ಶತಮಾನೋತ್ತರ ದಶಮಾನೋತ್ಸವ ಆಚರಣೆ ಹೊಸ್ತಿಲಲ್ಲಿ ಶಾಲೆ

ದ.ಕ. ಜಿ.ಪಂ. ಶಾಸಕರ ಮಾ. ಹಿ. ಪ್ರಾ. ಶಾಲೆ, ಉಳಿ

Team Udayavani, Nov 30, 2019, 4:10 AM IST

zx-5

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1910 ಶಾಲೆ ಆರಂಭ
ದಿ| ಕಕ್ಯ ಕೃಷ್ಣಾಚಾರ್ಯ ಅವರಿಂದ ಸ್ಥಾಪನೆ, ತಾ| ಬೋರ್ಡ್‌ಗೆ ಹಸ್ತಾಂತರ

ಪುಂಜಾಲಕಟ್ಟೆ: ಲಭ್ಯ ದಾಖಲೆಗಳ ಹಾಗೂ ಊರಿನ ಹಿರಿಯರ ಪ್ರಕಾರ ಬಾರªಡ್ಡು ಚೆಲುವಮ್ಮನವರು ಮತ್ತು ಅವರ ಹಿಂದಿನ ಜೈನ ಮನೆತನದಿಂದ ಸ್ಥಳದಾನವನ್ನು ಪಡೆದು 1910ರಲ್ಲಿ ಉಳಿ ಗ್ರಾಮದ ಕಕ್ಯಪದವುನಲ್ಲಿ ದಿ| ಕಕ್ಯ ಕೃಷ್ಣಾಚಾರ್ಯರಿಂದ ಈ ಶಾಲೆ ಸ್ಥಾಪಿಸಲ್ಪಟ್ಟಿತ್ತು.

ಆರಂಭದಲ್ಲಿ ಹುಲ್ಲು ಛಾವಣಿಯ ಕಟ್ಟಡದಲ್ಲಿದ್ದ ಶಾಲೆ 1926ರ ಡಿಸೆಂಬರ್‌ನಲ್ಲಿ ಬೆಂಕಿಗೆ ಆಹುತಿಯಾಗಿ ಬಳಿಕ ಹೆಂಚಿನ ಛಾವಣಿ ನಿರ್ಮಿಸಲಾಯಿತು. ಕಾಲಾಂತರದಲ್ಲಿ ಗೋಡೆ ಶಿಥಿಲಗೊಂಡಾಗ ಅಂದಿನ ಪಟೇಲರು ದಿ| ರಾಮಕೃಷ್ಣ ಆಚಾರ್ಯರು ತನ್ನ ಮನೆಯಲ್ಲಿದ್ದ ತೇಗದ ಮರದ ಸಾಮಗ್ರಿಗಳನ್ನು ಬಳಸಿ ದುರಸ್ತಿಗೊಳಿಸಿದ ಬಳಿಕ 1958ರ ಜ. 1ರಂದು ತಾಲೂಕು ಬೋರ್ಡ್‌ಗೆ ಹಸ್ತಾಂತರವಾಗಿತ್ತು.

ಸತತ ಪರಿಶ್ರಮದ ಫಲ
ದಿ| ತನಿಯಪ್ಪ ಮಾಸ್ತರ್‌, ದಿ| ತಾಚಪ್ಪ ಮಾಸ್ತರ್‌, ದಿ| ನಾಗಪ್ಪ ಪೂಜಾರಿ, ಬಾಬು ಮಾಸ್ತರ್‌ ಕೋಂಗುಜೆ ಮೊದಲಾದ ಹಿರಿಯ ಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಪಿತ್ತಿಲ, ತೆಕ್ಕಾರು, ಮಣಿನಾಲ್ಕೂರು, ಕಜೆಕಾರು ಮೊದಲಾದ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆ ಕ್ರಮೇಣ ಹಿರಿಯ ಪ್ರಾಥಮಿಕ ಶಾಲೆಯಾಗಿ, ಶಾಸಕರ ಮಾದರಿ ಶಾಲೆಯಾಗಿ ಬೆಳೆಯಿತು. ಈ ಶಾಲೆಯಲ್ಲಿ 650 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಇತಿಹಾಸವಿದೆ. ಪ್ರಸ್ತುತ ಈ ಶಾಲೆಯಲ್ಲಿ 250 ಮಕ್ಕಳಿದ್ದು, 8 ಮಂದಿ ಖಾಯಂ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕಿ, ಓರ್ವ ಕಂಪ್ಯೂಟರ್‌ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕಂಪ್ಯೂಟರ್‌ ಕೊಠಡಿ ಸೌಲಭ್ಯ, ವಿಜ್ಞಾನದ ಪರಿಣಾಮಕಾರಿ ಕಲಿಕೆಗೆ ಲ್ಯಾಬ್‌ ವ್ಯವಸ್ಥೆ ಇದೆ.

