ಬದುಕಿನ ವೈವಿಧ್ಯ ಮತ್ತು ಕುಂಟು ನಾಯಿಮರಿ


Team Udayavani, Sep 15, 2020, 7:08 AM IST

ಬದುಕಿನ ವೈವಿಧ್ಯ ಮತ್ತು ಕುಂಟು ನಾಯಿಮರಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಒಂದು ಹಸ್ತದ ಐದು ಬೆರಳುಗಳು ಒಂದರಂತೆ ಇನ್ನೊಂದು ಇರುವುದಿಲ್ಲ ಎಂಬುದು ಆಡು ಭಾಷೆಯ ಪ್ರಸಿದ್ಧ ನುಡಿಗಟ್ಟು.

ಮನುಷ್ಯನ ಬದುಕು, ವರ್ತನೆ, ಸ್ವರೂಪ, ಅಂತಸ್ತು ಒಬ್ಬರಂತೆ ಇನ್ನೊಬ್ಬರದು ಇರುವುದಿಲ್ಲ ಎಂಬುದು ಇದರ ತಿರುಳು. ಪರೋಕ್ಷವಾಗಿ ವೈವಿಧ್ಯವೇ ಬದುಕಿನ ಜೀವಾಳ ಎನ್ನುತ್ತದೆ ಇದು.

ಯಾರು ಕೂಡ ಯಾವುದೇ ಕಾರಣಕ್ಕೂ ಕೀಳಲ್ಲ, ಯಾರೂ ಮೇಲಲ್ಲ. ಜೀವನ ಎಲ್ಲರ ಮುಂದೆಯೂ ಸಮಾನವಾಗಿ ತೆರೆದುಕೊಂಡಿರುತ್ತದೆ.

ಮನುಷ್ಯನನ್ನು ಮಾನವನನ್ನಾಗಿಸುವ ಪ್ರೀತಿ ವಾತ್ಸಲ್ಯ, ಕರುಣೆ, ಸಹಾನುಭೂತಿಗಳಂತಹ ಮಾನವೀಯ ಗುಣಗಳೊಂದಿಗೆ ಸಕಾರಾತ್ಮಕವಾಗಿ ಬದುಕಬೇಕು ಅಷ್ಟೇ.
***

ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ ಬಾಲಕನನ್ನು ದಾರಿ ಬದಿಯ ಮನೆಯ ಗೇಟಿಗೆ ಅಳವಡಿಸಿದ್ದ ‘ನಾಯಿಮರಿಗಳು ಮಾರಾಟಕ್ಕಿವೆ’ ಎಂಬ ಫ‌ಲಕ ಆಕರ್ಷಿಸಿತು. ಹುಡುಗ ನಿಂತ. ಬಹಳ ಹೊತ್ತು ಫ‌ಲಕವನ್ನು ವೀಕ್ಷಿಸಿದ. ಮರಿಗಳು ಎಲ್ಲಾದರೂ ಕಣ್ಣಿಗೆ ಬೀಳುತ್ತವೆಯೇ ಎಂದು ಗೇಟಿನ ಒಳಕ್ಕೆ ಇಣುಕಿದ.

ಅಲ್ಲೇ ಪಕ್ಕದಲ್ಲಿ ಹೂಗಿಡಗಳಿಗೆ ನೀರು ಹಾಯಿಸುತ್ತಿದ್ದ ಮನೆಯ ಯಜಮಾನ ನಳ್ಳಿ ಕಟ್ಟಿ ಗೇಟಿನ ಬಳಿಗೆ ಬಂದ. ಹುಡುಗನಲ್ಲೇನು ಮಾತು ಎಂದು ಉಪೇಕ್ಷಿಸದೆ “ಮರಿ ಬೇಕಾ’ ಎಂದು ಕೇಳಿದ.

ಬಾಲಕ ನಿಂತದ್ದೇ ಅದಕ್ಕೆ. “ಒಂದು ಮರಿಗೆ ಎಷ್ಟು ದುಡ್ಡು’ ಎಂದು ಪ್ರಶ್ನಿಸಿದ ಆತ. “ದುಡ್ಡಿನ ವಿಚಾರ ಮತ್ತೆ ಅಪ್ಪನ ಹತ್ತಿರ ಮಾತಾಡೋಣ. ಈಗ ನಾಯಿ ಮರಿ ನೋಡುತ್ತೀಯಾ?’ ಎಂದ ಯಜಮಾನ. ಹುಡುಗ ತಲೆ ಅಲ್ಲಾಡಿಸಿದ. ಯಜಮಾನನ ಸಿಳ್ಳಿನ ಸದ್ದಿಗೆ ಮನೆಯ ಹಿಂದಿನಿಂದ ನಾಲ್ಕೈದು ಮರಿಗಳು ಚೆಂಡುಗಳಂತೆ ಜಿಗಿಯುತ್ತ ಬಂದವು. ಒಂದೊಂದು ಕೂಡ ಬಹು ಸುಂದರ; ಬೆಳೊ°ರೆಯಂಥ ಕೂದಲು ಗಳುಳ್ಳದ್ದು ಒಂದು, ಕೆಂಪು – ಕಪ್ಪು ಮಿಶ್ರ ಬಣ್ಣದ್ದು ಇನ್ನೊಂದು… ಒಂದರ ಹಿಂದೆ ಒಂದು ಮುದ್ದು ಮುದ್ದು ಮರಿಗಳು.

