ಖುಷಿ ಖುಷಿಯ ಸಂಬಂಧಗಳ ಬದುಕು


Team Udayavani, Sep 21, 2020, 7:12 AM IST

ಖುಷಿ ಖುಷಿಯ ಸಂಬಂಧಗಳ ಬದುಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image used

ಈ ಬದುಕು ಸಂಬಂಧಗಳದ್ದು. ಪ್ರತಿಯೊಬ್ಬ ಮನುಷ್ಯನಿಗೂ ಸಂಬಂಧಗಳು ಬೇಕು, ಅವು ಚೆನ್ನಾಗಿರಬೇಕು.

ಹೀಗೆ ಮನುಷ್ಯ ಸಂಸಾರ ಜೀವಿ, ಸಮೂಹಜೀವಿ. ನಮ್ಮಲ್ಲಿ ಕೆಲವರು ಮದುವೆಯಾಗದೆ ಇರಬಹುದು, ಸಂಸಾರ ಹೂಡದೆ ಇರಬಹುದು; ಆದರೆ ಅಂಥವರೂ ತಮ್ಮ ಸುತ್ತ ಇರುವ ವಸ್ತುಗಳು, ಜನರು, ಪ್ರಾಣಿಗಳ ಜತೆಗೆ ಸಂಬಂಧ ಹೊಂದಿರುತ್ತಾರೆ.

ಈ ಸಂಬಂಧವನ್ನು ಸದಾಕಾಲ ಚೆನ್ನಾಗಿ ಇರಿಸಿಕೊಳ್ಳುವುದು ಅಥವಾ ಕೆಡಿಸಿಕೊಳ್ಳು ವುದು ನಮ್ಮ ಆಯ್ಕೆಗೆ ಸಂಬಂಧಪಟ್ಟದ್ದು. ನಮಗ್ಯಾರಿಗೂ ನಮ್ಮ ಸುತ್ತಲಿನವರ ಜತೆಗೆ, ಹೆಂಡತಿ ಮಕ್ಕಳ ಜತೆಗೆ, ಅಪ್ಪ – ಅಮ್ಮನೊಂದಿಗೆ ಜಗಳ ಮಾಡಿಕೊಂಡಿರುವುದಕ್ಕೆ ಇಷ್ಟವಿರುವುದಿಲ್ಲ. ಆದರೂ ಕೆಲವೊಮ್ಮೆ ಇದಾಗುತ್ತದೆ. ಅದು ಹೇಗೆ?

ನಮ್ಮ ಅನೇಕ ಸಂಬಂಧಗಳನ್ನು ಗಮನಿಸಿ. ಆರಂಭದಲ್ಲಿ ಚೆನ್ನಾಗಿರುತ್ತೇವೆ. ಬರಬರುತ್ತಾ ಹಳಸಲು ಆರಂಭವಾಗುತ್ತದೆ. ನಮ್ಮ ವೈರಿ ನಮ್ಮ ಜತೆಗೆ ಜಗಳವಾಡಿದರೆ, ಇರಿಯಲು ಬಂದರೆ ಅದು ಸಹಜ. ಆದರೆ ಮನೆಯಲ್ಲಿ ಪತ್ನಿಯ ಜತೆಗೆ, ಗೆಳೆಯನ ಜತೆಗೆ ವಿರಸವಾದರೆ ಅದಕ್ಕೇನು ಕಾರಣ? ಇದಕ್ಕೆ ಮೂಲ ಕಾರಣ ಎಂದರೆ ನಾವು ಸಂಬಂಧಗಳನ್ನು ಬೆಳೆಸಿ ಕೊಳ್ಳುವುದು ಹಾಗೆ ಮಾಡ ಬೇಕು ಎಂಬ ಉದ್ದೇಶದಿಂದ. ಅದು ನಮ್ಮ ಆಯ್ಕೆಯಾಗಿರುವುದಿಲ್ಲ. ಸಂಬಂಧ ಇರಬೇಕು ಎಂಬ ‘ಕಾರಣ’ದಿಂದ ನಾವು ಬೆಳೆಸಿಕೊಳ್ಳುವ ಸಂಬಂಧಗಳು ಬೇಗನೆ ಹಳಸಿಹೋಗುತ್ತವೆ.

