ತೋಟಿಮನೆ ಗಣಪತಿ ಹೆಗ್ಡೆ : ಯಕ್ಷ ಪಯಣದ ರಜತ ಸಂಭ್ರಮ


Team Udayavani, Feb 17, 2017, 5:05 PM IST

Totimane-1.jpg

ತೋಟಿ ಎರಡಕ್ಷರದ ಶಬ್ಧ, ಯಕ್ಷಗಾನದ ಪ್ರೇಕ್ಷಕರ ವಲಯದಲ್ಲಿ ಒಂಥರಾ ಆಕರ್ಷಣೆಯ ಹೆಸರು. ಯಕ್ಷಗಾನದ ಗೆಜ್ಜೆಯ ಧ್ವನಿಗೆ ರಂಗದ ರಾಜನಾಗಿ ಮೆರೆಯುತ್ತಿರುವವರು. ನಾಯಕ, ಪ್ರತಿ ನಾಯಕ ಎರಡೂ ಪಾತ್ರದಲ್ಲಿ ಮಿಂಚುವ ಅದ್ಭುತ ಕಲಾವಿದರು. ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಕೊಂಡವರು. ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದಷ್ಟು ಅಬ್ಬರ, ಸಂವೇದನೆ, ಹಾವಭಾವಗಳಲ್ಲಿ ಗೆದ್ದವರು. ಎತ್ತರ ಕಾಯ, ಕಾಯಕ್ಕೆ ಸಮವಾದ ಧ್ವನಿ, ಹಾವ ಭಾವಗಳಲ್ಲಿ ತೋಟಿ ಪಾತ್ರಕ್ಕೆ ಜೀವ ತುಂಬುವವರು. ಈ ಕಾರಣದಿಂದಲೇ ತೋಟಿ ಎಂದರೆ ಬಹು ಮಂದಿಗೆ ಪ್ರೀತಿ. ತೋಟಿ ಎಂದರೆ ಯಕ್ಷಗಾನದ ಕ್ಷೇತ್ರದ ನವ ತೋಟ. ಹಲವು ಆಸಕ್ತಿಯುವ ಮಕ್ಕಳಿಗೂ ಪ್ರೀತಿಯಿಂದ ಯಕ್ಷಗಾನವನ್ನು ಕಲಿಸಿದವರು. ಆಮೂಲಕವೂ ಯಕ್ಷಗಾನ ರಂಗಕ್ಕೆ ಹೊಸ ಹೊಸ ಕೊಡುಗೆಗಳನ್ನು ಕೊಡುತ್ತಿರುವವರು. 

ತೋಟಿ ಎಂದರೆ ತೋಟಿಮನೆ. ಹೊನ್ನಾವರ ತಾಲೂಕಿನ ಹಳ್ಳಿಯ ಹುಡುಗ ಇಂದು ರಾಜ್ಯ, ಹೊರ ರಾಜ್ಯ, ವಿದೇಶದಲ್ಲೂ ಕಲಾ ಪ್ರದರ್ಶನ ನೀಡಿದವರು. ಯಕ್ಷಗಾನದಲ್ಲಿ ತನ್ನದೇ ಆದ ಛಾಪು ಮೂಡಿಸಿ ಇದೀಗ ರಜತ ರಂಗದ ಸಂಭ್ರಮದಲ್ಲಿದ್ದಾರೆ. ಇವರ ಮೇಲಿನ ಅಭಿಮಾನಿಗಳು ಒಂದಾಗಿ ಅಭಿನಂದನಾ ಗ್ರಂಥದ ಜೊತೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಬೆಳ್ಳಿಯ ಕಿರೀಟ ಕೂಡ ತೊಡಿಸಲಿದ್ದಾರೆ. ಕಲಾರಾಧನೆಯ ಮೂಲಕ ಕಲಾಸಕ್ತರ ಮನವೂ ಗೆದ್ದವರು ತೋಟಿಮನೆ ಗಣಪತಿ ಹೆಗಡೆ ಅರ್ಥಾತ್‌ ತೋಟಿ!


