ಉಪೇಕ್ಷಾ ಎನ್ನುವ ಮಧ್ಯಮ ಮಾರ್ಗ


Team Udayavani, Jan 21, 2021, 6:43 AM IST

ಉಪೇಕ್ಷಾ ಎನ್ನುವ  ಮಧ್ಯಮ ಮಾರ್ಗ

ಜೀವನದ ಬಹುತೇಕ ಎಲ್ಲ ಸಂದರ್ಭಗಳಲ್ಲಿ ನಮ್ಮ ಆಯ್ಕೆಗಳು ಬಹಳ ಸರಳ ಮತ್ತು ಸುಲಭವಾಗಿರುತ್ತವೆ. ತುಂಬಾ ಸಲೀಸಾಗಿ ತೆಗಳುತ್ತೇವೆ, ನಿಂದಿಸುತ್ತೇವೆ, ಹೊಗಳುತ್ತೇವೆ, “ಇದು ಕೆಟ್ಟದು, ಇದು ಒಳ್ಳೆಯದು’ ಎನ್ನುತ್ತೇವೆ. ನಾವು ಮಾತ್ರ ಅಲ್ಲ, ಈ ಲೋಕದ ಬಹುತೇಕ ಮಂದಿಯ ವ್ಯಸನವಿದು. ಬಹಳ ಯಾಂತ್ರಿಕವಾಗಿ ನಡೆಯುವ ಪ್ರಕ್ರಿಯೆ ಇದು.

ಏನನ್ನು ಕಂಡರೂ ಅರ್ಥ ಮಾಡಿ ಕೊಳ್ಳದೆ, ಅಪ್ರಜ್ಞಾಪೂರ್ವಕವಾಗಿ ನಿರ್ಣಯ ತೆಗೆದುಕೊ ಳ್ಳುತ್ತೇವೆ, ತೀರ್ಮಾನಿ ಸಿಬಿಡುತ್ತೇವೆ. ಒಂದು ಹೂವು ಕಂಡಿತು ಎಂದಿಟ್ಟುಕೊಳ್ಳಿ, “ಬಹಳ ಚೆನ್ನಾಗಿದೆ’ ಎಂದು ಹೇಳುತ್ತೇವೆ ಅಥವಾ ಮನಸ್ಸಿನಲ್ಲಾದರೂ ಹಾಗೆ ಅಂದುಕೊಳ್ಳು ತ್ತೇವೆ. ರಸ್ತೆಯ ಮೇಲೆ ಬೀದಿನಾಯಿ ಎದುರಾಯಿತು, “ಕಾಟು ನಾಯಿ’ ಎಂದು ಬೈದು ಬಿಡುತ್ತೇವೆ. ತೀರ್ಮಾನ, ನಿರ್ಧಾರಗಳು ಮೂಡುವುದು ಹೀಗೆ ಜನ್ಮಜಾತ ಶಾಪದಂತೆ. ತಪ್ಪು-ಒಪ್ಪುಗಳನ್ನು ಅಳೆದು ತೂಗಿ, ಆಲೋಚಿಸಿ, ಪ್ರಜ್ಞಾ ಪೂರ್ವಕವಾಗಿರುವುದು ನಮಗೆ ಗೊತ್ತೇ ಇಲ್ಲ. ನಾಣ್ಯದ ಎರಡೂ ಮುಖಗಳ ಅರಿವನ್ನು ಹೊಂದಿ ಮಧ್ಯಮ ಮಾರ್ಗ ವನ್ನು ತುಳಿಯುವುದು ನಮ್ಮಿಂದ ಸಾಧ್ಯವೇ ಇಲ್ಲ.

ಝೆನ್‌ ಗುರು ಛುವಾಂಗ್‌ ತ್ಸು ಅವರ ಮಠಕ್ಕೆ ಒಂದು ಬಾರಿ ಒಬ್ಬ ಯುವಕ ಬಂದ. ಗುರುಗಳ ಬಳಿ ಉಭಯ ಕುಶಲೋಪರಿ ನಡೆದ ಬಳಿಕ ಅವರ ಪ್ರೀತ್ಯರ್ಥವಾಗಿ ಒಂದು ತಾಸು ಸುಶ್ರಾವ್ಯ ವಾಗಿ ಬಾನ್ಸುರಿ ನುಡಿಸಿದ. ಆಮೇಲೆ ಆಶೀರ್ವಾದ ಪಡೆದು ಹೊರಟುಹೋದ.

ಮರುದಿನ ಛುವಾಂಗ್‌ ತ್ಸು ಅವರ ಬಳಿಗೆ ಊರಿನ ಒಬ್ಟಾತ ಬಂದು ಕಿವಿಯಲ್ಲಿ ಪಿಸು ಮಾತಿನಲ್ಲಿ, “ನಿನ್ನೆ ಮಠಕ್ಕೆ ಒಬ್ಬ ಬಂದಿದ್ದ ಎಂದು ಕೇಳಿದೆ. ಅವನೊಬ್ಬ ದೊಡ್ಡ ವಂಚಕ. ಊರಿನಲ್ಲಿ ಹಲವು ಕೃತ್ಯ ಎಸಗಿದ್ದಾನೆ…’ ಎಂದೆಲ್ಲ ನೂರು ದೂರುಗಳನ್ನು ಹೇಳಿದ.

