳಿಗೆ ಹತ್ತಿರವಾಗಿ ಜೀವಿಸುವುದರಿಂದ ದೇಹ ಮತ್ತು ಮನಸ್ಸಿಗೆ ಕ್ಷಣಕ್ಷಣಕ್ಕೂ ತನ್ನ ನಶ್ವರತೆ ನೆನಪಾಗುತ್ತ ಇರುತ್ತದೆ. ಈ ಜೀವನ ನೀರ ಮೇಲಿನ ಒಂದು ಗುಳ್ಳೆ ಯಂತೆ ಎಂಬುದು ಗಾಢವಾಗಿ ಮನದಟ್ಟಾಗುತ್ತದೆ. ಭೂಮಿ ನಮ್ಮನ್ನು ಪೊರೆಯುವ ತಾಯಿ ಮತ್ತು ಅಂತಿಮವಾಗಿ ನಾವೆಲ್ಲ ಶಾಶ್ವತ ವಿಶ್ರಾಂತಿ ಪಡೆಯುವ ಏಕೈಕ ಮಾತೆ. ಇದು ದೇಹ ಮತ್ತು ಮನಸ್ಸಿಗೆ ಚೆನ್ನಾಗಿ ಮನವರಿಕೆ ಆಗಿದ್ದರೆ ಮಾತ್ರ ವಿನಮ್ರವಾದ, ಸದುಪಯೋಗಿ ಯಾದ, ಹೃತೂ³ರ್ವಕವಾದ ಬದುಕನ್ನು ಬದುಕುವುದು ಸಾಧ್ಯವಾಗುತ್ತದೆ. ಇದಕ್ಕಾಗಿ “ವಾನಪ್ರಸ್ಥ’ ಅಗತ್ಯ.
ವಾನಪ್ರಸ್ಥಕ್ಕೆ ಹೋಗುವುದು ಎಂದರೆ ಅರಣ್ಯಕ್ಕೆ ತೆರಳುವುದು, ಸಾಯಲಿಕ್ಕೆ ಹೋಗು ವುದು ಎಂದರ್ಥವಲ್ಲ. ನಾವು ಮರ್ತ್ಯರು ಎಂಬುದನ್ನು ಮನವರಿಕೆ ಮಾಡಿಕೊಳ್ಳುವು ದಕ್ಕಾಗಿ ಪ್ರಕೃತಿ, ಭೂಮಿ, ಪಂಚಭೂತಗಳಿಗೆ ನಿಕಟವಾಗಿ ಬದುಕುವುದು ಎಂಬರ್ಥ.
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ :
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು [email protected]ಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲವಂತೆ
ಫೆ. 1ರಿಂದ 9 ಮತ್ತು 11ನೇ ತರಗತಿಗಳೂ ಆರಂಭ : ಸಚಿವ ಸುರೇಶ್ ಕುಮಾರ್
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಈ ವಿದ್ಯಾರ್ಥಿನಿ ಏಕ್ ದಿನ ಕಾ ಸಿಇಓ !
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