ಹಾಗೆ ನೋಡಿದರೆ ತೋಟಿಮನೆ ಯಕ್ಷಗಾನಕ್ಕೆ ಬಂದಿದ್ದೇ ಆಕಸ್ಮಿಕ. ಅಪ್ಪ ಅಮ್ಮ, ಅಣ್ಣನ ಮಾತು ಕೇಳಿದ್ದರೆ ಮಗ ಓದಿ ಸರಕಾರಿ ಉದ್ಯೋಗದಲ್ಲಿರಬೇಕಿತ್ತು. ಆದರೆ, ಹಡಿನಬಾಳದ ಅಜ್ಜನಮನೆಗೆ ಬರುತ್ತಿದ್ದ ಯಕ್ಷಗಾನದ ಹಿರಿಯ ಪ್ರಸಿದ್ಧ ಕಲಾವಿದರ ಒಡನಾಟ, ಯಕ್ಷಗಾನದ ಚಂಡೆಯ ಸದ್ದಿಗೇ ಮನ ಸೋತಿತ್ತು. ಓದಿಗೆ ಗೋಲಿ ಹೊಡೆದಿತ್ತು. ಮನೆವರಿಗೆ, ಬಂಧುಗಳಿಗೆ ಗೊತ್ತಾಗದಂತೆ ಬಣ್ಣ ಬಣ್ಣದಿಂದ ಜಮಗಿಸುವ ವೇಷದ ಯಕ್ಷಗಾನದ ಪ್ರದರ್ಶನ ಕದ್ದು ನೋಡಿ ಅದೇ ಅದೇ ಪಾತ್ರವನ್ನು ಯಾರಿಗೂ ಕಾಣದಂತೆ ತಾವೂ ಅಭಿನಯಿಸುತ್ತಿದ್ದರು. ದಿನಗಳು ಉರುಳಿದಂತೆ ಯಕ್ಷಗಾನದ ಮೇಲಿನ ಪ್ರೇಮ ಬೆಳೆಯಿತು, ಬಲಿಯಿತು. ಎಷ್ಟಪಾ ಅಂದರೆ, ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಮುನ್ನಾದಿನ ಯಕ್ಷಗಾನ ನೋಡಿ ನೇರವಾಗಿ ಹೊನ್ನಾವರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದದ್ದೂ ಇದೆ. 

ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕು ಎಂದಾಗ ಬಂಧುವಾದ ಪ್ರಸಿದ್ಧ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರು ಮಾಣಿಗೆ ಕಲಿಸಲು ಒಪ್ಪಿದರು. ಯಕ್ಷ ಪಾಠ ಮುಗಿಯುವದರೊಳಗೆ ತರಬೇತಿ ಕೇಂದ್ರವೂ ಪೂರ್ಣ ನಡೆಯಲಿಲ್ಲ. ಕೆಲ ಕಾಲ ಮನೆಯಲ್ಲೇ ಭಾಗವತರು ಹೇಳಿಕೊಟ್ಟರು. ಹೇಗಾದರೂ ಇನ್ನಷ್ಟು ಕಲಿಕೆಗೆ ಮೇಳ ಸೇರುವ ಮನಸ್ಸು ಅರಳಿತು. ಗುಂಡಬಾಳ ಎಂಬ ಊರಿನಲ್ಲಿ ವರ್ಷದ ಎಲ್ಲ ದಿನವೂ ಯಕ್ಷಗಾನ ಆಗುತ್ತದೆ. ಅಲ್ಲಿ ಯಕ್ಷ ಪ್ರಿಯ ದೇವರು. ಅಲ್ಲಿನ ಮೇಳಕ್ಕೆ ಸೇರಲು ಯೋಜಿಸಿದರು. ಆಗ ಅಲ್ಲಿ ಮಾಡಿದ್ದು ಬಾಲಗೋಪಾಲ ವೇಷ. ವರ್ಷಗಳು ಉರುಳಿದಂತೆ ಪಾತ್ರಗಳನ್ನು ಹೆಚ್ಚೆಚ್ಚು ನೀಡುತ್ತ ಬಂದರು. ಒಮ್ಮೆ ಕಪ್ಪೆಕೆರೆ ಭಾಗವತರೇ ಇಲ್ಲಿನ ಪ್ರಧಾನ ಭಾಗವತರಾಗಿ ಬಂದಾಗ ಇವರಿಗೆ ಹಗಲು ಇನ್ನಷ್ಟು ತರಬೇತಿ, ರಾತ್ರಿ ಪ್ರದರ್ಶನದಲ್ಲಿ ಪ್ರಯೋಗ ಅವಕಾಶಗಳನ್ನು ಮಾಡಿಕೊಟ್ಟರು. ಒಂದೇ ಪ್ರಸಂಗದ ಆದರೂ ದಿನಕ್ಕೊಂದು ಬೇರೆ ಬೇರೆ ಪಾತ್ರ ಕೊಟ್ಟು ಎಲ್ಲ ಪಾತ್ರಕ್ಕೂ ಸೈ ಎನ್ನುವಂತೆ ಮಾಡಿದರು. ಅಲ್ಲಿಂದ ಮುಂದೆ ತೋಟಿ ತಿರುಗಿ ನೋಡಿದ್ದೇ ಇಲ್ಲ.


