ವಿಶಿಷ್ಟ ಪ್ರಮಾ ಸಂಸ್ಮರಣ


Team Udayavani, Dec 8, 2017, 4:30 PM IST

08-42.jpg

ಪಳ್ಳತ್ತಡ್ಕ ಕೇಶವ ಭಟ್‌ ಅವರು ಅಂತಾರಾಷ್ಟ್ರೀಯ ಸಸ್ಯವಿಜ್ಞಾನಿಯಾಗಿದ್ದವರು. ಅಪರೂಪದ ಮತ್ತು ಅಪ್ರತಿಮ ಚಿಂತನೆಯ ಡಾ| ಭಟ್ಟರ ಒಬ್ಟಾಕೆ ಪುತ್ರಿ ಡಾ| ಸುಮಾ ಭಟ್‌ ಸದ್ಯ ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಸುಪ್ರಸಿದ್ಧ ಅಂತಾರಾಷ್ಟ್ರೀಯ ವಿಜ್ಞಾನಿ ಮತ್ತು ಅಪೂರ್ವ ಚಿಂತನೆಯ ಬಹುಭಾಷಾ ತತ್ವಜ್ಞಾನಿ. ಆಕೆಯ ಪುತ್ರಿ ಪ್ರಮಾ, ಬಾಲ್ಯದಲ್ಲೇ ತನ್ನ ಸಾಧನೆಯ ಹಲವಾರು ಪ್ರತಿಭಾ ಸೋಜಿಗಗಳನ್ನು ತೋರಿ ಎಲ್ಲರನ್ನೂ ನಿಬ್ಬೆರಗಾಗಿಸಿದವಳು. ವಿಧಿಯ ಆದೇಶದಂತೆ ಹೈಸ್ಕೂಲು ಮುಗಿಸುವ ಮುನ್ನವೇ ತನ್ನ ಜೀವನದ ಪ್ರಯಾಣವನ್ನೂ ಮುಗಿಸಿ ಎಲ್ಲರನ್ನೂ ನಿಸ್ಸಹಾಯಕರನ್ನಾಗಿಸಿದವಳು. ಮುಗ್ಧತೆ, ವೈಜ್ಞಾನಿಕ ಕುತೂಹಲ ಮತ್ತು ಹಲವು ವಿಶೇಷ ಪ್ರತಿಭೆಗಳ ಗನಿ ಪ್ರಮಾ. “ಪ್ರಮಾ’ ಅಂದರೇ ವಿಶೇಷ ಜ್ಞಾನ ಎಂದರ್ಥ. ಹೆಸರಿಗೆ ತಕ್ಕಹಾಗಿನ ಅರಿವು, ಜ್ಞಾನ ಆಕೆಯದಾಗಿತ್ತು.

