ಜೀವನ ಎಂದರೆ ಅದು ನಾವೇ!


Team Udayavani, Oct 21, 2020, 6:10 AM IST

ಜೀವನ ಎಂದರೆ ಅದು ನಾವೇ!

ಸಾಂದರ್ಭಿಕ ಚಿತ್ರ

ಜೀವನ, ಬದುಕು ಎಂದರೇನು ಎಂಬುದು ನಾವೆಲ್ಲ ಆಗಾಗ ಕೇಳಿಕೊಳ್ಳುವ ಪ್ರಶ್ನೆ. ನಿಜ ಏನೆಂದರೆ ನಾವೇ ಜೀವನ, ಬದುಕು. ಅದು ಎಲ್ಲೋ ಹೊರಗಿರುವಂಥದ್ದಲ್ಲ. ಅದರ ಅರ್ಥವನ್ನು ಎಲ್ಲೋ ಹುಡುಕಬೇಕಾಗಿಲ್ಲ. ಅದು ನಾವೇ. ನಾವು ಆಲೋಚನೆಗಳು, ತಣ್ತೀಸಿದ್ಧಾಂತಗಳು, ಧರ್ಮಗಳು, ಪೂರ್ವಾಗ್ರಹಗಳು, ನಂಬಿಕೆಗಳ ದಪ್ಪನೆಯ ತೊಗಟೆಯನ್ನು ನಮ್ಮ ಸುತ್ತ ಬಿಗಿದುಕೊಂಡಿದ್ದೇವೆ. ಹಾಗಾಗಿ ನಾವೇ ಜೀವನ ಎಂಬ ತಿರುಳು ಆಳದಲ್ಲಿ ಹುದುಗಿಹೋಗಿದೆ.

ಇಂದು ಬದುಕು ಎಂದರೆ ತತ್‌ಕ್ಷಣ ನಮ್ಮ ತಲೆಯಲ್ಲಿ ಹೊಳೆಯುವುದು ನಮ್ಮ ಉದ್ಯೋಗ, ವ್ಯವಹಾರ, ಕುಟುಂಬ, ಮನೆ, ಕಾರು, ಧರಿಸಿದ ಉಡುಗೆ ಇತ್ಯಾದಿ. ಆದರೆ ನಾವು ಜೀವಿಸಿದ್ದರೆ ಮಾತ್ರ ಇವುಗಳಿಗೆಲ್ಲ ಉಪಯೋಗ ಇರುತ್ತದೆ ಅಲ್ಲವೆ! ನಾವು ಮನೆಮಂದಿಯೊಂದಿಗೆ ಹೊಂದಿರುವ ಸಂಬಂಧ, ನಮ್ಮ ಹೆಸರು, ನಮ್ಮ ಮಾತು, ವಾಹನ, ವ್ಯವಹಾರ, ಉದ್ಯಮ – ಏನೇ ಇದ್ದರೂ ನಾವು ಬದುಕಿದ್ದರೆ ಮಾತ್ರ ಅವುಗಳಿಗೆ ಅರ್ಥ. ಆದ್ದರಿಂದ ಬದುಕು ಎಂದರೆ ಜೀವಂತವಾಗಿರು ವುದು, ಅದೇ ಅತ್ಯಂತ ಮೂಲಭೂತ ವಿಚಾರ.

ನಮ್ಮ ಮನಸ್ಸು, ಆಲೋಚನೆಗಳು ಒಂದು ಸಾಫ್ಟ್ವೇರ್‌ನ ಹಾಗೆ. ಜೀವನ ಪ್ರಕ್ರಿಯೆಯಲ್ಲಿ ಅದರೊಳಗೆ ನಾವು ಏನೆಲ್ಲ ದತ್ತಾಂಶಗಳನ್ನು ಊಡಿಸಿ ದ್ದೇವೆಯೋ ಅದಕ್ಕೆ ತಕ್ಕುದಾದ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಆ ಸಾಫ್ಟ್ವೇರನ್ನು ಹೊಂದಿರುವ ಬದುಕು ನಾವು. ನಾವು ಹೇಳಿದಂತೆ ಸಾಫ್ಟ್ವೇರ್‌ ಕೇಳಬೇಕೇ ವಿನಾ ಆಲೋಚನೆಗಳು ಹೇಳಿದಂತೆ ನಮ್ಮ ಬದುಕು ನಡೆಯುವುದಲ್ಲ. ಬಾಲವು ನಾಯಿಯನ್ನು ಅಲ್ಲಾಡಿಸಬಾರದು.

ಆದರೆ ನಾವೇ ಜೀವನ, ಜೀವಿಸುತ್ತಿರು ವುದೇ ಬದುಕಿನ ಮೂಲದ್ರವ್ಯ ಎಂಬ ತಿರುಳು ದಪ್ಪನೆಯ ತೊಗಟೆಯಡಿ ಹುದುಗಿ ರುವುದರಿಂದ ನಾವು “ಜೀವನ ಅಂದರೇನು’ ಎಂದು ಪ್ರಶ್ನಿಸುವಂತಾಗಿದೆ. ಆಲೋಚನೆಗಳೇ ನಮ್ಮನ್ನು ಆಳುವಂತಾಗಿದೆ.