ಈ ಹೊತ್ತು ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಮೇಳದಲ್ಲಿ ಪ್ರಧಾನ ವೇಷಗಾರರು. ಅತಿಥಿ ಕಲಾವಿದರೂ ಹೌದು. ಯಕ್ಷಗಾನದಲ್ಲಿ ತೋಟಿ ಕೇವಲ ವೇಷ ಮಾಡುವದರಿಂದ ಹೆಸರು ಮಾಡಿಲ್ಲ, ಬದಲಿಗೆ ಪಾತ್ರಕ್ಕೆ ಜೀವ ತುಂಬುವ ಸಜ್ಜನರಾಗಿ ಕೂಡ ಮೆಚ್ಚುಗೆಗೆ ಪಾತ್ರರಾಗಿ¨ªಾರೆ. ಒಂದು ಕಾಲಕ್ಕೆ ಸ್ತ್ರೀ ವೇಷ, ಹಾಸ್ಯ ಪಾತ್ರಗಳನ್ನೂ ಮಾಡಿದ್ದ ತೋಟಿಮನೆ ಇಂದು ನಾಯಕ, ಪ್ರತಿನಾಯಕ ಪಾತ್ರದಲ್ಲಿ ಹೆಸರು ವಾಸಿ. ಕಂಸವಧೆಯ ಕೃಷ್ಣ, ಅಕ್ರೂರ, ಕಂಸನಾಗಿ, ಸುಧನ್ವಾರ್ಜುನದ ಸುಧನ್ವ, ಅರ್ಜುನ, ಕೃಷ್ಣನಾಗಿ, ಬಸ್ಮಾಸುರ ವಧೆಯ ಈಶ್ವರ, ವಿಷ್ಣು, ಬಸ್ಮಾಸುರನಾಗಿ, ಶ್ರೀಕೃಷ್ಣ ಸಂಧಾನದ ಕೃಷ್ಣ, ಕೌರವ, ಭೀಮನಾಗಿ ಹೀಗೆ ಯಾವುದೇ ಪಾತ್ರ ಕೊಟ್ಟರೂ ಸೈ. ತೋಟಮನೆಗೆ ಖ್ಯಾತ ಕೊಟ್ಟ ಪಾತ್ರಗಳು ಹನುಮಂತನದ್ದು. ಲಂಕಾ ದಹನದ ಹನುಮಂತ ಇವರ ಇಷ್ಟದ ಪಾತ್ರ. ಹನುಮಂತ, ಬಸ್ಮಾಸುರ, ಮಾಗಧ, ಲಕ್ಷ್ಮಣ, ಕಂಸ, ಋತುಪರ್ಣನಂತಹ ಪಾತ್ರಗಳು ಹೆಸರು ಕೊಟ್ಟಿವೆ, ಕೊಡುತ್ತಿವೆ.