ಅವೆಲ್ಲಕ್ಕಿಂತ ಹಿಂದೆ ಒಂದು ಮರಿ ನಿಧಾನ ವಾಗಿ ಬಂತು. ಅದು ಕೊಂಚ ಕುಂಟುತ್ತಿತ್ತು. ಯಜಮಾನ ಯಾವ ಮರಿ ಇಷ್ಟವಾಯಿತು ಎಂದು ಹುಡುಗನನ್ನು ಕೇಳಿದ.

ಬಾಲಕನ ಆಯ್ಕೆ ಕುಂಟುವ ನಾಯಿಮರಿಯಾಗಿತ್ತು. ಮನೆ ಮಾಲಕನಿಗೆ ಆಶ್ಚರ್ಯ. “ಅದು ಬೇಡ, ಸರಿಯಾಗಿರುವ ಈ ಮರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೋ’ ಎಂಬ ಸಲಹೆಯನ್ನೂ ಕೊಟ್ಟ. ಆದರೆ ಹುಡುಗ ತನ್ನ ನಿರ್ಧಾರದಿಂದ ಹಿಂದೆ ಸರಿಯಲೊಲ್ಲ. ಕುಂಟು ನಾಯಿಮರಿಯೇ ಆದರೆ ಉಚಿತವಾಗಿ ಕೊಡುವೆ ಎಂಬ ಮಾಲಕನ ಮಾತಿಗೂ ಒಪ್ಪದೆ “ಅಪ್ಪನಲ್ಲಿ ಹೇಳಿ ದುಡ್ಡು ಕೊಡಿಸುವೆ’ ಎಂದ.

ಇಡೀ ಕತೆಯ ಸ್ವಾರಸ್ಯ ಇರುವುದು ಇಲ್ಲಿಯೇ.

“ಅದು ಬೇಡ ಪುಟ್ಟಾ, ಅದರ ಕಾಲು ಕುಂಟು. ಎಲ್ಲ ಮರಿಗಳ ಹಾಗೆ ಅದಕ್ಕೆ ಓಡಿ ಯಾಡಲು ಆಗದು’ ಯಜಮಾನ ಮತ್ತೂ ಹೇಳಿದ.

ಆಗ ಬಾಲಕ ನಾಯಿ ಮರಿಗಳ ಯಜಮಾನನಿಗೆ ತನ್ನ ಸಮವಸ್ತ್ರದ ಪ್ಯಾಂಟನ್ನು ಕೊಂಚ ಎತ್ತಿ ಎಡಗಾಲನ್ನು ತೋರಿಸಿದ. ನೋಡಿದರೆ ಅವನ ಕಾಲು ಕೂಡ ಕುಂಟು.

ಈಗ ಬಾಲಕ ಹೇಳಿದ, “ನನಗೂ ವೇಗವಾಗಿ ಓಡಿಯಾಡಲು ಆಗುವುದಿಲ್ಲ. ನನಗೆ ನನ್ನ ಹಾಗಿರುವ ಸಂಗಾತಿಯೇ ಬೇಕು. ಅದಕ್ಕೇ ಈ ಮರಿಯೇ ನನ್ನ ಆಯ್ಕೆ…’
***

ವೈವಿಧ್ಯವೇ ಬದುಕಿನ ಸೌಂದರ್ಯ. ಎಲ್ಲರೂ ಎಲ್ಲ ರೀತಿಯಲ್ಲೂ ಅನುರೂಪರು, ಸಮಾನರಾಗಿದ್ದರೆ ಅದು ಏಕತಾನವಾಗುತ್ತದೆ. ಅದಕ್ಕೆ ರುಚಿಯಿಲ್ಲ. ಸದಾ ತಿನ್ನುವ ಸಿಹಿಯು ಸಿಹಿಯಲ್ಲ. ಅದಕ್ಕೇ ಐದು ಬೆರಳುಗಳು ಸಮಾನವಲ್ಲ.

(ಜೀವನಾನುಭವ ಸಾರ)

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.