Ashish Vidyarthi: 57ರ ವಯಸ್ಸಿನಲ್ಲಿ 2ನೇ ಮದುವೆ.. ಟ್ರೋಲ್ಗೆ ಕ್ಯಾರೇ ಮಾಡಲ್ಲ ಎಂದ ದಂಪತಿ
Team Udayavani, Sep 16, 2023, 6:49 PM IST
ಮುಂಬಯಿ: ಇದೇ ವರ್ಷದ ಮೇ ತಿಂಗಳಿನಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತನ್ನ 57ನೇ ವಯಸ್ಸಿನಲ್ಲಿ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಎನ್ನುವವರನ್ನು ವಿವಾಹವಾಗಿದ್ದರು. ಅವರ ವಿವಾಹದ ಬಳಿಕ ಅನೇಕರು ಟ್ರೋಲ್ ಮಾಡಿ, ನೆಗೆಟಿವ್ ಕಮೆಂಟ್ ಗಳನ್ನು ಮಾಡಿದ್ದರು.
ನಟ ಆಶಿಶ್ ವಿದ್ಯಾರ್ಥಿ 2021 ರಲ್ಲಿ ರಂಗಭೂಮಿ ಕಲಾವಿದ ರಾಜೋಶಿ ಜೊತೆಗಿನ ವೈವಾಹಿಕ ಸಂಬಂಧಕ್ಕೆ ವಿಚ್ಚೇದನವನ್ನು ನೀಡಿದ್ದರು. ಆ ಬಳಿಕ ಅವರು 57ನೇ ವಯಸ್ಸಿನಲ್ಲಿ ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ 50 ವರ್ಷದ ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದರು. ಅವರ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವುದರ ಜೊತೆಗೆ ಅನೇಕರು ಈ ವಯಸ್ಸಿನಲ್ಲಿ ವಿವಾಹವಾಗಿರುವ ಬಗ್ಗೆ ಟ್ರೋಲ್ ಮಾಡಿ, ನೆಗೆಟಿವ್ ಕಮೆಂಟ್ ಮಾಡಿದ್ದರು.
ಇದೀಗ ದಂಪತಿ ಬಹಿರಂಗವಾಗಿ ಸಂದರ್ಶನವೊಂದರಲ್ಲಿ ನೆಗೆಟಿವ್ ಕಮೆಂಟ್ಸ್ ಹಾಗೂ ಟ್ರೋಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರೀತಿಯ ವಿಷಯದಲ್ಲಿ ಸಾಬೀತುಪಡಿಸಲು ಏನೂ ಇಲ್ಲ. ನಾವಿಬ್ಬರೂ ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ. ನಮಗೆ ಸಂತೋಷವನ್ನುಂಟುಮಾಡುವ ಕೆಲಸವನ್ನು ನಾವು ಮಾಡಿದ್ದೇವೆ.” ಎಂದು ಆಶಿಶ್ ಹೇಳಿದ್ದಾರೆ.
ಇನ್ನು ರೂಪಾಲಿ “ನಾನು ಟ್ರೋಲ್ ಗಳ ಬಗ್ಗೆ ತಲೆಕೆಡೆಸಿಕೊಳ್ಳುವುದಿಲ್ಲ. ಏಕಂದರೆ ನನಗೆ ಅವರು ಯಾರೆಂದು ಗೊತ್ತಿಲ್ಲ. ಅವರು(ಟ್ರೋಲರ್ಸ್) ಸಾಮಾನ್ಯ ಜನರಿಗೆ ತಿಳಿದಿಲ್ಲದ ಯಾವುದನ್ನಾದರೂ ನೋಡಿದ್ದಾರೆ ಮತ್ತು ಅದರ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇಲ್ಲ. ಆ ಕಮೆಂಟ್ಗಳು ನನ್ನ ಮೇಲೆ ಪರಿಣಾಮ ಬೀರಲ್ಲ ಏಕೆಂದರೆ ನಾನು ಅವುಗಳನ್ನು ಓದಲಿಲ್ಲ. ನನ್ನ ಆಪ್ತರು ನನ್ನ ಜೊತೆ ಇದ್ದಾರೆ. ಹಾಗಾಗಿ ನಾನು ಬೇರೆ ಯಾವುದರ ಬಗ್ಗೆಯೂ ಚಿಂತಿಸಲ್ಲ” ಎಂದು ಅವರು ಹೇಳಿದ್ದಾರೆ.
ಯೂಟ್ಯೂಬ್ ನಲ್ಲಿ ಫುಡ್ ವ್ಲಾಗ್ ಮಾಡಿಕೊಂಡು, ಇತ್ತ ನಟನೆಯಲ್ಲೂ ತೊಡಗಿರುವ ಆಶಿಶ್ ವಿದ್ಯಾರ್ಥಿ ವಿಶಾಲ್ ಭಾರದ್ವಾಜ್ ಅವರ ಸ್ಪೈ-ಥ್ರಿಲ್ಲರ್ ʼಖುಫಿಯಾʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಟಬು, ಅಲಿ ಫಜಲ್, ವಾಮಿಕಾ ಗಬ್ಬಿ ಮತ್ತು ಅಜ್ಮೇರಿ ಹಕ್ ಬಧೋನ್ ಸಹ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