ಬೀಜ ಬಿತ್ತಿ ಬೆಳೆಯಲು ಕಲಿಸುವ ಬದುಕು


Team Udayavani, Sep 30, 2020, 6:15 AM IST

ಬೀಜ ಬಿತ್ತಿ ಬೆಳೆಯಲು ಕಲಿಸುವ ಬದುಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹಸಿದವನಿಗೆ ಆಹಾರ ನೀಡುವ ದಾನ ಒಂದು ಶ್ರೇಷ್ಠ ಕಾರ್ಯ ನಿಜ.

ಅದರ ಜತೆಗೆ ಅವನಿಗೆ ಬೀಜವನ್ನು ಒದಗಿಸಿ, ಗದ್ದೆ ಉತ್ತು ಬಿತ್ತಿ ಬೆಳೆಯುವುದನ್ನು ಹೇಳಿಕೊಟ್ಟರೆ ಬದುಕುವ ಕಲೆಯನ್ನು ಕಲಿಸಿದಂತಾಗುತ್ತದೆ.

ಒಂದು ಹೊತ್ತಿನ ಊಟ ಒದಗಿಸುವುದು ಆ ದಿನದ ತುರ್ತನ್ನಷ್ಟೇ ನೀಗಿಸೀತು.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ನಮ್ಮಲ್ಲಿ ಬೀಜ ಇದ್ದರೆ ಸಾಲದು, ಅದನ್ನು ಚೆನ್ನಾಗಿ ಬಿತ್ತಿ ಬೆಳೆಯುವ ಕಲೆಯೂ ಗೊತ್ತಿರಬೇಕು. ಅದಕ್ಕಿಂತ ಮುಖ್ಯವಾದದ್ದು ಬೀಜವನ್ನು ಏನು ಮಾಡಬೇಕು, ಏನು ಮಾಡಲು ಸಾಧ್ಯ ಎಂಬುದನ್ನು ತಿಳಿದುಕೊಂಡಿರುವುದು.

ತರಕಾರಿ ಬೆಳೆಗಾರರು ಆಯಾ ವರ್ಷ ಬಿತ್ತಿ ಬೆಳೆದ ಎಲ್ಲವನ್ನೂ ಮಾರಾಟ ಮಾಡುವುದಿಲ್ಲ ಅಥವಾ ಅಡುಗೆಗೆ ಉಪಯೋಗಿಸಿ ಮುಗಿಸುವುದಿಲ್ಲ. ಒಂದಷ್ಟನ್ನು ಬೀಜವಾಗಿ ಮುಂದಿನ ವರ್ಷಕ್ಕೆ ಉಳಿಸಿಕೊಂಡಿರುತ್ತಾರೆ. ಭತ್ತ ಅಥವಾ ಯಾವುದೇ ಆಹಾರ ಧಾನ್ಯವೂ ಹೀಗೆಯೇ. ಸ್ವಲ್ಪ ಮುಂದಿನ ವರ್ಷಕ್ಕೆ ಬೀಜವಾಗಿ ಬೇಕಾಗುತ್ತದೆ.
ಇದರ ಮೂರನೆಯ ಆಯಾಮ ಎಂದರೆ ನಾವು ಉಳಿಸಿಕೊಂಡಿರುವ ಬೀಜದಲ್ಲಿ ಸ್ವಲ್ಪವನ್ನು ಇತರರಿಗೂ ಹಂಚಿ ಎಲ್ಲರೂ ಬೆಳೆದು ಉಣ್ಣುವಂತೆ ಮಾಡುವುದು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲೊಂದು ಪುಟ್ಟ ಕತೆಯಿದೆ. ಅದು ಹಲವನ್ನು ಹೇಳುತ್ತದೆ. ಒಂದು ದೇಶದಲ್ಲಿ ನಾಲ್ಕು ಪಟ್ಟಣಗಳಿದ್ದವಂತೆ. ಎಲ್ಲ ಕಡೆಗಳಲ್ಲೂ ಜನರು ಹಸಿವಿನಿಂದ ಬಳಲುತ್ತಿದ್ದರು. ಎಲ್ಲ ಪಟ್ಟಣಗಳಲ್ಲಿಯೂ ಧಾನ್ಯಗಳಿಂದ ತುಂಬಿದ ತಲಾ ಒಂದು ಚೀಲಗಳಿದ್ದವು.

