ಜೀವಯಾನ; ಬಾಳಿಗೊಂದಿಷ್ಟು ಬೆಳಕು: ಅಚಲ ನಂಬಿಕೆ, ವಿಶ್ವಾಸ ನಮ್ಮದಾಗಿರಬೇಕು


Team Udayavani, Aug 14, 2020, 6:26 AM IST

ಜೀವಯಾನ; ಬಾಳಿಗೊಂದಿಷ್ಟು ಬೆಳಕು: ಅಚಲ ನಂಬಿಕೆ, ವಿಶ್ವಾಸ ನಮ್ಮದಾಗಿರಬೇಕು

ವಿಶ್ವಾಸ ಮತ್ತು ನಂಬಿಕೆಗಳು ಬಹಳ ಸುಂದರ ಪದಗಳು. ಅವುಗಳಲ್ಲಿ ನಿಹಿತವಾದ ಅರ್ಥವೂ ಅಷ್ಟೇ ಸುಂದರ ಮತ್ತು ಆಳವಾದದ್ದು. ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವರೇ ಒಳ್ಳೆಯದು ಮಾಡು ಎಂದು ಪ್ರಾರ್ಥಿಸುತ್ತೇವೆ. ದೇವರು ನಮಗೆ ಒಳಿತನ್ನು ಉಂಟು ಮಾಡುತ್ತಾನೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ದೇವರನ್ನು ನಾವು ಕಣ್ಣಾರೆ ಕಾಣದಿದ್ದರೂ ಆತ ಇದ್ದಾನೆ ಮತ್ತು ನಮ್ಮೆಲ್ಲರ ಮೇಲೆ ಆತನ ಕೃಪೆ ಇರುತ್ತದೆ ಎಂದು ಅಚಲವಾಗಿ ನಂಬಿದ್ದೇವೆ.

ಆದರೆ ಈ ನಂಬಿಕೆ, ವಿಶ್ವಾಸಗಳ ತಳಹದಿ ಯೇ ಕೆಲವೊಮ್ಮೆ ಅಲ್ಲಾಡುತ್ತದೆ. ಏನನ್ನೋ ದೇವರ ಬಳಿ ಕೇಳಿಕೊಂಡಿದ್ದೇವೆ ಎಂದುಕೊಳ್ಳಿ. ಉದಾಹರಣೆಗೆ, ಲಾಟರಿಯಲ್ಲಿ ಬಂಪರ್‌ ಬಹುಮಾನವಾದ ಕಾರು ನಮಗೇ ಸಿಗಬೇಕು ಎಂದು ಪ್ರಾರ್ಥಿಸಿಕೊಂಡಿದ್ದೇವೆ, ಆದರೆ ಅದು ಒಲಿಯುವುದಿಲ್ಲ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳು ಸಿಗಲಿ ಎಂದು ಬೇಡಿ ಕೊಂಡಿದ್ದೇವೆ. ಫ‌ಲಿತಾಂಶ ಬಂದಾಗ ಒಂದೆರಡು ಅಂಕಗಳು ಕಡಿಮೆ ಸಿಗುತ್ತದೆ.

ನಮ್ಮ ತತ್‌ಕ್ಷಣದ ಪ್ರತಿ ಕ್ರಿಯೆಯೇನು? ದೇವರು ನಾನು ಕೇಳಿದ್ದನ್ನು ಈಡೇರಿಸ ಲಿಲ್ಲವಲ್ಲ ಎಂಬ ಅವಿಶ್ವಾಸದ ಒಂದೆಳೆ ಮನಸ್ಸಿನಲ್ಲಿ ಹಾದು ಹೋಗುತ್ತದೆ. ನಿಜಕ್ಕೂ ವಿಶ್ವಾಸ ಮತ್ತು ನಂಬಿಕೆ ಹೀಗಿರಲು ಸಾಧ್ಯವೇ ಇಲ್ಲ. ಅವಿಶ್ವಾಸ ಮತ್ತು ಅಪನಂಬಿಕೆಯ ಒಂದು ಸಣ್ಣ ಎಳೆಯೂ ಅದರಲ್ಲಿ ಇರುವುದಿಲ್ಲ. ದೇವರು ಮಾತ್ರವಲ್ಲ; ಎಲ್ಲದರ ಮೇಲೆಯೂ ನಮ್ಮ ನಂಬಿಕೆ ಮತ್ತು ವಿಶ್ವಾಸ ಅಚಲವಾಗಿರಬೇಕು. ಗುರು ಓಶೋ ರಜನೀಶ್‌ ನಂಬಿಕೆ ಮತ್ತು ವಿಶ್ವಾಸ ಹೇಗಿರಬೇಕು ಎನ್ನುವುದನ್ನು ಸುಂದರ ವಾದ ಕಥೆಯ ಮೂಲಕ ವಿವರಿಸುತ್ತಾರೆ.

