ಅಗಣಿತ ದೃಷ್ಟಿಗೆ  ವರ್ಣರೂಪ


Team Udayavani, Sep 8, 2017, 1:53 PM IST

08-KALA-4.jpg

ನಗರದ ವೇಗದ ಬೆಳವಣಿಗೆಯ ಹಿಂದೆ ತಣ್ತೀ, ಸಿದ್ಧಾಂತರಹಿತ ಬಾನಿಗೇರುವ ಚಿತ್ತಗಳ ಅತೀವ ಅಭಿಲಾಷೆ, ಐಷಾರಾಮಿ ಬದುಕು, ಸಿರಿತನದ ಝಲಕು ಕಲಸು ಮೇಲೋಗರವಾಗಿ ಕಾಂಕ್ರೀಟು ಕಾಡು ಫ‌ಲವತ್ತಾಗುತ್ತದೆ. ನಗರದ ಸಾಮಾಜಿಕ ಬದುಕು ಸಿರಿತನದ ಕೊಡು -ಕೊಳ್ಳುವಿಕೆಗೆ ಮಾತ್ರ ಸೀಮಿತವಾಗಿ ಮಾನವೀಯತೆಯ ಸಂಬಂಧಗಳು ದೂರ ವಾಗುತ್ತಲೇ ಇರುತ್ತವೆ. ವೇದಿಕೆಯಲ್ಲಿ ಅಭಿನಯಕ್ಕೆ ಅಣಿಯಾದ ಮುಖವಾಡಗಳಿಗಿಂತ ಸಮಾಜದಲ್ಲಿ ಅಗೋಚರವಾಗಿ ತಮ್ಮ ಬದುಕಿನ ಸಂಪೂರ್ಣ ಮುಖವಾಡಗಳನ್ನು ಧರಿಸಿಕೊಳ್ಳುವ ಪರಿಸ್ಥಿತಿ ಎಂತಹದು ಎಂಬ ಪರಿಕಲ್ಪನೆಯಲ್ಲಿ ಕಲಾವಿದ ಕುಪ್ಪಣ್ಣ ಕಂಡಗಲ್‌ ಅವರು ನಗರದ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ರಹಸ್ಯ ರೂಪ ಎಂಬ ಚಿತ್ರ ಕಲಾಪ್ರದರ್ಶನವನ್ನು ಮಾಡಿದ್ದಾರೆ. ಮುಖಗಳ ಭಾವಗಳ ನವುರು ಛಾಯೆಗಳು, ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶಗಳು ನಿರ್ಮಾಣವಾಗುವ ಸಹಜ ಸಂಕೀರ್ಣತೆಗಳ ನಾಗರಿಕ ಬದುಕಿನ ಸಂತಸದೊಳಗಿನ ಸಂಕಟಗಳು, ಉನ್ನತ ಸಿದ್ಧಾಂತಗಳಿಂದ ಆರೋಹಣವಾಗಬೇಕಾಗಿದ್ದ ನಿಲುವುಗಳ ಅವರೋಹಣ, ಸುಖೀ ಪಥದಲ್ಲಿ ಅನುಭವಿಸಬೇಕಾದ ಕಾಯಗಳು ರೋದಿಸುವಂತಹ ದುಗುಡ ಚಿಂತನೆಗಳು, ನಾರಿಯ ಕೋಮಲ ಹೂವೆಂಬ ಹೃದಯವನ್ನು ಹಿಂಡುವ ಬೆಂಕಿಯಂಥ ಕಾಠಿನ್ಯ, ಸಾಂಪ್ರದಾಯಿಕ ಆಚಾರ, ವಿಚಾರ ಗಳನ್ನು ಸಾಂದರ್ಭಿಕವಾಗಿ ಸಾದರ ಪಡಿಸುವ ಪ್ರಕಾರಗಳನ್ನು ಕುಪ್ಪಣ್ಣನವರು ವಸ್ತು ವಿಚಾರ ಕ್ಕನುಗುಣವಾಗಿ ಚಿತ್ರಿಸಿರುವರು. ಕಡು ಬಣ್ಣಗಳನ್ನು ಹೆಚ್ಚು ಬಳಸದೇ ತಿಳಿ ಬಣ್ಣಗಳಲ್ಲೇ ವಸ್ತುಗಳ ಕಲಾತ್ಮಕ ಒಳಹೂರಣಗಳನ್ನು ಕೃತಿಗಳಲ್ಲಿ ದೃಢಪಡಿಸಿದ್ದಾರೆ. ಸಾಮಾಜಿಕ ಚಿಂತನೆ ಗಳಲ್ಲೂ ಹೆಚ್ಚು ಗೊಂದಲಕ್ಕೊಳಪಡದ ಹಾಗೂ ಅಧ್ಯಯನಕ್ಕೆ ಆಧಾರವಾಗುವಂತಹ ವಿಚಾರಗಳನ್ನು ತರ್ಕಿಸುವಂತಹ ಸಾಮರ್ಥ್ಯ ದಲ್ಲಿ ಬಣ್ಣಗಳಿಗೊಂದು ಒಪ್ಪ ಓರಣ ನೀಡಬಲ್ಲರು. ಕಲಾಕೃತಿಗಳನ್ನು ವೀಕ್ಷಕರು ಮೆಚ್ಚುವಂತಿದ್ದರೆ ಮೊದಲಿಗೆ ಕೃತಿ ಕರ್ತನಿಗೆ ಅದು ಇಷ್ಟವಾಗಬೇಕು ಮತ್ತು ಕಲಾವಿದ ಬಿಂಬಿಸಿದ ಕಲಾಕೃತಿ ಯನ್ನು ವೀಕ್ಷಕರು ಗ್ರಹಿಸಿಕೊಳ್ಳಲು ಯಾವುದೇ ಗೊಂದಲ ಗಳಿರಬಾರದು ಮತ್ತು ಆ ಗೊಂದಲದಿಂದ ಕಲಾವಿದ ಮತ್ತು ಕಲಾಭಿಮಾನಿಯ ನಡುವೆ ದೂರತೀರವಾಗಬಾರದೆನ್ನುವ ಇವರ ಅಭಿಪ್ರಾಯ ಈಗಿನ ಕಲಾಕ್ಷೇತ್ರಕ್ಕೆ ಅನ್ವಯವಾಗುವಂಥದ್ದೇ. ಪರಿಕಲ್ಪನೆಗಳು ಒಂದಕ್ಕೊಂದು ಪೋಣಿಸುವ‌ಂತಿದ್ದು ಹಿಂದಿನ ವಸ್ತುಸ್ಥಿತಿ ಮುಂದಿನ ಪ್ರಗತಿಗೆ ಪೂರಕವಾಗುವ ಕಲಾಧೋರಣೆಗಳು ವಿಕಸನವಾದರೆ ಕೃತಿ ಖರೀದಿಸುವವರಿಗೆ ಏಕತಾನತೆಯಿಂದ ಹೊರಬರುವ ಹಾಗೂ ಕಲಾವಿದ ಮತ್ತು ಕಲಾಪೋಷಕರ ಒಡನಾಟ ಹತ್ತಿರವಾಗಬಹುದು ಎಂಬ ಧ್ಯೇಯದಲ್ಲಿ ಇವರು ಕಲಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ನಾಗರಿಕತೆಯ ತೊಟ್ಟಿಲಲ್ಲಿ ಆಧುನಿಕತೆಯ ಜೋಗುಳ ನಾದವನ್ನು ಹೊಮ್ಮಿಸಿದರೂ ಅಗೋಚರ ಆಕ್ರಂದ‌ನವು ಮರೆಯಾಗಿಯೇ ಉಳಿಯಬಲ್ಲದು, ಆ ರೋದನವು ಭವಿಷ್ಯದಲ್ಲಿ ದುರಂತವಾಗ ಲಿರುವುದಂತೂ ಕಟು ಸತ್ಯ.

ದಿನೇಶ್‌ ಹೊಳ್ಳ
 

ಟಾಪ್ ನ್ಯೂಸ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.