ಶಿವಾಂಕಂ ತೆರೆದ ನೃತ್ಯಾಂತರಂಗ


Team Udayavani, Sep 1, 2017, 11:16 AM IST

01-KALA-4.jpg

ನೃತ್ಯ ಅನ್ನುವುದು ಸಾಗರವಿದ್ದಂತೆ, ಅತ್ಯಂತ ಆಳ ಹಾಗೂ ವಿಶಾಲವಾದುದು. ಒಬ್ಟಾತನ ಸತತ ಪರಿಶ್ರಮ ಮತ್ತು ಉತ್ಕಟ ಇಚ್ಛೆ ಮಾತ್ರ ಆತನನ್ನು ಕಲಾವಿದನನ್ನಾಗಿಸಲು ಸಾಧ್ಯ. ಹೀಗೆ ಸಾಧನೆಯ ಬೆನ್ನು ಹತ್ತಿ ಗೆಲುವನ್ನರಸಿ ಹೊರಟ ಬೆಂಗಳೂರಿನ ಯುವ ಉದಯೋನ್ಮುಖ ಕಲಾವಿದರ ತಂಡ “ಶಿವಾಂಕಂ’. ಅಭಿಲಾಷ್‌ ಉಡುಪ, ಆದಿತ್ಯ ಗಾನವಳ್ಳಿ, ಮಾಳವಿಕಾ ಐತಾಳ್‌ ಹಾಗೂ ಮಧುರಾ ಕಾರಂತ ಈ ತಂಡದ ಕಲಾವಿದರು. ಪುತ್ತೂರಿನ ಮೂಕಾಂಬಿಕ ಕಲ್ಚರಲ್‌ ಅಕಾಡೆಮಿಯ ವತಿಯಿಂದ ನಡೆಯುವ “ನೃತ್ಯಾಂತರಂಗ’ ಸರಣಿ ಕಾರ್ಯಕ್ರಮದ 32ನೇ ಕುಸುಮವಾಗಿ ಶಿವಾಂಕಂ ತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನವು ನಡೆಯಿತು. 

ಪ್ರಥಮ ಪೂಜ್ಯನಾದ ಗಣೇಶನನ್ನು ಸ್ಮರಿಸುತ್ತಾ ಆರಂಭಿಸಿದ ಈ ನೃತ್ಯ ಅತ್ಯಂತ ರಭಸಯುತ ವಾಗಿದ್ದು ಆಕರ್ಷಕ ಭಂಗಿಗಳಿಂದ ಕೂಡಿ, ಕಾರ್ಯಕ್ರಮಕ್ಕೆ ಒಳ್ಳೆಯ ಆರಂಭವನ್ನು ನೀಡಿತು. ಮುಂದೆ ಮಧುರೈ ಮುರಳೀಧರ್‌ ರಚನೆಯ ಷಣ್ಮುಖಪ್ರಿಯ ರಾಗ ಹಾಗೂ ಏಕತಾಳದಲ್ಲಿನ “ಷಣ್ಮುಖ ಕೌತ್ವಂ’ ಒಂದನ್ನು ನರ್ತಿಸಿದರು. ಇದರ ಸಂಗೀತವು ಕೇಳಲು ಬಹಳ ಆಪ್ಯಾಯಮಾನ ವಾಗಿದ್ದುದಲ್ಲದೆ ನೃತ್ಯವು ಬಹಳ ಸುಂದರವಾಗಿ ಮೂಡಿಬಂದಿತು.

ಮುಂದೆ ದೇವಿ ಸ್ತುತಿಯ ನೃತ್ಯವನ್ನು ಮಾಡಲಾಯಿತು. ಇಲ್ಲಿ ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ಐಕ್ಯ ಸ್ವರೂಪಳಾದ ಆದಿಶಕ್ತಿಯನ್ನು ವರ್ಣಿಸಿದರು. ಈ ನೃತ್ಯದಲ್ಲಿ ಅನೇಕ ರಚನೆಗಳು ನೃತ್ಯವನ್ನು ಆಕರ್ಷಕ ವಾಗಿಸಿದವು. ಈ ನೃತ್ಯದ ಸಾಹಿತ್ಯ ಗೌಳ ರಾಗ ಹಾಗೂ ಆದಿತಾಳದಲ್ಲಿ ರಚನೆ  ಗೊಂಡಿದೆ. 

