ಬದುಕು, ಬದುಕಲು ಗೊತ್ತಿರುವವರದು


Team Udayavani, Oct 22, 2020, 6:15 AM IST

ಬದುಕು, ಬದುಕಲು ಗೊತ್ತಿರುವವರದು

ಸಾಂದರ್ಭಿಕ ಚಿತ್ರ

ಈ ಜೀವನ ಚೆನ್ನಾಗಿದೆ. ಬದುಕು ಅದ್ಭುತ ವಾಗಿದೆ. ಇರುವುದೊಂದೇ ಬದುಕು ಎಂಬ ಅರಿವು ಹೊಂದಿ ಇರುವಷ್ಟು ದಿನ ಚೆನ್ನಾಗಿ ಜೀವಿಸಬೇಕು. ಹಾಗಿರಬೇಕಿತ್ತು, ಹೀಗಾಗ ಬೇಕಿತ್ತು, ನಾನು ಅವನಂತೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು, ಅದೊಂದು ಇದ್ದರೆ ಪ್ರಚಂಡ ಸಾಧನೆ ಮಾಡುತ್ತಿದ್ದೆ ಎಂಬ ಹಳಹಳಿಕೆಗಳೆಲ್ಲ ವ್ಯರ್ಥ. ಅದರಿಂದ ಏನೂ ಸಾಧನೆ ಆಗುವುದಿಲ್ಲ. ಒಂದೂರಿನಲ್ಲಿ ಮುದುಕ ನೊಬ್ಬನ ಗಟ್ಟಿಮುಟ್ಟಾದ ಕುದುರೆ ಕಾಣೆ ಯಾಯಿತಂತೆ. ಊರಿನ ಮಂದಿ ಬಂದು ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಮುದುಕ “ಒಳಿತೇ ಆಯಿತು’ ಎಂದನಂತೆ. ನಾಲ್ಕಾರು ದಿನಗಳ ಬಳಿಕ ಅದೇ ಕುದುರೆ ಇನ್ನೊಂದು ಬಲಶಾಲಿ ಕುದುರೆಯನ್ನು ತನ್ನ ಜತೆಗೆ ಕರೆದುಕೊಂಡು ಮನೆಗೆ ಬಂತು. ಊರಿನವರು ಖುಷಿ ವ್ಯಕ್ತಪಡಿಸಿದಾಗಲೂ ಮುದುಕನ ಪ್ರತಿಕ್ರಿಯೆ “ಒಳಿತೇ ಆಯಿತು’. ವಾರದ ಬಳಿಕ ಮುದುಕನ ಮಗ ಹೊಸ ಕುದುರೆಯನ್ನೇರಿ ಸವಾರಿ ಮಾಡುತ್ತಿದ್ದಾಗ ಬಿದ್ದು ಅವನ ಕಾಲು ಮುರಿಯಿತು. ಊರಿನವರು ಬಂದು “ತು… ತು…’ ಎಂದರು. ಆಗಲೂ ಮುದುಕ “ಒಳಿತೇ ಆಯಿತು’ ಎಂದ. ಕೆಲವೇ ದಿನಗಳಲ್ಲಿ ಆ ರಾಜ್ಯದ ಸೈನಿಕರು ಬಂದು ಊರಿನ ಯುವಕರನ್ನೆಲ್ಲ ಯುದ್ಧಕ್ಕಾಗಿ ಕರೆದೊಯ್ದರು. ಆದರೆ ಕಾಲು ಮುರಿದಿದ್ದ ಮುದುಕನ ಮಗನಿಗೆ ವಿನಾಯಿತಿ ಸಿಕ್ಕಿತು. ಆಗಲೂ ಆತ “ಒಳಿತೇ ಆಯಿತು’ ಎಂದನಂತೆ.

ಜೀವನದಲ್ಲಿ ಬಂದುದನ್ನು ಬಂದ ಹಾಗೆ ಸ್ವೀಕರಿಸುವುದು, ಎಲ್ಲವೂ ಆಗುವುದು ಒಳ್ಳೆಯದಕ್ಕೇ ಎಂಬ ಆಶಾವಾದದಿಂದ ಜೀವಿಸುವುದನ್ನು ಹೇಳುವ ಸುಂದರವಾದ ಕಥೆ ಇದು. ಅದಿಲ್ಲ ಇದಿಲ್ಲ ಎಂದುಕೊಂಡರೆ ಅಷ್ಟರಲ್ಲಿಯೇ ಜೀವನ ಮುಗಿದು ಹೋಗುತ್ತದೆ. ಸುಂದರವಾದ ಬದುಕು ನನಗೆ ಸಿಕ್ಕಿದೆ, ಎಲ್ಲವೂ ಚೆನ್ನಾಗಿದೆ, ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡುತ್ತೇನೆ, ನಾಳೆ ಒಳ್ಳೆಯದಾಗುತ್ತದೆ ಎಂಬ ಕನಸು, ಆಶಾ ವಾದ, ನಿರೀಕ್ಷೆಗಳೊಂದಿಗೆ ಬದುಕುವುದು ಒಂದು ಕಲೆ. ಅದು ಗೊತ್ತಿರಬೇಕು. ಬದುಕಲು ಗೊತ್ತಿದ್ದವನಿಗೆ ಬದುಕಲು ಸಾಧ್ಯವಾಗುತ್ತದೆ.