ಇದೀಗ ಕಳೆದ ಮೂರು ವರ್ಷಗಳಿಂದ ಮಣಿಪಾಲದ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಅಪ್ರತಿಮ ಸಾಧನೆ ಮಾಡುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಚಿಕ್ಕ ವಯಸ್ಸಿನಲ್ಲೇ  ನಮ್ಮ ಜಿಲ್ಲೆಯಲ್ಲಿ ಪ್ರಾಡಿಜಿ ಅಂತ ಕರೆಯಿಸಿಕೊಳ್ಳುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹಾಗೂ ಬೆಂಬಲವನ್ನು ನೀಡಿ ಪ್ರೋತ್ಸಾಹಿಸುವ ಸಾತ್ವಿಕ ಉದ್ದೇಶ ಇದರದು. ವೇದ, ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ, ಯಕ್ಷಗಾನ, ನಾಟಕವೇ ಮುಂತಾದ ವಿವಿಧ ಕಲಾಪ್ರಕಾರಗಳಲ್ಲಿ ಸಾಧನೆಗೈಯುವ ಮಕ್ಕಳನ್ನು ಗುರುತಿಸಿ ಪ್ರಮಾ ಪ್ರಶಸ್ತಿ ನೀಡಿ ಸಾರ್ವಜನಿಕರ ಎದುರು ಸಾದರಪಡಿಸುವ ಕೈಂಕರ್ಯವನ್ನು ಈ ಟ್ರಸ್ಟ್‌ ಮಾಡಿಕೊಂಡು ಬರುತ್ತಿದೆ. “ಚೈಲ್ಡ್‌ ಪ್ರಾಡಿಜಿ’ಗಳು “ಅಡಲ್ಟ್ ಟ್ರಾಜೆಡಿ’ಯಾಗಿ ರೂಪಾಂತರಗೊಳ್ಳದ ಹಾಗೆ ಕಾಯ್ದುಕೊಳ್ಳಲು ಅವರ ಪೋಷಕರಿಗೆ ಹೆಚ್ಚಿನ ಜವಾಬ್ದಾರಿಯ ಅರಿವಿನ ಕಾಳಜಿಯನ್ನು ಮೂಡಿಸುವ ಪ್ರಯತ್ನ ಇದು. ಡಾ| ಸುಮಾ ಭಟ್ಟರ ಚಿಂತನೆಯಂತೆ ಪ್ರಮಾ ಪ್ರಶಸ್ತಿ ಪಡೆದ ಮಕ್ಕಳ ಮುಂದಿನ ಪ್ರಗತಿಯನ್ನೂ ಕಾಲಕಾಲಕ್ಕೆ ಗಮನಿಸುತ್ತಾ ಇರಲಾಗುತ್ತದೆ ಮತ್ತು ಬೇಕಿದ್ದಲ್ಲಿ ಸೂಕ್ತ ಮಾರ್ಗದರ್ಶಕರ ಸಲಹೆ ಸೂಚನೆಗಳನ್ನೂ ಅಂತಹ ಮಕ್ಕಳಿಗೆ ಸಿಗುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ. ನಮ್ಮ ಪ್ರಸ್ತುತ ಸಮಾಜದಲ್ಲಿ ಪ್ರತಿಭಾಶಾಲಿ ಮಕ್ಕಳನ್ನು ಸಾಕುವ ಮತ್ತು ಸಲಹುವ ಕೆಲಸ ಅದೆಷ್ಟು ಕಷ್ಟಕರವಾದದ್ದು ಮತ್ತು ಅದೆಷ್ಟು ಸೂಕ್ಷ್ಮಮಾನವೀಯತೆಗೆ ಸಂಬಂಧಿಸಿದ್ದು ಎಂಬುದನ್ನು ಈ ಟ್ರಸ್ಟ್‌ ಚೆನ್ನಾಗಿ ತಿಳಿದು ಕೆಲಸವನ್ನು ಮಾಡುತ್ತಿದೆ. ನಿಜಕ್ಕೂ ಇದೊಂದು ಸ್ತುತ್ಯರ್ಹವಾದ ಅಪೂರ್ವ ಕಾರ್ಯಕ್ರಮ.

