ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!


Team Udayavani, Nov 26, 2020, 5:45 AM IST

JIVAYAN

ಸಾಂದರ್ಭಿಕ ಚಿತ್ರ

ಒಬ್ಬ ಕುದುರೆ ವ್ಯಾಪಾರದವನಿದ್ದ. ಅವನಿಗೆ ಕುದುರೆಗಳನ್ನು ಮಾರುವುದು ಬರೀ ಬದುಕಲ್ಲ; ಹವ್ಯಾಸವೂ ಸಹ. ಯಾವು ದ್ಯಾವುದೋ ಊರುಗಳಿಂದ ಒಂದಿಷ್ಟು ಕುದುರೆಗಳನ್ನು ತರುವುದು, ಅದನ್ನು ರೇಸಿನಲ್ಲಿ ಗೆಲ್ಲುವ ಕುದುರೆಗಳನ್ನಾಗಿ ರೂಪಿಸುವುದು, ಯಾವ ಕುದುರೆಗಳು ಅವನ ನಿರೀಕ್ಷೆಗೆ ತಕ್ಕಂತೆ ನಡೆದು ಕೊಳ್ಳುವುದಿಲ್ಲವೋ, ಅವುಗಳನ್ನು ಹೊರಗೆ ಹಾಕುವುದು, ಒಳ್ಳೆಯ ದೆಂದು ಅಂದು ಕೊಂಡ ಕುದುರೆಗಳನ್ನು ಮಾರು ಕಟ್ಟೆ ದರ ಅನುಸರಿಸಿ ಮಾರುವುದು- ಬಂದಷ್ಟು ಲಾಭವನ್ನು ಸಂಗ್ರಹಿಸಿಟ್ಟುಕೊಂಡು, ನಾನಿಂತಿಷ್ಟು ಹಣದ ಒಡೆಯ ಎಂದು ಕೊಂಡು ಸಂಭ್ರಮಿಸುವುದು. ಇಷ್ಟು ಬಿಟ್ಟರೆ ಮನೆ, ಕುಟುಂಬ ಯಾವುದೂ ಖುಷಿ ತರುವ ಸಂಗತಿಯಾಗಿರಲಿಲ್ಲ ಅವನಿಗೆ.

ಅದೇ ಊರಿನಲ್ಲಿ ಮತ್ತೂಬ್ಬನಿದ್ದ. ಅವನ ಲೆಕ್ಕಾಚಾರವೇ ಬೇರೆ. ಇವನೂ ಕುದುರೆ ವ್ಯಾಪಾರದವನೇ. ಮೊದಲಿನವನು ಹೀಗೆ ಬೇಡವೆಂದು ತಿರಸ್ಕರಿಸುವ ಕುದುರೆಗಳನ್ನು ತಂದು, ಕೆಲವೊಮ್ಮೆ ಒಂದಿಷ್ಟು ಕಾಸನ್ನು ಕೊಟ್ಟು ಖರೀದಿ ಮಾಡಿ, ಅವುಗಳನ್ನು ತರಬೇತು ಮಾಡಿ ಇತರ ಕೆಲಸಗಳಿಗೆ ಬಳಸಿ ಬದುಕು ಕೊಡುತ್ತಿದ್ದ. ಕೆಲವರು ತಮ್ಮ ಅಗತ್ಯಗಳಿಗ ನುಸಾರ ಇವ ನಲ್ಲಿಗೆ ಕುದುರೆ ಕೇಳಿಕೊಂಡು ಬರುತ್ತಿದ್ದರು. ಇವನೂ ತಾನು ಕೊಟ್ಟ ಬೆಲೆ ಹಾಗೂ ಇದುವರೆಗೆ ಮಾಡಿರಬ ಹುದಾದ ಅಂದಾಜು ವೆಚ್ಚ ಹೇಳಿ, ಅದಕ್ಕಿಂತ ಹತ್ತು ರೂ. ಜಾಸ್ತಿ ದರಕ್ಕೆ ಮಾರುತ್ತಿದ್ದ. ಹಾಗೆ ನೋಡುವುದಾದರೆ ಇವನ ಕುದುರೆಗಳೇ ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ ಲಾಭ ಕಡಿಮೆ.

ದಿನೇದಿನೆ ಇಬ್ಬರ ಜನಪ್ರಿಯತೆಯೂ ಹೆಚ್ಚ ತೊಡಗಿತು. ಮೊದಲಿನವನ ಮನೆ ಎದುರು ಬರೀ ಕಾರುಗಳೇ ನಿಲ್ಲುತ್ತಿದ್ದವು. ಎರಡನೆ ಯವನ‌ ಮನೆಯಲ್ಲಿ ಯಾವಾಗಲೂ ಜನ ಜಂಗುಳಿ. ವಾಸ್ತವದಲ್ಲಿ ಎರಡನೆ ಯವನ‌ ಜನಪ್ರಿಯತೆಯೇ ಕೊಂಚ ಹೆಚ್ಚಾಗಿತ್ತು.

