ಸರ್ವಶ್ರೇಷ್ಠ ಪೆನ್ಸಿಲ್‌ನಂತಾಗಲಿ ನಮ್ಮ ಬದುಕು


Team Udayavani, Sep 29, 2020, 6:17 AM IST

ಸರ್ವಶ್ರೇಷ್ಠ ಪೆನ್ಸಿಲ್‌ನಂತಾಗಲಿ ನಮ್ಮ ಬದುಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಯೋವೃದ್ಧ ಪೆನ್ಸಿಲ್‌ ತಯಾರಕರೊಬ್ಬರು ಒಂದು ಹೊಸ ಪೆನ್ಸಿಲ್‌ ತಯಾರಿಸಿದರು. ಅದನ್ನು ಪ್ಯಾಕ್‌ ಮಾಡಿ ಮಾರುಕಟ್ಟೆಗೆ ಕಳುಹಿಸುವ ಮುನ್ನ ಅದನ್ನು ಕೈಯಲ್ಲಿ ಹಿಡಿದುಕೊಂಡು ಕ್ಷಣಕಾಲ ದಿಟ್ಟಿಸಿದರು.

ಆ ಬಳಿಕ ತನ್ನ ಮಗುವೋ ಎಂಬ ಹಾಗೆ ಆ ಪೆನ್ಸಿಲ್‌ಗೆ ಕೆಲವು ಹಿತವಾಕ್ಯಗಳನ್ನು ಹೇಳಿದರು.

‘ನೀನು ಐದು ಪರಮ ಸತ್ಯಗಳನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು’ ವೃದ್ಧ ಪೆನ್ಸಿಲ್‌ ತಯಾರಕ ಹೇಳಿದರು.
“ಇದು ಹೊರಜಗತ್ತಿಗೆ ಕಳುಹಿಸಿಕೊಡುವುದಕ್ಕೆ ಮುನ್ನ ನಿನ್ನನ್ನು ಸೃಷ್ಟಿಸಿದ ನಾನು ಹೇಳುವ ಬುದ್ಧಿವಾದ. ಇವನ್ನು ಯಾವಾಗಲೂ ನೆನಪಿನಲ್ಲಿ ಇರಿಸಿಕೊಂಡರೆ ನೀನು ಸದಾ ಸರ್ವಶ್ರೇಷ್ಠ ಪೆನ್ಸಿಲ್‌ ಆಗಿರುತ್ತೀ’.

“ಮೊತ್ತಮೊದಲನೆಯದಾಗಿ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ್ದು ಎಂದರೆ ಉತ್ಕೃಷ್ಟ ಬರಹಗಾರನ ಕೈಗಳಿಗೆ ಶರಣಾದಾಗ ಮಾತ್ರ ನಿನಗೆ ಹಲವು ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಆಗಾಗ ನಿನ್ನನ್ನು ಮೊನಚುಗೊಳಿಸುತ್ತಾರೆ. ಆಗ ನಿನಗೆ ನೋವಾಗಬಹುದು; ಆದರೆ ಅದಕ್ಕೆ ಒಳಪಟ್ಟರಷ್ಟೇ ನೀನು ಚೆನ್ನಾಗಿ ಬರೆಯಲು ಸಾಧ್ಯ. ಮೂರನೆಯದಾಗಿ, ನೀನು ಒಂದು ಪೆನ್ಸಿಲ್‌ ಎಂಬುದನ್ನು ನೆನಪಿಟ್ಟುಕೋ. ಹಾಗಾಗಿ ನೀನು ಆಗಾಗ ನಿನ್ನ ಬದುಕಿನಲ್ಲಿ ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ನಾಲ್ಕನೆಯದಾಗಿ, ನೀನು ಏನಾಗಿದ್ದೀಯೋ ಅದು ಸಾಧ್ಯವಾಗಿರುವುದು ನಿನ್ನೊಳಗಿರುವ ಇನ್ನೊಂದರಿಂದ. ಐದನೆಯದಾಗಿ, ಯಾವುದೇ ಹಾಳೆಯ ಮೇಲೆ ನಿನ್ನನ್ನು ಉಪಯೋಗಿಸಿದರೂ ಅಲ್ಲಿ ಶಾಶ್ವತ ಗುರುತನ್ನು ಉಳಿಸು. ಏನೇ ಅಡ್ಡಿಗಳು ಎದುರಾಗಲಿ; ನೀನು ಸೃಷ್ಟಿಯಾಗಿರುವ ಮೂಲ ಉದ್ದೇಶವಾದ ಬರವಣಿಗೆಯನ್ನು ನಿಲ್ಲಿಸದಿರು.’
ಇಷ್ಟು ಹೇಳಿ ಆ ವಯೋವೃದ್ಧ ಪೆನ್ಸಿಲ್‌ ತಯಾರಕ ಆ ಪೆನ್ಸಿಲನ್ನು ಅಕ್ಕರೆಯಿಂದ ಪೊಟ್ಟಣಗಟ್ಟಿ ಮಾರಾಟಕ್ಕೆ ಕಳುಹಿಸಿಕೊಟ್ಟರು. ಪೆನ್ಸಿಲ್‌ ತನ್ನ ಸೃಷ್ಟಿಕರ್ತನ ಮಾತುಗಳನ್ನು ಕಿವಿಗೊಟ್ಟು ಕೇಳಿಸಿಕೊಂಡಿತು ಮತ್ತು ಹಾಗೆಯೇ ನಡೆಯುವೆ ಎಂದು ವಚನ ನೀಡಿತು. ತನ್ನ ಬದುಕಿನುದ್ದಕ್ಕೂ ಅದು ಸರ್ವಶ್ರೇಷ್ಠ ಪೆನ್ಸಿಲ್‌ ಆಗಿತ್ತು.

