ಗಿಳಿವಿಂಡಿನ ಮಹಿಳಾ ತಾಳಮದ್ದಳೆ
Team Udayavani, Sep 8, 2017, 1:41 PM IST
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಆವರಣದ ಗಿಳಿವಿಂಡಿನಲ್ಲಿ ಇತ್ತೀಚೆಗೆ, ಮಹಿಳಾ ಗಡಣವು ತಾಳಮದ್ದಳೆ ಕಾರ್ಯಕ್ರಮ ಮೂಲಕ ವಿಜೃಂಭಿಸಿ ಸರಣಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದೆ. ದಿನಗಳೆದಂತೆ, ಗೋವಿಂದ ಪೈ ಮನೆ ಆವರಣವು ಬರಹಗಾರ – ಕಲಾವಿದರ ಬಳಗದ ಮೂಲಕ ಸಾಕಷ್ಟು ಪ್ರೇಕ್ಷರನ್ನು ಸೆಳೆಯುತ್ತಿದೆ.
ಮಂಜೇಶ್ವರ, ಕುಂಬಳೆ, ಕಾಸರಗೋಡು ವಲಯದ ಮಹಿಳಾಮಣಿಗಳು ಮುಂದಿಟ್ಟ ಕಥಾ ಪ್ರಸಂಗ- ಸುಧನ್ವಮೋಕ್ಷ. ಆಟ-ಕೂಟಗಳಲ್ಲಿ ಪುರುಷರಿಗೆ ಸಮ ಪ್ರತಿಭೆಯಿಂದ ಮಿಂಚುವ ಮಹಿಳೆಯರ ಬಳಗದಲ್ಲಿನ ಪುಟ್ಟ ಕಲಾವಿದರೂ ಸಮರೋತ್ಸಾಹದ ಸನ್ನಿವೇಶಗಳನ್ನು ಚೆನ್ನಾಗಿ ಚಿತ್ರಿಸಿದರು. ಕಾಸರಗೋಡು ಕಾಲೇಜು ವಿದ್ಯಾರ್ಥಿನಿ ಶ್ರದ್ಧಾ ನಾಯರ್ಪಳ್ಳ ಅವರ ಕಂಚಿನ ಕಂಠ, ಮಿಂಚುವ ಕಣ್ಣುಗಳು, ಹಾವಭಾವ ಪ್ರೇಕ್ಷಕರು ಭಲೇ ಎನ್ನುವಂತಿತ್ತು.
ಸುಧನ್ವ, ಕೃಷ್ಣ, ಅರ್ಜುನ ಪಾತ್ರಗಳು ಸಂದರ್ಭ ಮತ್ತು ಪಾತ್ರ ಚ್ಯುತಿ ಬಾರದಂತೆ ಜಾಗ್ರತೆ ವಹಿಸಿದ್ದರು. ಕಥಾನಾಯಕ ಸುಧನ್ವ ಪಾತ್ರಧಾರಿ ಸುಧಾ ಕಲ್ಲೂರಾಯರ ಭಾವಾನುಭವಗಳು ಉತ್ತಮ ಸ್ವರಭಾವದ ಏರಿಳಿತಗಳಲ್ಲಿ ಸಾಗಿತ್ತು. ಯಜ್ಞಾಶ್ವದ ನಾಯಕ ಅರ್ಜುನನ ಪ್ರವೇಶ ಮತ್ತು ನಿರರ್ಗಳ ಮಾತುಗಾರಿಕೆ ಆಕರ್ಷಕವಾಗಿತ್ತು. ಎಂದಿನಂತೆ ಜಯಲಕ್ಷ್ಮೀ ಕಾರಂತರು ಕೃಷ್ಣನಾಗಿ ಯಶಸ್ವಿಯಾದರು. ಉಳಿದಂತೆ ಸರಸ್ವತಿ ಹೊಳ್ಳ, ಸುಜಾತಾ ತಂತ್ರಿ ಪೋಷಕ ಪಾತ್ರದಲ್ಲಿ ರಂಜಿಸಿದರು. ಭಾಗವತರಾಗಿ ಭವ್ಯಶ್ರೀ ಮಂಡೆಕೋಲು, ಚೆಂಡೆ ಮದ್ದಳೆಗಳಲ್ಲಿ ಗಣೇಶ್ ರಾವ್ ಅಡೂರು ಮತ್ತು ಕೃಷ್ಣಮೂರ್ತಿ ಕಲ್ಲೂರಾಯ ಸಹಕರಿಸಿದರು. ಸತೀಶ್ ಅಡಪ, ಜಯಾನಂದ, ಕಮಲಾಕ್ಷ ಕಾರ್ಯಕ್ರಮಕ್ಕೆ ಸಹಕರಿಸಿದರು.
ಸುಭಾಶ್ಚಂದ್ರ ಕಣ್ವತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