ಛುವಾಂಗ್‌ ತ್ಸು ಮೆಲುದನಿಯಲ್ಲಿ ಹೇಳಿದ, “ಆದರೆ ಅವನು ಬಹಳ ಚೆನ್ನಾಗಿ ಬಾನ್ಸುರಿ ನುಡಿಸುತ್ತಾನೆ. ನಿನ್ನೆ ನಾನೇ ಕಿವಿಯಾರೆ ಕೇಳಿದ್ದೇನೆ…’

ಅಷ್ಟು ಹೊತ್ತಿಗೆ ಊರಿನ ಇನ್ನೊಬ್ಬ ಬಂದ. ಗುರುಗಳ ಕುಶಲ ವಿಚಾರಿಸಿದ ಬಳಿಕ, “ನಿನ್ನೆ ನಮ್ಮವನೊಬ್ಬ ಇಲ್ಲಿಗೆ ಬಂದಿದ್ದನಂತಲ್ಲ? ಬಹಳ ಒಳ್ಳೆಯ ಹುಡುಗ, ಈ ಆಸುಪಾಸಿನಲ್ಲಿ ಅವನಷ್ಟು ಒಳ್ಳೆಯ ಬಾನ್ಸುರಿ ವಾದಕ ಇನ್ನೊಬ್ಬ ಇಲ್ಲ. ಎಷ್ಟು ಚೆಂದ ನುಡಿಸುತ್ತಾನೆ ಅಂತೀರಿ…’ ಎಂದು ಹೊಗಳಿದ.

ಛುವಾಂಗ್‌ ತ್ಸು, “ಆದರೆ ಅವನು ಬಹು ದೊಡ್ಡ ವಂಚಕನಂತೆ’ ಎಂದರು.

ಯುವಕನ ಬಗ್ಗೆ ದೂರು ಹೇಳಿದವನು, ಹೊಗಳಿದವನು – ಇಬ್ಬರೂ ಅಲ್ಲೇ ಇದ್ದರು. ಇಬ್ಬರೂ ಏಕಸ್ವರದಲ್ಲಿ “ನಿಮ್ಮ ಮಾತಿನ ಅರ್ಥವೇನು’ ಎಂದು ಪ್ರಶ್ನಿಸಿದರು.

ಛುವಾಂಗ್‌ ತ್ಸು ಹೇಳಿದರು, “ನಾನು ನಿಮ್ಮಿಬ್ಬರ ಹೇಳಿಕೆಗಳನ್ನೂ ಸ್ವೀಕರಿಸಿದ್ದೇನೆ. ತೀರ್ಮಾನ ತೆಗೆದುಕೊಳ್ಳುವುದಕ್ಕೆ ನಾನ್ಯಾರು? ಅವನು ಒಬ್ಬ ವಂಚಕ, ಒಬ್ಬ ಒಳ್ಳೆಯ ಬಾನ್ಸುರಿ ವಾದಕ – ಎರಡೂ ಹೌದಾಗಿರಬಹುದು. ಅವನು ಹೇಗಿ ದ್ದಾನೆಯೋ ಹಾಗೆಯೇ ಇದ್ದಾನೆ ಮತ್ತು ಇರುತ್ತಾನೆ. ನನ್ನ ತೀರ್ಮಾನದಿಂದ ಅದಕ್ಕೇನೂ ಭಂಗವಾಗುವುದಿಲ್ಲ. ನನ್ನ ಪಾಲಿಗೆ ಅವನು ಉತ್ತಮನೂ ಅಲ್ಲ, ಅಧಮನೂ ಅಲ್ಲ…’

ತೀರ್ಪುಗಳನ್ನು ತೆಗೆದುಕೊಳ್ಳದೆ ಇರಲು ಪ್ರಯತ್ನಿಸೋಣ; ಇದು ಕಷ್ಟಸಾಧ್ಯ, ಆದರೂ ಪ್ರಯತ್ನಿಸಬೇಕು. ನಮಗೆ ದ್ವೇಷ, ಸಿಟ್ಟು, ಕ್ರೋಧದ ಅನುಭವವಾದಾಗ, ದುಃಖ ಉಕ್ಕಿದಾಗ, ಸಂತೋಷ ತುಂಬಿಬಂದಾಗ… ಏನೇ ಭಾವನೆ ಇರಲಿ, ಒಂದೋ ಆ ತುದಿ ಅಥವಾ ಈ ತುದಿ ಎಂಬ ನಿಲುವು ಬೇಡ. ಸಮತೋಲನ ಇರಲಿ. ಮಧ್ಯಮ ಮಾರ್ಗದಲ್ಲಿ ನಡಿಗೆ ಇರಲಿ.

ಬೌದ್ಧರಲ್ಲಿ ಇದನ್ನು “ಉಪೇಕ್ಷಾ’ ಎನ್ನುತ್ತಾರೆ. “ಕೆಟ್ಟದು’, “ಒಳ್ಳೆಯದು’ – ಎರಡನ್ನೂ ತೀರ್ಮಾನಿಸುವುದಿಲ್ಲ. ಮಧ್ಯಮ ಮಾರ್ಗದಲ್ಲಿರುತ್ತೇವೆ. ಯಾವುದರ ಜತೆಗೂ ಗುರುತಿಸಿ ಕೊಳ್ಳುವುದಿಲ್ಲ. ಆಗ ಒಂದು ಪಾರದರ್ಶಕ ಪರಿವರ್ತನೆ ಉಂಟಾಗುತ್ತದೆ. ಅದು ನಾವು ಸಾಧಿಸಬೇಕಾದ ಪ್ರೌಢಿಮೆ.

(ಸಾರ ಸಂಗ್ರಹ)

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.