ಸರಳವಾದ ಕಥೆಯಾಗಿ ತೋರಬಹುದಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ತಥ್ಯಗಳು ಇದರಲ್ಲಿವೆ. ಆ ಪೆನ್ಸಿಲ್‌ ಆಗಿ ನಮ್ಮನ್ನು ನಾವು ಕಲ್ಪಿಸಿಕೊಂಡರೆ ಜೀವನದಲ್ಲಿ ಹೇಗಿರಬೇಕು ಎಂಬ ಪಾಠವಾಗಿ ಈ ಕಥೆ ಕಾಣುತ್ತದೆ. ವಿದ್ಯಾಭ್ಯಾಸ ಸಂದರ್ಭ ಉತ್ತಮ ಗುರುವಿನ ಅಡಿಯಲ್ಲಿ, ಉದ್ಯೋಗದ ಸಂದರ್ಭ ಯಶಸ್ವೀ ಆಡಳಿತಗಾರರ ಮಾರ್ಗದರ್ಶನದಲ್ಲಿ ನಾವು ಬದುಕು ರೂಪಿಸಿಕೊಳ್ಳಬೇಕು.

ಆಗ ಶ್ರೇಷ್ಠತೆ ಸಾಧ್ಯವಾಗುತ್ತದೆ. ಬದುಕಿನಲ್ಲಿ ಎದುರಾಗುವ ಬದಲಾ ವಣೆಗಳಿಗೆ ಒಗ್ಗಿಕೊಳ್ಳಬೇಕು, ಸ್ವೀಕರಿಸಬೇಕು. ಅಲ್ಲದೆ ಜೀವನಪಥದಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಿ ಕೊಳ್ಳುತ್ತ ಮುಂದೆ ನಡೆಯಬೇಕು. ಪೆನ್ಸಿಲ್‌ನಲ್ಲಿ ಮರದ ಕೊಳವೆಯೊಳಗಿನ ಕಡ್ಡಿಯಿಂದ ಬರವಣಿಗೆ ನಡೆಯುವುದು. ಆದರೆ ಮರದ ಕೊಳವೆಯ ಆಧಾರವಿಲ್ಲದೆ ಬರೇ ಕಡ್ಡಿಯಿಂದ ಬರೆಯಲಾಗದು. ನಾವೂ ಹೀಗೆಯೇ – ನಮ್ಮ ದೇಹ ಮತ್ತು ಅದರೊಳಗಿರುವ ಆತ್ಮ ಅಥವಾ ಚೈತನ್ಯ ಒಂದಕ್ಕೊಂದು ಪೂರಕ. ಒಂದಿಲ್ಲದೆ ಇನ್ನೊಂದಿಲ್ಲ.

ಹಾಗೆಯೇ ಕಷ್ಟಗಳು, ಸವಾಲುಗಳು, ಅಡ್ಡಿ ಆತಂಕಗಳು ಎದುರಾದಾಗ ಎದೆ ಗುಂದದೆ ನಮಗೆ ವಿಹಿತವಾದ ಕರ್ತವ್ಯಗಳನ್ನು, ಜವಾಬ್ದಾರಿಗಳನ್ನು ನಡೆಸುವುದು ಮತ್ತು ಸಾಧನೆ ಮಾಡಿ ಗುರುತಿಸಿಕೊಳ್ಳುವುದು ನಮ್ಮ ಬದುಕಿಗೊಂದು ಅರ್ಥವನ್ನು ಕೊಡುತ್ತದೆ.

(ಕಥೆಯೊಂದರ ಸಾರ ಸಂಗ್ರಹ)

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.