ಈ ವರ್ಷ ಪ್ರಮಾ ಪ್ರಶಸ್ತಿಗೆ ಪಾತ್ರರಾದವರು: ವಿಷ್ಣುರಾತ ಆಚಾರ್ಯ (ಋಗ್ವೇದ); ಕೋಟ ಅನಿಕೇತ ಶೆಣೈ (ವಿಜ್ಞಾನ), ಸದ್ಗುಣ ಐತಾಳ (ವಾದ್ಯ ಸಂಗೀತ) ಆರತಿ ಬಾಗ್ಲೋಡಿ (ಇಂಗ್ಲಿಷ್‌ ಸಾಹಿತ್ಯ) ಮತ್ತು ದಿವ್ಯಶ್ರೀ (ಕರ್ನಾಟಕ ಸಂಗೀತ). ತನ್ನ ತಂದೆಯಿಂದ ಚ್ಯುತಿಯಿಲ್ಲದೆ ಕಲಿತುಕೊಂಡ ವೇದ ಪಾಠಗಳನ್ನು, ತನ್ನ ಅಸ್ಖಲಿತ ಸ್ಪಷ್ಟ ಉಚ್ಛಾರಗಳೊಂದಿಗೆ ಕೆಲವಾರು ಋಕ್ಕುಗಳನ್ನು ಅರ್ಥ ಸಹಿತ ವಿವರಿಸುತ್ತಾ ಸಾಗಿದ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿಷ್ಣುರಾತನ ವೇದ ವಿದ್ಯೆಯ ಸಾಮರ್ಥ್ಯ ಸಂಸ್ಕೃತ ಪಂಡಿತ ವೇದಕೋವಿದರನ್ನು ತಲೆದೂಗಿಸಿತ್ತು. ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಕೋಟ ಅನಿಕೇತ ಶೆಣೈ ತಾನು ಸಂಶೋಧಿಸಿದ ಸೌರ ಶಕ್ತಿ ಬಳಕೆಯ ವೈಜ್ಞಾನಿಕ ಮಾದರಿಯೊಂದರ ಜತೆಗೆ ಜಪಾನ್‌ ಮೊದಲಾದ ದೇಶಗಳಿಗೆ ಹೋಗಿ ಉಪನ್ಯಾಸ ನೀಡಿದ್ದಲ್ಲದೆ ನೊಬೆಲ್‌ ವಿಜ್ಞಾನಿಗಳ ಒಡನಾಟ ಸಂಪಾದಿಸಿದ ಓರ್ವ ಅಪರೂಪದ ಬಾಲ ವಿಜ್ಞಾನಿ. ಆತನ ಆತ್ಮವಿಶ್ವಾಸದ ಮಾತುಗಳು ಸಭೆಯನ್ನು ಚಕಿತಗೊಳಿಸಿದ್ದಲ್ಲದೆ, ತೀರಾ ಕಡಿಮೆ ವೆಚ್ಚದಲ್ಲಿ ಗರಿಷ್ಠ ಸೌರ ಶಕ್ತಿಯ ಕೊಯ್ಲು ಮಾಡುವುದರ ಬಗೆಗೆ ಆತ ತೋರಿದ ಸಾಧನೆ ಸಂಶೋಧನೆ ರಾಷ್ಟ್ರಮಟ್ಟದ ಗರಿಮೆ ಸಾಧಿಸುವುದಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಎಲ್ಲರಿಗೂ ವಿದಿತವಾಯಿತು. ಹೈಸ್ಕೂಲಿನ ವಿದ್ಯಾಭ್ಯಾಸದ ಜತೆ ಜತೆಗೇ ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿಯವರೆಗೆ ಮ್ಯಾಂಡೊಲಿನ್‌ ವಾದನವನ್ನು ನೀಡಿ ಪ್ರಖ್ಯಾತಿಗೆ ಬಂದಿರುವ ಸದ್ಗುಣ ಐತಾಳನ ಸಾಧನೆ ಆತನ ಪ್ರಸ್ತುತಿಯಲ್ಲೇ ವ್ಯಕ್ತವಾಯಿತು. ಇಂಗ್ಲಿಷ್‌ ಕಥೆ, ಕವನ, ಪ್ರಬಂಧಗಳನ್ನು ನಿರ್ಭಿಡೆಯಿಂದ ಏನೇನೂ ಅಳುಕಿಲ್ಲದ ಪ್ರಸ್ತುತಪಡಿಸಿದವರು ಕಟ್ಟುಮಸ್ತಾದ ಎತ್ತರದ ಗಂಭೀರ ಸ್ವಭಾವದ ಯುವತಿ, ಎರಡನೆಯ ಪಿಯುಸಿಯಲ್ಲಿ ಓದುತ್ತಿರುವ ಆರತಿ ಬಾಗ್ಲೋಡಿ. ಕಾರ್ಯಕ್ರಮದ ನಿರೂಪಣೆಯನ್ನು ತನ್ನ ನಿರರ್ಗಳ ಇಂಗ್ಲಿಷ್‌ ಭಾಷೆಯಲ್ಲಿ ಲೀಲಾಜಾಲವಾಗಿ ನೀಡುತ್ತಿದ್ದ ಹಾಗೂ ಮಾತನಾಡುತ್ತಿದ್ದ ಮೇಧಾ ಭಟ್‌ ಅವರು ವಾಚಿಸಿದ ಸ್ವರಚಿತ ಕವನ ಸಭಾಸದರನ್ನು ಬೆಚ್ಚಿಬೀಳಿಸಿತೆಂದರೆ ಉತ್ಪ್ರೇಕ್ಷೆಯಲ್ಲ. ತನ್ನ ಸುಲಲಿತ ಕಂಠದಲ್ಲಿ ಸೊಗಸಾಗಿ ಕರ್ನಾಟಕ ಸಂಗೀತದ ಸೊಗಡನ್ನು ಹಿಂಡಿ ಹಿಂಜಿದ ಮಣಿಪಾಲದ ದಿವ್ಯಶ್ರೀ ತನ್ನ ಅಂದವಾದ ಚಿತ್ರಕಲೆಯ ಕುಸುರಿಗಳನ್ನೂ ಪ್ರದರ್ಶಿಸಿ ಮೆರೆದರು. 

