ಕನಸು ಕರಗಬಹುದು ಎಂಬ ಎಚ್ಚರದ ಬದುಕು


Team Udayavani, Oct 3, 2020, 6:03 AM IST

ಕನಸು ಕರಗಬಹುದು ಎಂಬ ಎಚ್ಚರದ ಬದುಕು

ನಾಸಿರುದ್ದೀನ್‌ಗೆ ಒಂದು ದಿನ ರಾತ್ರಿ ಕನಸು ಬಿತ್ತು. ಒಬ್ಬ ಮನುಷ್ಯ ಮನೆ ಬಾಗಿಲನ್ನು ತಟ್ಟುತ್ತಿದ್ದ. ನಾಸಿರುದ್ದೀನ್‌ ಬಾಗಿಲು ತೆರೆದಾಗ ಆತ “ಇಂದು ರಾತ್ರಿ ನಾನು ನಿನ್ನ ಮನೆಯಲ್ಲಿ ಉಳಿದುಕೊಳ್ಳಬಹುದೇ?’ ಎಂದು ಕೇಳಿದ. ಆತಿಥ್ಯಕ್ಕೆ ಪ್ರತಿಯಾಗಿ 10 ಚಿನ್ನದ ವರಹ ನೀಡುವುದಾಗಿ ಆತ ಆಶ್ವಾಸನೆಯನ್ನು ಕೊಟ್ಟ. ಹಣದಾಸೆಗಾಗಿ ನಾಸಿರುದ್ದೀನ್‌ ಇದಕ್ಕೆ ಒಪ್ಪಿಕೊಂಡ. ಆತನಿಗೆ ಮಲಗುವ ಕೊಠಡಿಯನ್ನು ತೋರಿಸಿಕೊಟ್ಟ. ಒಳ್ಳೆಯ ಊಟ, ಬೆಚ್ಚನೆಯ ಹೊದಿಕೆ ಎಲ್ಲವನ್ನೂ ಕೊಟ್ಟ. ಮರುದಿನ ಬೆಳಗಾಯಿತು. ಅತಿಥಿ ಎದ್ದು ಉಪಾಹಾರ ಸ್ವೀಕರಿಸಿ ಹೊರಡಲು ಅನುವಾದ. ತನ್ನ ಬಳಿ ಇದ್ದ ಗಂಟಿನಿಂದ ಒಂಬತ್ತು ಚಿನ್ನದ ವರಹಗಳನ್ನು ಎಣಿಸಿಕೊಟ್ಟ.

“ನೀನು 10 ಚಿನ್ನದ ವರಹಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದೀ’ ಎಂದು ಚೀರಾಡುವಾಗ ನಾಸಿರುದ್ದೀನನಿಗೆ ಎಚ್ಚರವಾಯಿತು. ಅತಿಥಿ ಎಲ್ಲಿ ಎಂದು ಹುಡುಕಿದರೆ ಅಲ್ಲಿ ಯಾರೂ ಇರಲಿಲ್ಲ.

ನಾಸಿರುದ್ದೀನ್‌ ತನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು “ಒಂಬತ್ತು ವರಹಗಳನ್ನಾದರೂ ಕೊಡು’ ಎಂದು ಬೇಡಿಕೊಂಡ. ಆದರೆ ಕನಸು ಕರಗಿ ಹೋಗಿತ್ತು.

ನಾವು ನಿದ್ರಿಸುತ್ತಿರುವಾಗ ನಮ್ಮ ಆತ್ಮ ಎಚ್ಚರವಾಗಿರುತ್ತದೆ ಎಂಬುದು ಉಪನಿಷತ್ತುಗಳು ಹೇಳುವ ಮಾತು. ದೇಹ ಮಲಗಿ ವಿಶ್ರಾಂತಿ ಪಡೆಯುತ್ತಿರು ವಾಗ ಆತ್ಮ ಅಥವಾ ಬ್ರಹ್ಮ ಎಲ್ಲ ಇಂದ್ರಿಯ ಶಕ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಸಕ್ರಿಯವಾಗಿರುತ್ತದೆ. ವಾಸ್ತವದಲ್ಲಿ ದೇಹವು ಅನುಭವಿಸಲು ಸಾಧ್ಯವಾಗದ ಎಲ್ಲವನ್ನೂ ನಿದ್ರೆಯಲ್ಲಿ ಅನುಭವಿಸಲು ಸಾಧ್ಯವಾಗುವುದು ಇದೇ ಕಾರಣಕ್ಕೆ. ಕನಸಿನಲ್ಲಿ ಅರಸನಾಗಬಹುದು, ವೃದ್ಧ ಮತ್ತೆ ಮಗುವಾಗಬಹುದು, ಕಡುಬಡವನೂ ಐಷಾರಾಮಿ ಭೋಜನ ಸವಿಯಬಹುದು – ಕನಸಿನಲ್ಲಿ ಎಲ್ಲವೂ ಸಾಧ್ಯ. ದೇಹಕ್ಕೆ ಎಚ್ಚರವಾದಾಗ ಇಂದ್ರಿಯ ಶಕ್ತಿಗಳು ಲೌಕಿಕಕ್ಕೆ ಮರಳುತ್ತವೆ.