ನವವಿವಾಹಿತ ಯೋಧನೊಬ್ಬ ಪತ್ನಿ ಜತೆ ದೋಣಿಯಲ್ಲಿ ಪ್ರಯಾಣ ಹೊರಟಿದ್ದ. ಪ್ರಯಾಣದ ನಡುವೆ ಹಠಾತ್ತನೆ ದಿಗಂತದಲ್ಲಿ ಕಾರ್ಗತ್ತಲು ಮುಸುಕಿತು. ಸಮುದ್ರದಲ್ಲಿ ಭೀಕರ ಚಂಡಮಾರುತ ಸೃಷ್ಟಿಯಾಯಿತು. ದೋಣಿ ಹೊಯ್ದಾಡಲಾರಂಭಿಸಿತು. ನವವಧು ಗಾಬರಿಗೊಂಡಳು. ಪತಿಯತ್ತ ನೋಡಿದರೆ ಅವನ ಮುಖದಲ್ಲಿ ಹೆದರಿಕೆಯ ಲವಲೇಶವೂ ಇಲ್ಲ. “ಎಂಥ ಭಯಾನಕ ಸನ್ನಿವೇಶ ಇದು, ನಿಮಗೆ ಭಯವಾಗುವುದಿಲ್ಲವೇ?’ ಎಂದು ಕೇಳಿದಳು ಆಕೆ.

ಆತ ಉತ್ತರಿಸಲಿಲ್ಲ. ಒರೆಯಿಂದ ಖಡ್ಗ ವನ್ನು ಸೆಳೆದು ಪತ್ನಿಯ ಕಂಠಕ್ಕಾನಿಸಿ ಹಿಡಿದ. “ಹೆದರಿಕೆ ಯಾಗುತ್ತದೆಯೇ?’ ಎಂದ. ಆಕೆ ನಸುನಕ್ಕು, “ಇದೊಳ್ಳೆ ಪ್ರಶ್ನೆಯಾಯಿತಲ್ಲ! ನಾನೇಕೆ ಹೆದರಲಿ, ನನ್ನ ಕೊರಳ ಮೇಲಿರುವುದು ಖಡ್ಗ ನಿಜ ಆದರೆ ಅದನ್ನು ಹಿಡಿ ದಿರುವವರು ನೀವು, ನನ್ನ ಪತಿ ದೇವರಲ್ಲವೇ!’ ಎಂದಳು.

“ನೀನು ಆಗ ಕೇಳಿದ ಪ್ರಶ್ನೆಗೆ ನಿನ್ನ ಮಾತಿನಲ್ಲೇ ಉತ್ತರ ಅಡಗಿದೆ. ಈ ಚಂಡಮಾರುತ ದೇವರ ಕೈಯಲ್ಲಿದೆ. ಹಾಗಾಗಿ ಆಗಲಿರುವುದು ಏನೇ ಆದರೂ ಅದು ಒಳ್ಳೆಯದಕ್ಕೇ ಆಗಿರುತ್ತದೆ. ನಾವು ಉಳಿದರೂ ಅಳಿದರೂ ಅವನಿಂದಲೇ. ಏಕೆಂದರೆ ನಮ್ಮನ್ನು ಸೃಷ್ಟಿಸಿದವನು ದೇವರು ಮತ್ತು ಆತ ನಮಗೆ ಕೆಟ್ಟದ್ದನ್ನು ಮಾಡಲಾರ ಎಂಬ ನಂಬಿಕೆ ನನ್ನದು’ ಎಂದ ಆತ.

ಅಚಲ ನಂಬಿಕೆ ಅಂದರೆ ಇದು. ನಾವು ಮಾಡುವ ಕೆಲಸದಲ್ಲಿ, ನಮ್ಮ ಉದ್ದೇಶದಲ್ಲಿ, ಗುರಿಗಳಲ್ಲಿ ಇಂಥ ದೃಢ ನಂಬಿಕೆ ಹೊಂದಿರಬೇಕು. ಅದೇ ನಮ್ಮ ಬದುಕನ್ನು ಬದಲಾಯಿಸುತ್ತದೆ – ಬೆಳೆಸುತ್ತದೆ ಎನ್ನುತ್ತಾರೆ ಓಶೋ.

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು [email protected]ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.