ಒಬ್ಬೊಬ್ಬರದು ಒಂದೊಂದು ಮೇಲುಗೈ. ಎಲ್ಲರಲ್ಲೂ ಮಕ್ಕಳ ಮುಗ್ಧತೆ. ಅವಿರತ ಸಾಧನೆ ಮಾಡಿದ ದೃಷ್ಟಿ. ತಮ್ಮೆಲ್ಲ ಸಹಪಾಠಿಗಳಂತೆ ಆಟವಾಡದೆ ತಮ್ಮ ತಮ್ಮ ಕಸುಬುಗಾರಿಕೆಯಲ್ಲೇ ತೊಡಗಿಸಿಕೊಂಡು ತೃಪ್ತಿಪಟ್ಟವರು ಇವರು. ಈ ಸಾಧಕರ ಹಿಂದೆ ಪೂರ್ಣ ಪೋಷಣೆಗಾಗಿ ನಿಂತ ತಂದೆ ತಾಯಿಯರು ಮತ್ತು ಗುರುವರ್ಯರು ಅಭಿನಂದನೀಯರು. ಸಕಾಲಿಕವಾಗಿ ಪೋಷಕರೆಲ್ಲರಿಗೆ ಎಚ್ಚರಿಕೆಯ ಹಾಗೂ ಅರಿವನ್ನು ಮೂಡಿಸುವ ಮಾತನ್ನಾಡಿದ ಮನೋವಿಜ್ಞಾನಿ ಡಾ| ವಿರೂಪಾಕ್ಷ ದೇವರಮನೆಯವರ ನಲು°ಡಿಗಳು ಎಲ್ಲ ತಂದೆ ತಾಯಂದಿರಿಗೆ ಹಾಗೂ ಮಕ್ಕಳನ್ನು ಬೆಳೆಸುವ ಶಿಕ್ಷಕರಿಗೆ ದಾರಿದೀಪವಾಗಿದ್ದವು. ಉತ್ಸಾಹದ ಚಿಲುಮೆಯೇ ಆಗಿದ್ದ ಮಂಗಳೂರಿನ ಡಿವಿಜಿ ಬಳಗದ ಸಿ. ಕನಕರಾಜು ಅವರ ಚಿಂತನೆ ಹಾಗೂ ಪ್ರೋತ್ಸಾಹದ ನುಡಿಗಳು ಮಾರ್ಗದರ್ಶಕವಾಗಿದ್ದವು. ಡಾ| ಸುಮಾ ಅವರ ಸೋದರಿಯರಾದ ಡಾ| ಅನಸೂಯ ಹಾಗೂ ಪವನ ಕುಮಾರಿಯವರ  ಸಂಘಟನಾ ಚಾತುರ್ಯ ಮತ್ತು ಪ್ರಾಮಾಣಿಕ ಮಾತುಗಳು ಹಾಗೂ ಪಳ್ಳತ್ತಡ್ಕ ದೇವಕಿ ಭಟ್‌ ಅವರ ಹಿರಿ ಉಪಸ್ಥಿತಿ ತುಂಬಿದ ಸಭಾಸದರೆಲ್ಲರನ್ನು ಕಾರ್ಯಕ್ರಮದ ಕೊನೆಯವರೆಗೂ ಹಿಡಿದು ನಿಲ್ಲಿಸಿತ್ತು. ಶಶಿಕಲಾ ಎನ್‌. ಭಟ್‌ ಮತ್ತು ನರಸಿಂಹ ಭಟ್‌ ಅವರ ಆಶ್ರಯದಲ್ಲಿ ಮಣಿಪಾಲ ಡಾಟ್‌ ನೆಟ್‌ ಸಭಾಂಗಣದಲ್ಲಿ ನವೆಂಬರ್‌ 12ರಂದು ನಡೆದ ಈ ಸಮಾರಂಭವು ಪರಿಸರದ ಹಲವು ಪ್ರಾಜ್ಞ ಶ್ರೋತೃ ವರ್ಗದಿಂದ ತುಂಬಿ ಪ್ರಶಂಸೆಗೆ ಒಳಗಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ.

ವೀ. ಅರವಿಂದ ಹೆಬ್ಟಾರ್‌

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.