ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ


Team Udayavani, Aug 5, 2020, 1:25 AM IST

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

– ರಾಜು ಮಡಿವಾಳ ಪೇತ್ರಿ

ಭಾರತೀಯರು ಶತ ಶತಮಾನಗಳಿಂದ ರಾಮ ರಾಜ್ಯದ ಕನಸನ್ನು ಕಾಣುತ್ತಾ ಬಂದವರು.

ಪರಕೀಯರ ದಾಳಿ, ಮತಾಂತರ, ಪರ ಸಂಸ್ಕ್ರತಿಯ ಆಡಳಿತದಂತಹ ವಿಘ್ನಗಳಿಂದ ನಮ್ಮ ಈ ಕನಸುಗಳೆಲ್ಲಾ ಭಗ್ನಗೊಂಡಿದ್ದವು.

ರಾಮ ರಾಜ್ಯವೆಂದರೆ ಜಗತ್ತಿನ ಸಾರ್ವಕಾಲಿಕ ಸರ್ವಶ್ರೇಷ್ಠ ಆಡಳಿತ ವ್ಯವಸ್ಥೆ.

ಸತ್ಯ, ಧರ್ಮ, ನ್ಯಾಯ ಮತ್ತು ಜಗತ್ತಿನ ಸಾವಿರಾರು ಸತ್ಕರ್ಮಗಳ ಸಂಗಮ.

ಇಂತಹ ಒಂದು ಆಡಳಿತ ವ್ಯವಸ್ಥೆಯನ್ನು ಭರತ ವರ್ಷದಲ್ಲಿ ಪ್ರತಿಷ್ಠಾಪಿಸುವುದು ರಾಷ್ಟ್ರೀಯವಾದಿಗಳ ಬಹುಕಾಲದ ಕನಸು. ಸುವರ್ಣ ಸದೃಶವಾದ ಈ ವ್ಯವಸ್ಥೆಯನ್ನು ಸರ್ವಶಕ್ತ ಭಾರತೀಯರು ಪಡೆದಲ್ಲಿ ಮಗದೊಮ್ಮೆ ಸುವರ್ಣ ಯುಗವನ್ನು ಕಾಣುವುದು ನಿಸ್ಸಂಶಯ.

ಈ ಒಂದು ಮಹಾನ್ ಯಜ್ಞಕ್ಕೆ ಪೂರಕವಾಗಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ. ಸೂರ್ಯೋದಯಕ್ಕೂ ಮೊದಲು ಅರುಣೋದಯದಲ್ಲಿ ಭೂಮಂಡಲವನ್ನು ಮಂದ ಬೆಳಕೊಂದು ಬೆಳಗುತ್ತದೆ, ಅಂತೆಯೇ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ರಾಮ ರಾಜ್ಯದ ಪಥದಲ್ಲಿ ಸಾಗುವ ಸುಲಕ್ಷಣಗಳು ಅರುಣೋದಯದ ಕಿರಣಗಳಂತೆ ಶೋಭಾಯಮಾನವಾಗಿದೆ.

ಹಿಂದೆ ಭಾರತದಲ್ಲಿ ಓಲೈಕೆ ರಾಜಕಾರಣ ಹೇಗಿತ್ತೆಂದರೆ ಜನನಿಬಿಡ ಪ್ರದೇಶದ ಮಾರ್ಗದ ಮಧ್ಯದಲ್ಲೊಂದು ಅನಧಿಕೃತ ಪ್ರಾರ್ಥನಾ ಮಂದಿರವೊಂದು ಹುಟ್ಟಿಕೊಂಡರೆ ಅದರಿಂದ ಸಂಚಾರ ವ್ಯವಸ್ಥೆಗೆ ಭಂಗವಿದ್ದರೂ ಸ್ಥಳೀಯ ಪಂಚಾಯತ್ ನಿಂದ ಸುಪ್ರೀಂಕೋರ್ಟ್ ವರೆಗೂ ಯಾರಿಗೂ ಅದನ್ನು ತೆರವುಗೊಳಿಸುವ ಅಧಿಕಾರವಿದ್ದಿರಲಿಲ್ಲ

ಅಂತಹ ಕಾಲಘಟ್ಟದಲ್ಲಿದ್ದ ಭಾರತದ ರಾಜಕೀಯದಲ್ಲಿ ಮೋದಿಯವರ ಪ್ರವೇಶದ ನಂತರ ಒಂದು ರೀತಿಯಲ್ಲಿ ಜಗತ್ತಿನ ಸಮಸ್ಯೆ ಎನ್ನಬಹುದಾದ ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಿ ಅಲ್ಲಿ ರಾಮಮಂದಿರವನ್ನು ನಿರ್ಮಿಸುವ ಕೈಂಕರ್ಯಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಇದು ಶತಮಾನಗಳಿಂದ ಭಾರತದಲ್ಲಿ ನಡೆದ ದುರಾಡಳಿತದ ಕಹಿಯನ್ನು ಮರೆಸುವ ಅಮೃತ ಸದೃಶವಾದ ಮಹತ್ಕಾರ್ಯ.

1947ರಲ್ಲಿ ಭಾರತ ಮಾತೆ ದಾಸ್ಯದಿಂದ ಮುಕ್ತಳಾದಳು. ಈಗ ನಡೆಯುವ ಶಿಲಾನ್ಯಾಸದ ಮೂಲಕ ಸನಾತನ ಧರ್ಮವೊಂದು ದಾಸ್ಯ ಮುಕ್ತವಾಗಿದೆ. ಪ್ರಭು ಶ್ರೀ ರಾಮನ ಪುನರ್ ಪಟ್ಟಾಭಿಷೇಕವಾಗಿದೆ. ಇದು ಅಖಂಡ ಭಾರತದ ಪರಿಕಲ್ಪನೆಯ ಸಾಕ್ಷಾತ್ಕಾರಕ್ಕೆ ನಾಂದಿ ಎನ್ನಬಹುದು.

ಆಗಸ್ಟ್ 5ರ ಬುಧವಾರದಂದು ನಡೆಯಲಿರುವ ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜಗತ್ ಪ್ರಸಿದ್ಧ ದೇವಾಲಯಕ್ಕೆ ಅಡಿಪಾಯವಾದರೆ, ಪೂರ್ಣಗೊಂಡ ಮಂದಿರ ರಾಮ ರಾಜ್ಯದ ಸ್ಥಾಪನೆಗೆ ದಿಕ್ಸೂಚಿಯಾಗಬೇಕು. ಭಾರತ ಗತ ವೈಭವಕ್ಕೆ ಮರಳಬೇಕು. ವಿಶ್ವ ಗುರುವಿನ ಪೀಠದಲ್ಲಿ ಭಾರತ ಮಾತೆಯನ್ನು ಪ್ರತಿಷ್ಠಾಪಿಸಬೇಕು. ಭಾರತೀಯರ ಈ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿ ಒಂದು ಮಂತ್ರಕ್ಕಿದೆ, ಅದುವೇ ‘ಆತ್ಮ ನಿರ್ಭರ ಭಾರತ’. ಈ ಮಂತ್ರದ ಮಹತ್ವವನ್ನು ಅರಿತು ನಡೆದರೆ ವಿಶ್ವಭೂಪಟದಲ್ಲಿ ಭಾರತ ಪ್ರಕಾಶಿಸುತ್ತದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.