ಜೀವಯಾನ; ಬಾಳಿಗೊಂದಿಷ್ಟು ಬೆಳಕು: ನೆನಪುಗಳ ಮೂಟೆಯ ಭಾರ ಇಳಿಸೋಣ


Team Udayavani, Aug 13, 2020, 6:40 AM IST

ಜೀವಯಾನ; ಬಾಳಿಗೊಂದಿಷ್ಟು ಬೆಳಕು: ನೆನಪುಗಳ ಮೂಟೆಯ ಭಾರ ಇಳಿಸೋಣ

ನಾವು ಯೋಚಿಸುವ ರೀತಿ ಸರಿಯಿಲ್ಲ, ನಮ್ಮ ವರ್ತನೆ ಸರಿಯಿಲ್ಲ ಎಂದು ಎಷ್ಟೋ ಬಾರಿ ನಮಗೇ ಅನ್ನಿಸುವುದುಂಟು. ಆಲೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದುಕೊಳ್ಳುತ್ತೇವೆ. ಸಾಧ್ಯವೇ?  ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಜ್ಞಾನಾರ್ಥಿಯೊಬ್ಬರಿಂದ ಇದೇ ಪ್ರಶ್ನೆ ಎದು ರಾಯಿತು. ನಿಮಗೆ ಎಂಥ ಆಲೋಚನೆಗಳು, ಭಾವನೆಗಳು ಉಂಟಾಗುತ್ತವೆ ಎಂಬುದರ ಪರಿಶೀಲನೆ ಮುಖ್ಯವಲ್ಲ ಎಂದರು ಸದ್ಗುರು.

ನಮ್ಮ ಮನಸ್ಸು ಮತ್ತು ದೇಹಗಳೆರಡೂ ಕಾರ್ಯಾಚರಿಸುವುದು ನೆನಪುಗಳ ಮೊತ್ತ ದಿಂದ. ಬೆಂಕಿಯ ಜ್ವಾಲೆ ಬಿಸಿ ಇರುತ್ತದೆ ಎಂಬುದು ಸಣ್ಣವರಿದ್ದಾಗ ನಮಗೆ ಗೊತ್ತಾಗಿದೆ. ಅದೇ ನೆನಪಿನಿಂದ ಈಗಲೂ ನಾವು ಬೆಂಕಿಯ ಹತ್ತಿರ ಹೋಗುವುದಿಲ್ಲ. ಎರಡು ಕಾಲುಗಳಿಂದ ನಡೆಯುವುದು, ಬೆರಳುಗಳನ್ನು ಉಪ ಯೋಗಿಸಿ ಅನ್ನ ಕಲಸಿ ಬಾಯಿಗೆ ತುತ್ತು ಇಟ್ಟುಕೊಳ್ಳುವುದು-ಇಂಥ ಸರಳ ಸಂಗತಿಗಳು ಕೂಡ ಹೀಗೆಯೇ, ಸ್ಮರಣೆಯ ಬಲದಲ್ಲಿ ನಡೆಯುತ್ತವೆ.

ಬರೇ ಮನಸ್ಸು ಮಾತ್ರ ಅಲ್ಲ, ದೇಹವೂ ಎಷ್ಟೋ ಸಂಗತಿಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತದೆ. ನಮ್ಮ ಪೂರ್ವಜರ ರೀತಿಯದೇ ಕಣ್ಣು, ಬಾಯಿ, ಮೂಗು ಈಗ ನಮ್ಮ ಮುಖದ ಮೇಲಿರುವುದೂ ನಮ್ಮ ದೇಹದ ಒಳಗಿರುವ ಏನೋ ಒಂದು ಅದನ್ನು ನೆನಪಿಟ್ಟುಕೊಂಡಿದ್ದರಿಂದ. ಸಾವಿರಾರು ವರ್ಷ ಗಳಿಂದ ಸಂಚಿತವಾಗಿರುವಂಥ ನೆನಪು ಅದು.

ಹೀಗೆ ದೇಹ ಮತ್ತು ಮನಸ್ಸು ಎರಡೂ ನೆನಪುಗಳ ಮೂಟೆಯನ್ನು ಹೊತ್ತುಕೊಂಡಿವೆ. ಅದರ ಆಧಾರದಲ್ಲಿಯೇ ನಾವು ರೂಪುಗೊಳ್ಳು ವುದು, ನಮ್ಮ ನಿತ್ಯದ ಕೆಲಸಕಾರ್ಯ, ಚಟುವಟಿಕೆಗಳು, ಆಲೋಚನೆಗಳು, ಭಾವನೆ ಗಳು ಎಲ್ಲವೂ ನಡೆಯುವುದು.