ಒಮ್ಮೆ ಇಬ್ಬರೂ ಪರಸ್ಪರ ಭೇಟಿಯಾದರು. ಕುಶಲೋಪರಿ ಮುಗಿಯಿತು. ಆ ಬಳಿಕ ಮೊದಲಿನವನು, ತನ್ನ ಮನೆಗೆ ಬರುವವರ ಬಗ್ಗೆ, ಅವರು ಖರೀದಿಸಿದ ಕುದುರೆಗಳ ಬಗ್ಗೆ, ಹಣದ ಬಿಕರಿಯ ಕುರಿತೆಲ್ಲ ವಿವರಿಸಿದ. ಇದನ್ನು ಕೇಳಿದ ಮತ್ತೂಬ್ಬನಲ್ಲಿ ಹೇಳುವಂಥದ್ದೇನೂ ಇರಲಿಲ್ಲ. ಹಾಗಾಗಿ ತನ್ನ ಕುದುರೆಗಳ ವೈಶಿಷ್ಟéದ ಕುರಿತು ಗ್ರಾಹಕರಲ್ಲಿ ವಿವರಿಸುವುದನ್ನೆಲ್ಲ ಹೇಳಿದ. ಇದರ ಹೆಸರು ಇಂಥದ್ದು, ಇದಕ್ಕೆ ಇಂಥ ಆಹಾರವೇ ಇಷ್ಟ, ಇದನ್ನು ಹೀಗೆಯೇ ನೋಡಿಕೊಳ್ಳಬೇಕು ಎಂದು ಹೇಳುವುದನ್ನೆಲ್ಲ ಹೇಳಿದ. ಮೊದಲಿನವನಿಗೆ ಇವೆಲ್ಲ ವ್ಯರ್ಥ ಅನಿಸಿತು. ಆಗ ಸಲಹೆ ನೀಡುವಂತೆ, ನಾಳೆಯಿಂದ ನಾನು ಮಾಡಿದಂತೆ ಮಾಡು. ಬಂದವರಿಗೆ ಕುದುರೆಯನ್ನು ತೋರಿಸು. ಒಳ್ಳೆಯದನ್ನು ಹುಡುಕಿ ಕೊಂಡು ಹೋಗಲಿ, ಅದು ಅವರವರ ಅದೃಷ್ಟ ಎಂದ. ಅದಕ್ಕೆ ಎರಡನೆಯವನು ಮೃದು ಸ್ವರದಲ್ಲಿ, ಅಣ್ಣಾ, ಅದು ನಿನಗೆ ವ್ಯಾಪಾರ. ಇದು ನನಗೆ ಬದುಕು ಎಂದಷ್ಟೇ ಹೇಳಿ ಹೊರಟು ಹೋದ.

ನಾವು ಹಲವು ಬಾರಿ ಬದುಕಿನಲ್ಲಿ ವ್ಯಾಪಾರಿ ಗಳಂತಾಗಿ ಬಿಡುತ್ತೇವೆ; ಮಧ್ಯವರ್ತಿಗಳಂತೆ. ಹಾಗೆ ತಂದು ಹೀಗೆ ದಾಟಿಸಿಬಿಡುತ್ತೇವೆ. ಯಾವುದನ್ನೂ ಅನುಭವಿಸುವುದಿಲ್ಲ. ಆಗ ಸಂತಸ ಎನ್ನುವುದು ಸಿಗುವುದಾದರೂ ಹೇಗೆ? ಮೊದಲಿನ ಕುದುರೆ ವ್ಯಾಪಾರಿ ಜೀವಿಸುತ್ತಿದ್ದ; ಬದುಕುತ್ತಿರಲಿಲ್ಲ. ಎರಡನೆ ಯವ ಜೀವಿಸುತ್ತಲೂ ಇದ್ದ; ಬದುಕುತ್ತಲೂ ಇದ್ದ. ನಮ್ಮಲ್ಲಿ ಎಷ್ಟಿದೆ ಎಂಬುದಕ್ಕಿಂತಲೂ ಇರುವುದನ್ನು ಎಷ್ಟು ಅನುಭವಿಸುತ್ತಿದ್ದೇವೆ ಎನ್ನುವುದೇ ಮುಖ್ಯ. ಇಲ್ಲವಾದರೆ ನಮ್ಮ ಬದುಕಿಗೂ, ಯಂತ್ರದ ತಿರುಗುವಿಕೆಗೂ ಕೊಂಚವೂ ವ್ಯತ್ಯಾಸವಿರದು.

ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.