ಹಾಗಾದರೆ ನಾವೇ ಜೀವನ ಎಂಬ ಮೂಲತ್ವ ಅನಾವರಣವಾಗಬೇಕಾದರೆ ಏನು ಮಾಡಬೇಕು? ಅದಕ್ಕೆ ಆಲೋಚನೆಗಳ ಮೂಲಕ ತೀರ್ಮಾನಗಳನ್ನು ತೆಗೆದು ಕೊಳ್ಳುವುದನ್ನು ಬಿಡಬೇಕು. “ಅದು ಮಾವಿನ ಮರವಲ್ಲವೇ, ನನಗೆ ಗೊತ್ತಿದೆ’, “ಓ ಅದೋ, ಹಲ್ಲಿ, ನನಗೆ ತಿಳಿದಿದೆ’, “ಇದಾ, ಗುಲಾಬಿ ಗಿಡ- ಕೆಂಪು ಹೂ ಅರಳಿಸುತ್ತದೆ, ಹೂವಿನ ಕೆಳಗೆ ಮುಳ್ಳುಗಳಿರುತ್ತವೆ’ ಎಂಬ ತೀರ್ಪು ಗಳನ್ನು ಕೊಡುವುದನ್ನು, ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ತ್ಯಜಿಸಬೇಕು. ನನಗೇನೂ ಗೊತ್ತಿಲ್ಲ, ಕಲಿಯುವುದು ಬಹಳವಿದೆ ಎಂಬ ವಿನಯವನ್ನು ಹೊಂದಿರಬೇಕು. ನನಗೇನೂ ಗೊತ್ತಿಲ್ಲ ಎಂಬ ವಿನಮ್ರತೆಯನ್ನು ಹೊಂದಿದ್ದರೆ ಗೊತ್ತಿಲ್ಲದೆ ಇರುವವುಗಳನ್ನು ತಿಳಿದುಕೊಳ್ಳುವುದರತ್ತ ಪ್ರಯಾಣ ಆರಂಭವಾಗುತ್ತದೆ. “ಗೊತ್ತಿಲ್ಲ’ ಎಂಬಲ್ಲಿ ಸ್ಥಿರವಾಗಿರುವುದು ಮನುಷ್ಯನ ಮೂಲಗುಣಕ್ಕೆ ತದ್ವಿರುದ್ಧ. ಹಾಗಾಗಿ “ನನಗೇನೂ ಗೊತ್ತಿಲ್ಲ’ ಎಂಬ ವಿನಯಶೀಲತೆ ಹುಟ್ಟಿಕೊಳ್ಳುವುದೇ ಜ್ಞಾನ ಮಾರ್ಗದಲ್ಲಿ ಪ್ರಯಾಣದ ಆರಂಭ ಬಿಂದು. ಆಗ ಬದುಕಿನಲ್ಲಿ ಪ್ರತಿ ಯೊಂದನ್ನೂ ಕುತೂಹಲ ದಿಂದ ಗಮನಿಸುವುದಕ್ಕೆ, ಬೆರಗಿನಿಂದ ಕಾಣುವುದಕ್ಕೆ, ತಿಳಿಯುವುದಕ್ಕೆ, ಮೆಚ್ಚಿ ಕೊಳ್ಳುವುದಕ್ಕೆ ಸಾಧ್ಯವಾಗು ತ್ತದೆ. ಆಗಲೇ ನಾವು ಬದುಕುವ ಪ್ರಕ್ರಿಯೆ ಯಲ್ಲಿ ಪ್ರಜ್ಞಾಪೂರ್ವಕವಾಗಿ ಒಳಗೊಳ್ಳು ವುದು. ಉಣ್ಣುವ ಆಹಾರದ ರುಚಿ, ಕುಡಿ ಯುವ ಪಾನೀಯದ ಸ್ವಾದ, ಉಸಿರಾಡುವ ಗಾಳಿಯ ಪರಿಮಳ, ನೋಡುವ ಮರಗಿಡ ಗಳ ಸೌಂದರ್ಯ- ಎಲ್ಲವೂ ಅರಿವಿಗೆ ಬರುವುದು ಹೀಗೆ ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಕ್ರಿಯೆಯಲ್ಲಿ ಒಳಗೊಂಡಾಗ.

ಬದುಕಿನಲ್ಲಿ ಹೆಚ್ಚು ತೀರ್ಮಾನಗಳನ್ನು ತೆಗೆದುಕೊಂಡಷ್ಟು, “ನನಗೆ ತಿಳಿದಿದೆ’ ಎಂದು ಕೊಂಡಷ್ಟು ಬದುಕು ಅನುಭವಿಸಲು ಸಿಗುವುದು ಕಡಿಮೆ. ನಾವೇ ಜೀವನ ಎಂಬ ಮೂಲತ್ವದ ಅರಿವನ್ನು ಹೊಂದಿ ಅದನ್ನು ಪ್ರತೀ ಕ್ಷಣವನ್ನೂ ಅನುಭವಿಸುತ್ತ ಆನಂದವಾಗಿರೋಣ.

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.