ಮುಂದೆ “ಶಂಕರ ಶ್ರೀಗಿರಿನಾಥ ಪ್ರಭೋ’ ಎಂಬ ಶಂಕರನ ಸ್ತುತಿ ಯನ್ನು ಹಂಸಾನಂದಿ ರಾಗ ಹಾಗೂ ಆದಿತಾಳದಲ್ಲಿ ನರ್ತಿಸ ಲಾಯಿತು. ಇಲ್ಲಿ ಶಂಕರನನ್ನು ವರ್ಣಿಸುತ್ತಾ, ಅತೀ ಕ್ಲಿಷ್ಟ ಭಂಗಿಗಳನ್ನು ಪ್ರದರ್ಶಿಸಿದರು. ಈ ನೃತ್ಯದಲ್ಲಿ ನಾಟ್ಯಶಾಸ್ತ್ರದ ಕರಣಗಳು ಹಾಗೂ ಚಾರಿಗಳು ಅತಿ ಸುಂದರವಾಗಿ ಮೂಡಿಬಂದವು. ಈ ನೃತ್ಯದ ಕೊನೆಯ ಚರಣದಲ್ಲಿ ಎಡಪಿನಲ್ಲಿ ಪ್ರಾರಂಭವಾಗುವ ಅಡವುಗಳು ಗಮನಾರ್ಹ ಭಾಗವಾಗಿತ್ತು. 

ಕೊನೆಯಲ್ಲಿ ತಿಲ್ಲಾನವೊಂದನ್ನು ರಾಗ ಬೆಹಾಗ್‌ ಹಾಗೂ ಆದಿತಾಳದಲ್ಲಿ ನರ್ತಿಸಲಾಯಿತು. ಇದರ ಸಂಗೀತವು ಬಾಲಮುರಳಿಕೃಷ್ಣ ವಿರಚಿತ. ಇವರ ಹೆಚ್ಚಿನ ರಚನೆಗಳು ಕ್ಲಿಷ್ಟ ತಾಳದಿಂದ ಕೂಡಿರುತ್ತವೆ. ಇದು ಕೂಡ ಎಡಪಿನಿಂದ ಪ್ರಾರಂಭವಾಗುತ್ತದೆ. ಅದನ್ನು ಕೊಂಚವೂ ಎಡವದಂತೆ, ಜಾಣ್ಮೆಯಿಂದ ನೃತ್ಯಗಾರರು ಅಭಿನಯಿಸಿದರು. ಇದು ನೃತ್ಯಗಾರರ ತಾಳ ಜ್ಞಾನ, ಲಯ ಸಾಮರ್ಥ್ಯ ಹಾಗೂ ಅವರ ಪರಿಶ್ರಮಕ್ಕೆ  ಕನ್ನಡಿಯಂತಿತ್ತು.

 ಈ ತಂಡ ಹೊಸದಾಗಿ ನೃತ್ಯಕ್ಷೇತ್ರದಲ್ಲಿ ಹೆಜ್ಜೆಯನ್ನಿಟ್ಟಿದೆ. ಗುರುವಿನ ಮೇಲಿನ ಭಕ್ತಿ ಒಬ್ಬ ವಿದ್ಯಾರ್ಥಿಯನ್ನು ಯಶಸ್ಸಿನ ಉತ್ತುಂಗಕ್ಕೊಯ್ಯಬಲ್ಲದು. ಇದೇ ರೀತಿ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ತಪೋನಿರತರಾದರೆ ಶ್ರೇಷ್ಠ ಕಲಾವಿದರಾಗಿ ಮೂಡಿ ಬರುವ ಸಾಮರ್ಥ್ಯ ಇವರಲ್ಲಿದೆ.

ಶ್ರೀಪದ್ಮಾ ಡಿ. ಎಸ್‌.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.