ಯಕ್ಷಗಾನದ ದಿಗ್ಗಜರಾದ ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣಯಾಜಿ ಬಳಕೂರು ಅವರಂತಹ ದಿಗ್ಗಜರ ಒಡನಾಟದಲ್ಲಿ ಬೆಳೆದ ತೋಟಿ  ಅವರು ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಂದ ಪಾತ್ರ ಪ್ರವೇಶಿಕೆ ಕುರಿತು ಕಲಿತದ್ದು ಹೆಚ್ಚು ಎಂದೂ ವಿನಂಮ್ರವಾಗಿ ಹೇಳುತ್ತಾರೆ. ಮುಂಬಯಿ, ಹೈದರಾಬಾದ್‌, ಕೊಚ್ಚಿ, ದೆಹಲಿ ಮಾತ್ರವಲ್ಲ, ಅಬುದಬಿ, ಶಾರ್ಜಾ, ಸಿಂಗಾಪುರ, ಅಮೇರಿಕಾದಲ್ಲೂ ಯಕ್ಷಗಾನದ ಪ್ರೀತಿ ಬೆಳೆಗಿಸಿದವರು. ನಮ್ಮ ಜೊತೆ ತೋಟಿ ಜೋಡಿ ಆದರೆ ಚಲೋ ಇತ್ತು ಹ್ವಾಹ್‌ ಅನ್ನೋ ಹಿರಿಯ ಕಲಾವಿದರೂ ಇದ್ದಾರೆ. ಪಂಚಲಿಂಗ ಮೇಳದಲ್ಲಿ ತೋಟಿಮನೆ ಅವರನ್ನು ನಿರ್ಲಕ್ಷಿಸಿದ್ದ ಕಲಾವಿದರೊಬ್ಬರೇ ನಮ್ದು ತೋಟಿ ಜೋಡಿ ಮಾಡಿ ಎಂದು ಸಂಘಟಕರಲ್ಲಿ ಮನವಿ ಮಾಡಿದ್ದೂ ಇದೆ.


ಕಲಾ ಸಾಧನೆಯ ಬದುಕಿನಲ್ಲಿ ಏಳು ಬೀಳುಗಳ ಮಧ್ಯೆ ಬೆಳೆದ ತೋಟಿಮನೆ ಎಲ್ಲವನ್ನೂ ಪ್ರೀತಿಯಿಂದಲೇ ಸ್ವೀಕರಿಸುತ್ತಾರೆ. ಅನೇಕ ಸನ್ಮಾನ, ಅಭಿನಂದನೆಗಳ ಜೊತೆಗೆ ಶೇಣಿ ಗೋಪಾಲಕೃಷ್ಣರಾಯರಂತವರ ಮೆಚ್ಚುಗೆ ಧನ್ಯತೆ ಮೂಡಿಸಿದೆ ಎಂದೂ ಘಟನೆ ವಿವರಿಸುತ್ತಾರೆ. ನಾಳೆ 19ಕೆ ಮುಗ್ವಾದಲ್ಲಿ ತೋಟಿ ರಜತ ರಂಗ ಅಭಿನಂದನೆ, ಗ್ರಂಥ ಬಿಡುಗಡೆ ಆಗಲಿದೆ. 
ಮನೆ ಮಂದಿಯಿಂದ ತಪ್ಪಿಸಿಕೊಂಡು ಯಕ್ಷಗಾನ ನೋಡಿ ಆಸಕ್ತಿ ಬೆಳಸಿಕೊಂಡು ಇಷ್ಟು ಎತ್ತರಕೆ ಏರಿದ ಮಾಣಿ ಜನರಿಂದಲೇ ಅಭಿನಂದನೆಗೆ ಪಾತ್ರರಾಗುತ್ತಿದ್ದಾರೆ. ಯಕ್ಷಗಾನ ಹಾಗೂ ಜನ ಕೊಟ್ಟ ಪ್ರೀತಿ ಅದು. ಒಂದು ಅಭಿನಂದನೆ ನೀವೂ ಹೇಳಬಹುದು – 9448931362

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.