ಅತ್ಯುತ್ತಮ ಹಿ.ಪ್ರಾ. ಶಾಲೆ ಪ್ರಶಸ್ತಿ
2004ರಲ್ಲಿ ಮುಖ್ಯ ಶಿಕ್ಷಕ‌ ಕೃಷ್ಣ ಆಚಾರ್ಯ ಅವರ ಅವಧಿಯಲ್ಲಿ ಈ ಶಾಲೆ ತಾಲೂಕಿನ ಅತ್ಯುತ್ತಮ ಹಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿ ಗಳಿಸಿತ್ತು. 2010 ರಲ್ಲಿ ಅನೇಕ ಗಣ್ಯರು, ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶತಾನಿ-ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶತಮಾನೊತ್ಸವವನ್ನು ಆಚರಿಸಿಕೊಂಡಿದ್ದು, 2020ರಲ್ಲಿ ಶತಮಾನೋತ್ತರ ದಶಮಾನೋತ್ಸವ ಆಚರಿಸಿಕೊಳ್ಳಲಿದೆ.

2009-11ನೇ ಸಾಲಿನಲ್ಲಿ, ಶತಮಾನೋತ್ಸವದ ಸಂದರ್ಭದಲ್ಲಿ ಆಗಿನ ಎಸ್‌.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ ಅವರ ಹಾಗೂ ಶತಮಾನೋತ್ಸವದ ಅಧ್ಯಕ್ಷ ಡಾ| ರಾಜಾರಾಮ ಕೆ.ಬಿ. ಅವರ ಮುತುವರ್ಜಿಯಿಂದ ಆಗಿನ ಸಚಿವ ಬಿ. ರಮಾನಾಥ ರೈ ಅವರ ಸಹಕಾರದಿಂದ ಹೆಚ್ಚಿನ ಅನುದಾನ ದೊರೆತು ಶಾಲೆ ಪ್ರಗತಿ ಸಾಧಿಸಿರುತ್ತದೆ. ಸ್ವತ್ಛ, ಸುಂದರ ಪರಿಸರವನ್ನು ಹೊಂದಿದ ಈ ಶಾಲೆಯು ಹೂತೋಟ ಹಾಗೂ ತರಕಾರಿ ತೋಟವನ್ನು ಒಳಗೊಂಡಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಯಲ್ಲಿ ಬೆಳೆದ ತರಕಾರಿಗಳು ಉಪಯೋಗಿಸಲ್ಪಡುತ್ತಿವೆ.

ಹಳೆ ವಿದ್ಯಾರ್ಥಿಗಳು
ಡಾ| ರಾಜಾರಾಮ್‌ ಕೆ.ಬಿ., ಡಾ| ದಿನೇಶ್‌ ಬಂಗೇರ ವೈದ್ಯರಾಗಿದ್ದು, ಹಲವರು ಶಿಕ್ಷಕರಾಗಿ, ಯೋಧರಾಗಿ, ರಾಜಕೀಯ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬೋಧನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಪ್ರೊಜೆಕ್ಟರ್‌ ಹಾಗೂ ಹೊಸ ಕಂಪ್ಯೂಟರ್‌ಗಳ ಆವಶ್ಯಕತೆ ಇದೆ.
-ವಿದ್ಯಾ ಕೆ., ಪ್ರಭಾರ ಮುಖ್ಯ ಶಿಕ್ಷಕಿ.

ನಮಗೆ ವಿದ್ಯೆ ಕಲಿಸಿ, ವ್ಯಕ್ತಿತ್ವ ರೂಪಿಸಿದ ಶಾಲೆಯ ಶತಮಾನೋತ್ಸವ ಆಚರಣೆಯಲ್ಲಿ ನಾವು ಪಾಲು ಪಡೆದಿರುವುದು ಸಂತಸವಾಗಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ಪ್ರಗತಿ ಶ್ಲಾಘನೀಯವಾಗಿದೆ.
-ಡಾ| ರಾಜಾರಾಮ ಕೆ.ಬಿ., ದಂತ ವೈದ್ಯರು, ಉಪ್ಪಿನಂಗಡಿ, ಹಳೆ ವಿದ್ಯಾರ್ಥಿ

-  ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.