ನೋವಿನ ಕಾರ್ಖಾನೆ ಲಾಕ್‌ಡೌನ್‌ಗೆ ಇದು ಸರಿಯಾದ ಸಮಯ


Team Udayavani, Nov 23, 2020, 5:59 AM IST

ನೋವಿನ ಕಾರ್ಖಾನೆ ಲಾಕ್‌ಡೌನ್‌ಗೆ ಇದು ಸರಿಯಾದ ಸಮಯ

ಪಕ್ಕದ ಮನೆಯವನು ಟಿವಿಯನ್ನು ಜೋರಾಗಿ ಹಾಕುತ್ತಾನೆ ಎಂಬ ಸಿಟ್ಟು, ತರಕಾರಿ ಅಂಗಡಿಯವನು ಕೊತ್ತಂಬರಿ ಸೊಪ್ಪು ಕಡಿಮೆ ಕೊಟ್ಟನೇನೋ ಎಂಬ ಸಂಶಯ, ಹೆಂಡತಿ ಶರಟಿಗೆ ಸರಿಯಾಗಿ ಇಸ್ತ್ರಿ ಹಾಕಿ ಕೊಡಲಿಲ್ಲ ಎಂಬ ಅಸಮಾಧಾನ… ಎಲ್ಲವೂ ನಾವೇ ಹುಟ್ಟು ಹಾಕಿಕೊಂಡದ್ದು. ದುಃಖ ದುಮ್ಮಾನಗಳು, ಸಿಟ್ಟು ಸೆಡವುಗಳ ಕಾರ್ಖಾನೆ ನಮ್ಮೊಳಗೇ ಇದೆ. ಅದರ ಬಾಗಿಲು ಮುಚ್ಚಿ ಉತ್ಪಾದನೆ ಸ್ಥಗಿತಗೊಳಿಸಿ ಲಾಕ್‌ಡೌನ್‌ ಘೋಷಿಸುವುದಕ್ಕೆ ಇದು ಸರಿಯಾದ ಹೊತ್ತು.

ನಮ್ಮ ನರಳುವಿಕೆಯಲ್ಲಿ ಎರಡು ವಿಧ- ದೈಹಿಕ ಮತ್ತು ಮಾನಸಿಕ. ನಮ್ಮ ನೋವಿನಲ್ಲಿ ತೊಂಬತ್ತು ಪ್ರತಿಶತ ಕೊಡುಗೆ ಮನಸ್ಸಿನದ್ದು. ಸಿಟ್ಟು, ಭಯ, ದ್ವೇಷ, ಈಷ್ಯೆ, ಅಭದ್ರತೆ… ಹೀಗೆ ನಾವು ಪ್ರತೀ ದಿನ ನಮ್ಮೊಳಗೆಯೇ ಬಗೆಬಗೆಯ ನೋವುಗಳನ್ನು ಉತ್ಪಾದಿಸುತ್ತಿರುತ್ತೇವೆ.

ನೋವು ಉತ್ಪಾದನೆ ಹೇಗೆ ಆಗುತ್ತದೆ ಎಂಬುದನ್ನು ಪರಿಶೀಲಿಸೋಣ. ಇವತ್ತು ಬೆಳಗ್ಗೆ ಸೂರ್ಯ ಪೂರ್ವ ದಲ್ಲಿ ಸರಿಯಾದ ಹೊತ್ತಿಗೇ ಉದಯಿಸಿದ್ದಾನೆ. ಹೂವು ಗಳು ಅರಳಿವೆ, ಹಕ್ಕಿಗಳು ಎಂದಿನಂತೆ ಗಿಡದಿಂದ ಗಿಡಕ್ಕೆ ಹಾರುತ್ತ ತಮ್ಮ ಕೆಲಸ ಮಾಡುತ್ತಿವೆ, ತೆಂಗಿನ ಮರ ದಲ್ಲಿ ಕೊಂಬೊಡೆದಿದೆ, ಬಾವಿಯ ನೀರು ತಳ ಹತ್ತಿಲ್ಲ… ಎಲ್ಲವೂ ಅವುಗಳ ಪಾಡಿಗೆ ವ್ಯವಸ್ಥಿತ ವಾಗಿ ನಿಯಮ ಪ್ರಕಾರ ನಡೆಯುತ್ತಿವೆ. ಇಡೀ ವಿಶ್ವ ಇಷ್ಟು ಚೆನ್ನಾಗಿ ಮುನ್ನಡೆಯು ತ್ತಿರುವಾಗ ನಮ್ಮ ತಲೆಯೊಳಗೆ ಮಾತ್ರ ಒಂದು ಹುಳ ತೂತು ಕೊರೆಯುತ್ತಿರುತ್ತದೆ ಮತ್ತು ಈ ದಿನ ಚೆನ್ನಾಗಿಲ್ಲ, ಅದು ಕೆಟ್ಟದಾಗಿದೆ, ಇದು ಸರಿಯಾಗಿಲ್ಲ ಎಂದು ಗಿರಕಿ ಹೊಡೆಯುತ್ತಿರು ತ್ತದೆ. ಬದುಕು ಎಂದರೆ ಏನು ಎಂಬುದನ್ನು ಗ್ರಹಿಸಲು ಅಶಕ್ತರಾಗಿರುವುದರಿಂದ ನಮ್ಮಲ್ಲಿ ನೋವು ಉತ್ಪಾದನೆಯಾಗುತ್ತದೆ. ನಮಗೆ ಸೃಷ್ಟಿಯ ಮಹೋನ್ನತ ಪ್ರಕ್ರಿಯೆಗಿಂತ ನಮ್ಮ ಮನೋಪ್ರಕ್ರಿಯೆಯೇ ದೊಡ್ಡದು ಎಂಬಂತೆ ಭಾಸವಾಗುತ್ತಿದೆ. ನೇರವಾಗಿ ಹೇಳಬೇಕೆಂದರೆ ನಾವು ಸೃಷ್ಟಿಸಿಕೊಂಡಿರುವ ಕ್ಷುಲ್ಲಕ ನೋವುಗಳೇ ಸೃಷ್ಟಿಕರ್ತನ ಸೃಷ್ಟಿಗಿಂತ ದೊಡ್ಡದು ಎಂಬ ಗ್ರಹಿಕೆ.