ಒಂದೂರಿನ ಒಂದು ಮನೆಯಲ್ಲಿ ಒಂದು ಹಳೆಯ ಸಂಗೀತ ವಾದ್ಯವಿತ್ತು. ಆ ಕುಟುಂಬದ ಪೂರ್ವಜರು ಅದನ್ನು ಸುಶ್ರಾವ್ಯ ವಾಗಿ ನುಡಿಸುತ್ತಿದ್ದರು. ಕಾರಣಾಂತರಗಳಿಂದ ಮುಂದಿನ ಪೀಳಿಗೆಗೆ ಅದರ ವಾದನ ಕಲೆ ಸಿದ್ಧಿಸಲಿಲ್ಲ. ಅದಕ್ಕೂ ಮುಂದಿನ ತಲೆಮಾರಿಗೆ ಆ ಸಂಗೀತ ವಾದ್ಯದ ಪರಿಚಯವಷ್ಟೇ ಇತ್ತು. ಮತ್ತೂಂದು ತಲೆಮಾರು ಮುಂದೆ ಬಂದಾಗ ಆ ಪರಿಚಯವೂ ಇಲ್ಲವಾಯಿತು. ಶತಮಾನ ಗಳಿಂದ ಆ ವಾದ್ಯ ಉಪಯೋಗಿಸುವವರು ಇಲ್ಲದೆ ಒಂದು ಮೂಲೆಯಲ್ಲಿ ಧೂಳು ತಿನ್ನುತ್ತ ಬಿದ್ದಿತ್ತು.

ಒಂದು ದಿನ ಆ ಮನೆಯಲ್ಲಿದ್ದವರು ಆ ವಾದ್ಯ ನಿರುಪಯೋಗಿ ಎಂದುಕೊಂಡು ಅದನ್ನು ಹೊರಕ್ಕೆಸೆಯಲು ತೀರ್ಮಾನಿಸಿ ದರು. ಹಾಗೆ ಮಾಡಿಯೂ ಬಿಟ್ಟರು. ಮರುದಿನ ಆ ಮಾರ್ಗ ವಾಗಿ ಒಬ್ಬ ವೃದ್ಧ ಭಿಕ್ಷುಕ ಬಂದ. ವಾದ್ಯವನ್ನು ನೋಡಿ ದವನೇ ಧೂಳು ಒರೆಸಿ ವಾದಿಸಲು ತೊಡ ಗಿದ. ಮಧುರ ಸಂಗೀತ ಹರಡಿತು. ಪಥಿಕರು ಅಲ್ಲಲ್ಲೇ ನಿಂತರು, ಭಿಕ್ಷುಕನ ಸುತ್ತ ನೆರೆದರು. ವಾದ್ಯ ಎಸೆದಿದ್ದ ಮನೆಯವರೂ ಬಂದರು.

ಭಿಕ್ಷುಕ ಸಂಗೀತ ನಿಲ್ಲಿಸಿದಾಗ ಆ ಮನೆ ಯವರು “ವಾದ್ಯ ನಮ್ಮದು’ ಎಂದರು. ಭಿಕ್ಷುಕ ಹೇಳಿದ, “ನಿಮ್ಮದಾಗಿರಬಹುದು. ಆದರೆ ನಿಮ್ಮಲ್ಲಿದ್ದಾಗ ನಿರುಪಯೋಗಿ ಯಾಗಿತ್ತು. ನನಗೆ ಅದನ್ನು ವಾದಿಸಲು ಗೊತ್ತು. ಹಾಗಾಗಿ ಅದು ನನ್ನದು’ ಎಂದ. ನೆರೆದ ಜನರು ಅವನನ್ನು ಅನುಮೋದಿಸಿ ದರು.
ಯಾರಿಗೆ ವಾದನ ಗೊತ್ತಿದೆಯೋ ವಾದ್ಯ ಅವರದು. ಯಾರಿಗೆ ಬದುಕಲು ಗೊತ್ತಿದೆಯೇ ಬದುಕು ಅವರದು ಎನ್ನುವುದಕ್ಕೆ ಉದಾಹರಣೆಯಾಗಿ ಓಶೋ ರಜನೀಶ್‌ ಈ ಕಥೆ ಹೇಳಿದ್ದಾರೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.