ಇದೊಂದು ತರಹ ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿ. ನಮಗೆ ವಿರಸ ಮತ್ತು ಸಮರಸಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಬಂದರೆ ನಾವು ಆಯ್ದುಕೊಳ್ಳುವುದು ಯಾವುದನ್ನು? ಸಮರಸವನ್ನೇ ತಾನೇ? ಆದರೂ ಸಂಬಂಧ ಗಳ ವಿಚಾರದಲ್ಲಿ ವಿರಸ ಯಾಕೆ ಉಂಟಾಗು ತ್ತದೆ? ಅವು ನಮ್ಮ ನಿಯಂತ್ರಣದಲ್ಲಿ ಇಲ್ಲದ್ದ ರಿಂದಲೇ ಹಾಗಾಗುತ್ತದೆ. ನಮ್ಮ ಮನಸ್ಸು, ಭಾವನೆಗಳು, ಶಕ್ತಿ ಮತ್ತು ದೇಹ ಹೀಗೆಯೇ ಇರಬೇಕು ಎಂದು ನಾವು ಬಯಸುವಂತೆ ಇಲ್ಲದ್ದರಿಂದಲೇ ವಿರಸಗಳು ಹುಟ್ಟಿಕೊಳ್ಳುತ್ತವೆ. ಅವು ಬಾಹ್ಯ ಘಟನೆಗಳು, ಸನ್ನಿವೇಶಗಳಿಂದ ನಿಯಂತ್ರಿಸಲ್ಪಡುವುದರಿಂದ ಹಾಗಾಗುತ್ತದೆ. ಹೊರಗಿನ ಘಟನೆಗಳು, ಸನ್ನಿವೇಶಗಳು ನಮ್ಮನ್ನು ನಿಯಂತ್ರಿಸಲು ನಾವು ಬಿಡುತ್ತೇವೆ ಎಂದರೆ ಅದು ಜೀತವೇ ತಾನೇ?

ನಾವು ಏನು, ಯಾರು ಎಂಬ ವಿಚಾರದಲ್ಲಿ ನಮ್ಮೊಳಗೆಯೇ ಒಂದು ಬಗೆಯ ಸ್ವಾತಂತ್ರ್ಯದ ವಾತಾವರಣ ಇದ್ದರೆ ಮಾತ್ರ ಸುಂದರ ಸಂಬಂಧಗಳು ರೂಪು ಗೊಳ್ಳಲು ಸಾಧ್ಯ. ಇಲ್ಲ ವಾದರೆ ಸಮಾಜ ಬಯಸು ತ್ತದೆ ಎಂದೋ, ಇನ್ಯಾರೋ ಹೇಳಿದ್ದಾರೆ ಎಂದೋ ನಾವು ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತೇವೆ. ಒತ್ತಾಯವಾಗಿ, ಕಡ್ಡಾಯವಾಗಿ ಸ್ಥಾಪಿಸಿಕೊಂಡ ಸಂಬಂಧಕ್ಕೆ ಅನಿವಾರ್ಯವಾಗಿ ಗಂಟು ಬೀಳುವ ಜೋತು ಬೀಳುವುದಾಗುತ್ತದೆ.

ಸಂಬಂಧಗಳನ್ನು ಹೇಗೆ ಸುಂದರವಾಗಿ ಇರಿಸಿಕೊಳ್ಳಬಹುದು ಎಂಬ ಬಗ್ಗೆ ಸದ್ಗುರು ಒಂದು ಕತೆ ಹೇಳುತ್ತಾರೆ. ಲಾವೊ ತ್ಸು ಎಂಬ ಸಂತ ಮರಣ ಶಯ್ಯೆಯಲ್ಲಿದ್ದಾಗ ಶಿಷ್ಯನೊಬ್ಬ ಕೇಳಿದನಂತೆ, ‘ಗುರುಗಳೇ, ನೀವು ಯಾವತ್ತೂ ಯಾರ ಜತೆಗೂ ಮುನಿಸಿಕೊಂಡದ್ದನ್ನು ನಾನು ಕಂಡಿಲ್ಲ. ಏನಿದರ ರಹಸ್ಯ?’

ಲಾವೊ ತ್ಸು ನಕ್ಕು ಹೇಳಿದರಂತೆ, “ಬೆಳಗ್ಗೆ ಎದ್ದ ಕೂಡಲೇ ನನಗೆ ನಾನೇ ಎರಡು ಆಯ್ಕೆಗಳನ್ನು ಮುಂದಿಟ್ಟುಕೊಳ್ಳುತ್ತೇನೆ – ಒಂದು ಇವತ್ತು ಎಲ್ಲರ ಜತೆಗೆ ಜಗಳ ಮಾಡುತ್ತ ಇರುವುದು; ಇನ್ನೊಂದು ಎಲ್ಲರ ಜತೆಗೆ ಖುಷಿಯಾಗಿ ಇರುವುದು. ಬಳಿಕ ನನಗೆ ನಾನೇ ಎರಡನೆಯದನ್ನು ಆಯ್ದುಕೊಳ್ಳುತ್ತೇನೆ.’ ನಮ್ಮ ಬದುಕು ಕೂಡ ಹೀಗೆಯೇ ಎಲ್ಲರ ಜತೆಗೆ ಲವಲವಿಕೆಯ, ಖುಷಿ ಖುಷಿಯದಾಗಲಿ.

(ಸಂಗ್ರಹ)

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.