ನಮ್ಮ ಎಲ್ಲ ನರಳುವಿಕೆಯ ಮೂಲ ಇದು. ಇಲ್ಲಿ ಬದುಕುವುದು ಎಂದರೇನು ಎಂಬ ಅರಿವು, ಪ್ರಜ್ಞೆ ನಮ್ಮಿಂದ ಸಂಪೂರ್ಣವಾಗಿ ಕೈತಪ್ಪಿ ಹೋಗಿದೆ. ನಮ್ಮ ತಲೆಯೊಳಗಿನ ಯಾವುದೋ ಒಂದು ಆಲೋಚನೆ, ಒಂದು ಭಾವನೆ ನಮ್ಮ ಈಗಿನ ಜೀವನದ ಅನುಭವವನ್ನು ಪ್ರಭಾವಿಸುತ್ತಿರುತ್ತದೆ. ಸೃಷ್ಟಿ ಅತ್ಯಂತ ಅದ್ಭುತವಾಗಿ ಮುನ್ನಡೆಯುತ್ತಿದ್ದರೂ ನಮ್ಮ ಮನಸ್ಸಿನ ಒಂದು ಭಾವನೆ ಅಥವಾ ಆಲೋಚನೆ ನಮ್ಮ ಪಾಲಿಗೆ ಅದನ್ನು ಹಾಳು ಗೆಡವುತ್ತದೆ. ನಮ್ಮ ಈ ಆಲೋಚನೆ ಮತ್ತು ಭಾವನೆಯಿಂದ ನಮ್ಮ ಪರಿಮಿತ ವ್ಯಾಪ್ತಿಯ ಅಸ್ತಿತ್ವಕ್ಕೂ ಏನೂ ಉಪಯೋಗವಿಲ್ಲ ಅನ್ನುವುದೂ ವಿಪರ್ಯಾಸ.

ನಾವು “ನಮ್ಮ ಮನಸ್ಸು’ ಅಂದುಕೊಂಡಿ ರುವುದು ಕೂಡ ನಿಜವಾಗಿ ನಮ್ಮದಲ್ಲ. ಎಲ್ಲವೂ ಎರವಲು ಪಡೆದು ಕೊಂಡದ್ದು. ಮನಸ್ಸು ಸಮಾಜದ ಕಸದಬುಟ್ಟಿ ಇದ್ದ ಹಾಗೆ. ಅವನು ಹೇಳಿದ್ದು, ಇವನು ಮಾಡಿದ್ದು, ಇಲ್ಲಿ ಆದದ್ದು, ಅಲ್ಲಿ ಹೋದದ್ದು ನಮ್ಮ ಮನಸ್ಸಿನೊಳಗೆ ಪ್ರತಿಕ್ರಿಯೆಗಳನ್ನು ಉತ್ಪಾದಿ ಸುತ್ತಿರುತ್ತದೆ. ಇಲ್ಲಿ ನಮಗೆ ಬೇಕು ಅಥವಾ ಬೇಡ ಎನ್ನುವ ಆಯ್ಕೆಗಳಿಲ್ಲ. ಹೀಗಾಗಿ ಈ ಕಸವನ್ನು ಚೆನ್ನಾಗಿ ಬಳಸಿಕೊಳ್ಳಲು ಗೊತ್ತಿದ್ದರೆ ಮಾತ್ರ ಅದು ಉಪಯೋಗಿ.

ಆಧ್ಯಾತ್ಮಿಕ ಬದುಕು ಎಂದರೆ ಸೃಷ್ಟಿ ಹೇಗಿ ದೆಯೋ ಹಾಗೆ ಅನುಭವಿಸಲು, ಪರಿಗ್ರಹಿಸಲು ಕಲಿಯುತ್ತ ಹೋಗುವುದು, ನಮ್ಮ ಆಲೋಚನೆಗಳ ಮೂಲಕ ಅಂಕು ಡೊಂಕಾಗಿ ಗ್ರಹಿಸುವುದಲ್ಲ. ಸರಳವಾಗಿ ಹೇಳಬೇಕಾದರೆ ನಾವು ಯೋಚಿಸಿದ್ದು, ನಾವು ಭಾವಿಸಿದ್ದು ಮುಖ್ಯವಲ್ಲ. ನಮ್ಮ ಮನೋಭಾವನಾತ್ಮಕ ಸೃಷ್ಟಿಯಲ್ಲ, ಅಖಂಡ ಸೃಷ್ಟಿಯೇ ಪರಮ ಸತ್ಯ.

ಅದಕ್ಕಾಗಿಯೇ ಹೇಳಿದ್ದು, ನೋವು ಉತ್ಪಾದಿಸುವ ಕಾರ್ಖಾನೆಯನ್ನು ಮುಚ್ಚಲು ಇದು ಸರಿಯಾದ ಸಮಯ.

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.