ಕಂಡಿರುವ ಕನಸು ನಿಜವೇ ಎಂದು ಕೇಳಿದರೆ “ಅಲ್ಲ’. ಆದರೆ ಕನಸು ಕಂಡಿರುವುದು ನಿಜ, ಅದರಲ್ಲಿ ಅನುಭವಿಸಿದ್ದು ನಿಜ – ಕನಸಿನ ಮಟ್ಟಿಗೆ ಮಾತ್ರ. ನಿದ್ದೆಯಿಂದ ಎದ್ದ ಬಳಿಕ ಅಲ್ಲ.

ನಾವು ಈಗ ವಾಸ್ತವ ಎಂದು ಗ್ರಹಿಸಿರುವುದೇ ಒಂದು ಕನಸಾಗಿದ್ದು, ಈ ಕನಸನ್ನು ಕಾಣುತ್ತಿರುವ ನಿದ್ದೆಯಿಂದ ಒಂದು ದಿನ ಎಚ್ಚೆತ್ತುಕೊಳ್ಳುವುದಕ್ಕೆ ಇರಬಹುದೇ? ಆಗ ನಾಸಿರುದ್ದೀನನಂತೆ ಕಣ್ಣೆದುರು ಕಾಣುತ್ತಿದ್ದ ಕನಸಿನಲ್ಲಿ ಎಷ್ಟು ಲಭಿಸಿತ್ತೋ ಅಷ್ಟರಿಂದ ಸಂತೃಪ್ತಿ ಪಟ್ಟುಕೊಳ್ಳಬೇಕಿತ್ತು ಎಂದು ಪರಿತಪಿಸಿಕೊಳ್ಳುವ ಸ್ಥಿತಿ ಬರಬಹುದೇ?!

ನಾವು ಬದುಕುತ್ತಿರುವ ಈ ವಾಸ್ತವವು ಒಂದು ಕನಸಾಗಿರುವುದಕ್ಕೂ ಸಾಧ್ಯ ಎಂಬ ಆಧ್ಯಾತ್ಮಿಕ ಒಳ ನೋಟವನ್ನು ಸೂಚ್ಯವಾಗಿ ಹೇಳುತ್ತಲೇ ಮನುಷ್ಯ ಜನ್ಮ ದೊಡ್ಡದು ಎಂದು ದಾಸರು ಹಾಡಿದ್ದಾರೆ. ಕೈಯಲ್ಲಿರುವ ಬದುಕು ಕನಸಿನಂತೆ ಒಡೆದು ಹೋಗಬಹುದು. ಹಾಗಾಗಿ ಇರುವ ಬದುಕನ್ನು ಅದರ ಪೂರ್ಣ ಅರ್ಥದಲ್ಲಿ ಜೀವಿಸಬೇಕು. ಪ್ರತೀಕ್ಷಣವೂ ಸಕಾರಾತ್ಮಕ ವಾಗಿರಬೇಕು, ಸಕ್ರಿಯವಾಗಿರಬೇಕು. ಪ್ರಾಮಾಣಿಕತೆ, ಸತ್ಯಪರತೆ, ಪರೋಪ ಕಾರಗಳಂತಹ ಸದ್ಗುಣಗಳ ಬೆಳಕಿನಲ್ಲಿ ಲವಲವಿಕೆಯ ಬದುಕನ್ನು ಮುನ್ನಡೆಸಬೇಕು. ಆಗ ನಮ್ಮೆದುರಿಗಿರುವ ಬದುಕು ಅರ್ಥಪೂರ್ಣ ಎಂಬ ಸಂತೃಪ್ತಿ, ಸಮಾಧಾನ ನಮ್ಮಲ್ಲಿ ಉದಯಿಸುತ್ತದೆ, ಜೀವನದ ಪ್ರತೀ ಕ್ಷಣವೂ ಖುಷಿಯದಾಗುತ್ತದೆ.

ಈಗಿರುವ ಬದುಕು ಒಂದು ಕನಸಿನಂತೆ, ಯಾವುದೇ ಕ್ಷಣದಲ್ಲಿ ಕರಗಬಹುದು ಎಂಬ ಪ್ರತೀಕ್ಷಣದ ಎಚ್ಚರವೇ ಸದಾ ಬೆಳಕನ್ನು ನೀಡುವ ನಂದಾದೀಪದಂತೆ ಬದುಕಿ ಬೆಳಗುವ ಶಕ್ತಿಯನ್ನು ನಮಗೆ ಒದಗಿಸುತ್ತದೆ.

(ಕತೆಯೊಂದರ ಸಾರ ಸಂಗ್ರಹ)

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.