ಒಂದನೆಯ ಪಟ್ಟಣದಲ್ಲಿ ಧಾನ್ಯಗಳನ್ನು ಬೀಜವಾಗಿ ಉಪಯೋಗಿಸಬಹುದು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದ್ದರಿಂದ ಕೆಲವೇ ಮಂದಿ ಒಂದಷ್ಟು ದಿನ ರೊಟ್ಟಿ ಮಾಡಿ ತಿಂದರು. ಆ ಬಳಿಕ ಎಲ್ಲರೂ ಹಸಿವಿನಿಂದ ಕಂಗೆಟ್ಟರು.
ಎರಡನೆಯ ಪಟ್ಟಣದಲ್ಲಿ ಒಬ್ಬನಿಗೆ ಮಾತ್ರ ಧಾನ್ಯಗಳನ್ನು ಬೀಜವಾಗಿಯೂ ಉಪಯೋಗಿಸಬಹುದು ಎಂದು ತಿಳಿದಿತ್ತು. ಆತ ಬೀಜ ಬಿತ್ತಿದ. ಆದರೆ ಆ ಬಳಿಕ ಏನೂ ಮಾಡಲಿಲ್ಲ. ಎಲ್ಲರೂ ಹಸಿವಿನಿಂದ ಬಳಲಿದರು.

ಮೂರನೆಯ ಪಟ್ಟಣದಲ್ಲಿಯೂ ಧಾನ್ಯವನ್ನು ಬೀಜವಾಗಿ ಉಪಯೋಗಿಸುವ ಬಗ್ಗೆ ತಿಳಿದಿದ್ದ ಒಬ್ಬನಿದ್ದ. ಆತ ಎಲ್ಲರಿಗೂ ವ್ಯವಸಾಯ ಮಾಡುವುದು ಹೇಗೆ ಎಂದು ಹೇಳಿಕೊಟ್ಟ. ಆದರೆ ಅದಕ್ಕೆ ಪ್ರತಿಯಾಗಿ ತಾನೇ ರಾಜನಾಗಬೇಕು ಎಂದ. ಎಲ್ಲರೂ ಬೇಸಾಯ ಮಾಡಿ ಆಹಾರ ಬೆಳೆದರು, ಆದರೆ ಆತನ ಆಳುಗಳಾದರು.

ನಾಲ್ಕನೆಯ ಪಟ್ಟಣದಲ್ಲಿಯೂ ವ್ಯವಸಾಯದ ಬಗ್ಗೆ ತಿಳಿದಿದ್ದ ಒಬ್ಬನಿದ್ದ. ಆತ ಎಲ್ಲರಿಗೂ ಬೀಜ ಹಂಚಿದ, ವ್ಯವಸಾಯ ತಿಳಿಸಿಕೊಟ್ಟ. ಎಲ್ಲರೂ ಧಾನ್ಯ ಬೆಳೆದರು, ಉಂಡು ಸುಖವಾಗಿದ್ದರು. ನಮ್ಮಲ್ಲಿ ಇರುವ ವಿದ್ಯೆ, ವಸ್ತು, ವಿಚಾರ, ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬ ವಿಚಾರವನ್ನು ಇದು ಹೇಳುತ್ತದೆ.

ನಾವು ಚೆನ್ನಾಗಿರುವುದು ಒಂದು ರೀತಿಯ ಬದುಕು. ನಮ್ಮೊಂದಿಗೆ ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸಿ, ಅದಕ್ಕಾಗಿ ಶ್ರಮಿಸುತ್ತ ಬದುಕುವುದು ಇನ್ನೊಂದು. ಎರಡನೆಯ ದಾರಿ ಶ್ರೇಷ್ಠ ಅನ್ನಿಸಿಕೊಳ್ಳುತ್ತದೆ. ಅದು ಬದುಕಿಗೊಂದು ಅರ್ಥವನ್ನು ಕೊಡುತ್ತದೆ. ಮನುಷ್ಯ ಸಮೂಹಜೀವಿ ಎನ್ನುವುದು ಅಕ್ಷರಾರ್ಥದಲ್ಲಿ ನಿಜವಾಗುವುದು ಆಗಲೇ.

ಎಲ್ಲರ ಒಳಿತಿಗಾಗಿ ಬದುಕುವುದರಿಂದ ನಮ್ಮ ಜೀವನ ಕೂಡ ಸಕಾರಾತ್ಮಕ ನೆಲೆಗಟ್ಟಿನಲ್ಲಿ ಹೊಳೆಯುತ್ತದೆ. ಇರುವ ಧಾನ್ಯವನ್ನು ಆಹಾರಕ್ಕಿಂತ ಭಿನ್ನವಾಗಿ ಬಳಸುವ ಕಲೆ ತಿಳಿದಿರುವುದು, ಅದನ್ನು ತನ್ನ ಗಳಿಕೆಗಾಗಿ ಉಪಯೋಗಿಸುವುದು ಮತ್ತು ಎಲ್ಲರ ಕಲ್ಯಾಣಕ್ಕಾಗಿ ಬಳಕೆ – ಈ ಮೂರೂ ಭಿನ್ನ. ಕೊನೆಯ ಮಾರ್ಗವೇ ನಮ್ಮ ಬದುಕು ಸುಖವಾಗಿರಲು ಕಾರಣವಾಗುತ್ತದೆ.

(ಕಥೆಯೊಂದರ ಸಾರ ಸಂಗ್ರಹ)

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.