ಕಣ್ಣಿಗೆ ಕಾಣದ ಓ ವೈರಸ್.. ನಿನಗೊಂದು ಬಹುಪರಾಕ್!


Team Udayavani, Jun 22, 2020, 6:13 PM IST

ಕಣ್ಣಿಗೆ ಕಾಣದ ಓ ವೈರಸ್.. ನಿನಗೊಂದು ಬಹುಪರಾಕ್!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಣ್ಣಿಗೆ ಕಾಣದೆ
ಮಳೆ, ಗಾಳಿ, ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
ಜಗತ್ತಿನಾದ್ಯಂತ ಹಬ್ಬಿದ
ನಿನ್ನ ಛಲ ಮೆಚ್ಚಲೇಬೇಕು
ಕೋವಿಡ್..

ಮಸೀದಿ, ಮಂದಿರ, ಚರ್ಚ್ ಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
ರಕ್ತದ ಕೋಡಿ ಹರಿಯುತ್ತಿತ್ತು,
ಒಂದು ಮಾತನಾಡದೆ
ಅವುಗಳನ್ನು ಮುಚ್ಚಿಸಿ
ದೇವರು ಎಲ್ಲಾ ಕಡೆ ಇದ್ದಾನೆಂದು ತೋರಿಸಿದ ನಿನ್ನ
ರೀತಿಗೆ ಎಲ್ಲರೂ
ಮೆಚ್ಚಲೆಬೇಕು ಕೋವಿಡ್..

ಎಲ್ಲಾ ಟಿವಿಗಳಲ್ಲಿ ಭಯ
ಹುಟ್ಟಿಸುವ ಭವಿಷ್ಯಕಾರರನ್ನು
ಮೂಲೆ ಗುಂಪು ಮಾಡಿದ
ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕೋವಿಡ್..

ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು,
ನಂತರ
ಮುಜರಾಯಿ ತೀರ್ಥಕ್ಕಿಂತ
ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
ನಿನ್ನನ್ನು ಮೆಚ್ಚಲೇಬೇಕು ಕೋವಿಡ್..

ಅದ್ದೂರಿತನಕ್ಕೆ ಕಡಿವಾಣ ಹಾಕಿ,
ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
ಸರಳವಾಗಿ, ಅರ್ಥಪೂರ್ಣವಾಗಿ
ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
ಮೆಚ್ಚಲೇಬೇಕು ಕೋವಿಡ್..

ಸತ್ತರೆ ಯಾರು ಹಿಂದೆ ಬರಲ್ಲ
ಅಂತ ತಿಳಿಸಿ
ಅಂತ್ಯ ಸಂಸ್ಕಾರಕ್ಕೆ
ನಿಜವಾದ
ದುಃಖತಪ್ತರು 20 ಜನರು ಸಾಕು
ಎಂದು ಅರ್ಥೈಸಿದ ನಿನ್ನ ರೀತಿಯನ್ನ
ಮೆಚ್ಚಲೇಬೇಕು ಕೋವಿಡ್..

ಮಾಲ್, ಮಲ್ಟಿಪ್ಲೆಕ್ಸ್, ಪಬ್
ಕ್ಲಬ್ ಮುಚ್ಚಿ
ಬಸ್ , ರೈಲು, ವಿಮಾನಗಳಿಲ್ಲದೆ
ಸಿನೆಮಾ ನಾಟಕ ಬಿಟ್ಟು
ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು
ಕೋವಿಡ್..

ಮಾರ್ಕ್ಸ್ ಪಡೆಯುವುದೆ
ಜೀವನವಲ್ಲ..
ನಿಜವಾದ ಪಾಠಶಾಲೆ ಜೀವನಾನುಭವ ,
ನಮ್ಮ ಅಂತರಾತ್ಮವೇ ನಿಜವಾದ
ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ
ಮೆಚ್ಚಲೇಬೇಕು ಕೋವಿಡ್..

ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
ಹುಟ್ಟಿದ ಊರು, ಒಕ್ಕಲುತನ
ಹೊಟ್ಟೆಗೆ ಅನ್ನ ಹಾಕುತ್ತೇವೆಂದು
ತಿಳಿಸಿದ ನಿನ್ನ ಮಹಿಮೆ
ಮೆಚ್ಚಲೇಬೇಕು
ಕೋವಿಡ್..

ಎಷ್ಟು ಆಸ್ತಿ ,ಬಂಗಾರ ಇದ್ದರೂ
ಆರೋಗ್ಯ ಮುಖ್ಯ ,
ಬಡವ, ಶ್ರೀಮಂತ ಯಾರಾದರೂ ಪ್ರಾಣ ಮುಖ್ಯ
ಎಂದು ಮತ್ತೊಮ್ಮೆ ತಿಳಿಸಿದ ನಿನಗೆ ಮೆಚ್ಚಲೇಬೇಕು ಕೋವಿಡ್..

ತಂತ್ರಜ್ಞಾನದಿಂದ
ಎಲ್ಲಾ ಗ್ರಹಗಳನ್ನು ಸುತ್ತಿದರೂ,
ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
ಕಾಲಕ್ಕೆ ಶರಣಾಗಬೇಕೆಂದು
ತಿಳಿಸಿದ ಪರಿ
ಮೆಚ್ಚಲೇಬೇಕು ಕೋವಿಡ್..

ಅಣು ಬಾಂಬ್, ಯುದ್ಧ ವಿಮಾನ, ಟ್ಯಾಂಕರ್ ಗಳು
ಸಾವಿರ ಇದ್ದು, ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
ತಿಳಿಸಿದ್ದು
ಮೆಚ್ಚಲೇಬೇಕು ಕೋವಿಡ್..

ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
ಪ್ರಕೃತಿಯನ್ನು ಕಾಪಾಡಿದರೆ
ನಾವು ಉಳಿಯುತ್ತೆವೆ
ಎಲ್ಲಾ ಧರ್ಮಗಳು ಪೊಳ್ಳು
ನಿಜವಾದ ಧರ್ಮ ಮನುಜ
ಧರ್ಮವೆಂದು ಹೇಳಿದ್ದು
ಮೆಚ್ಚಲೇಬೇಕು ಕೋವಿಡ್..

ಜಗತ್ತಿನ ಕಹಿ ಸತ್ಯಗಳನ್ನು
ಬಿಡಿ , ಬಿಡಿಯಾಗಿ
ತೋರಿಸಿ ಕೊಟ್ಟು
ಸನ್ಮಾರ್ಗದಿ
ನಡೆಯಿರೆಂದು ಹೇಳಿದ
ನಿನ್ನ ಶಕ್ತಿ ,ಯುಕ್ತಿಯ ಕೋವಿಡ್ ಗೀತ
ಎಲ್ಲರೂ ಮೆಚ್ಚಲೇಬೇಕು ಕೋವಿಡ್….

ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ….. ಇನ್ನಾದರೂ ಪಶ್ಚಾತ್ತಾಪದೊಂದಿಗೆ….. ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ………? ಭಗವಂತನ ಆಟ ಬಲ್ಲವರಾರು?????

– ಪ್ರತಿಕ್ಷಾ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.