ವಿಶ್ವದಲ್ಲಿ ನಮ್ಮ ಸ್ಥಾನ ಒಂದು ಧೂಳಿನ ಕಣಕ್ಕಿಂತಲೂ ಸಣ್ಣದು ಎಂಬುದನ್ನು ಮೊದಲು ಅರಿತುಕೊಳ್ಳೋಣ. ಈ ವಿಶಾಲ ವಿಶ್ವದಲ್ಲಿ ನಾವಿರುವ ಗ್ಯಾಲಕ್ಸಿ ಒಂದು ಧೂಳಿನ ಕಣದಷ್ಟು ಗಾತ್ರದ್ದು. ಈ ಹಾಲುಹಾದಿಯಲ್ಲಿ ನಮ್ಮ ಸೌರವ್ಯೂಹ ಇನ್ನೂ ಸಣ್ಣ ಧೂಳಿನ ಕಣದಂತೆ. ಅದರಲ್ಲಿ ನಮ್ಮ ಭೂಮಿಯ ಗಾತ್ರ ಮತ್ತೂ ಕಿರಿದು. ಅದರಲ್ಲಿ ನಾವಿರುವ ಹಳ್ಳಿಯೋ, ಪಟ್ಟಣವೋ ಇನ್ನಷ್ಟು ಸಣ್ಣದು.

ಅಂಥದ್ದರಲ್ಲಿ ನಾನೊಬ್ಬ ದೊಡ್ಡ ಮನುಷ್ಯ ಅಂದುಕೊಳ್ಳುತ್ತೇವೆ. ನಮ್ಮ ಆಲೋಚನೆ, ಭಾವನೆಗಳ ಬಗ್ಗೆ ಚಿಂತೆ ಮಾಡುತ್ತೇವೆ! ನಮಗೆ ಈ ವಿಶ್ವದಲ್ಲಿ ನಮ್ಮ ಸ್ಥಾನದ ಬಗ್ಗೆ ಅರಿವು ಇಲ್ಲ. ನಮ್ಮ ಆಲೋಚನೆ, ಭಾವನೆ ಸರಿಯಿಲ್ಲ ಎಂದುಕೊಳ್ಳುವುದು ನಾವು ಮಾತ್ರ; ಇಡೀ ವಿಶ್ವಕ್ಕೆ ಅದರಿಂದೇನೂ ಬಾಧಕವಿಲ್ಲ.

ಇಷ್ಟು ವಿಶಾಲವಾದ ವಿಶ್ವದಲ್ಲಿ ನಾವು ಇಷ್ಟು ಸಣ್ಣವರು ಎಂಬ ಅರಿವನ್ನು ಹೊಂದುವುದೇ ಬಹುದೊಡ್ಡ ಜ್ಞಾನೋದಯ. ನಮ್ಮ ಆಲೋಚನೆ, ಭಾವನೆಗಳು ಇಡೀ ವಿಶ್ವದ ದೃಷ್ಟಿಯಿಂದ ತೀರಾ ಅಮುಖ್ಯ ಎಂಬ ಸತ್ಯ ಹೊಳೆದುಬಿಟ್ಟರೆ ನಮ್ಮ ಆಲೋಚನೆ ಮತ್ತು ಭಾವನೆಗಳಿಂದ ಸಮ ದೂರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆಲೋಚನೆ ಮತ್ತು ಭಾವನೆಗಳೆರಡೂ ಪ್ರಜ್ಞಾಶೀಲ ಪ್ರಕ್ರಿಯೆಗಳಾಗಿ ಬದಲಾಗುವುದು ಆಗ.

ಇದಾದಾಗ ನಮ್ಮ ನೆನಪುಗಳ ಮೂಟೆಯ ಭಾರವನ್ನು ಇಳಿಸಿ ನಾವು ಹಗುರವಾಗುತ್ತೇವೆ. ಆಲೋಚನೆ, ಭಾವನೆ ಗಳೆಲ್ಲವೂ ಸ್ವತಂತ್ರ ಸುಂದರ ಅಸ್ತಿತ್ವವನ್ನು ಹೊಂದುತ್ತವೆ.

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು  [email protected] ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.