ನಾಟ್ಯ ವಸಂತದ ನೃತ್ಯ ಪಲ್ಲವ


Team Udayavani, Dec 29, 2017, 11:15 AM IST

29-10.jpg

ಕುಂದಾಪುರದ “ನಾಟ್ಯವಸಂತ’ ನೃತ್ಯಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ, ಸದ್ದಿಲ್ಲದೆ ಶಾಸ್ತ್ರೀಯ ಭರತನಾಟ್ಯ ಶೈಲಿಯ ಕ್ಷೇತ್ರದಲ್ಲಿ ನೃತ್ಯ ಶಿಕ್ಷಣ, ಪ್ರದರ್ಶನಗಳು, ನೃತ್ಯ ಶಿಬಿರ ಮುಂತಾದ ಹಲವು ನೃತ್ಯ ಸಂಬಂಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಕುಂದಾಪುರದ ಕುಂದೇಶ್ವರ ಸಭಾಂಗಣದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. 

ಈ ಪ್ರದರ್ಶನದಲ್ಲಿ ಯುಗಳ ಹಾಗೂ ತ್ರಿವಳಿ ಗಳ ಕಾರ್ಯಕ್ರಮ ನಿರ್ವಹಿಸಲ್ಪಟ್ಟಿತು. ಮೈತ್ರಿ ಹಾಗೂ ರೋಷನ್‌ ಜತೆಯಾಗಿ ನರ್ತಿಸಿದರೆ, ಯುಕ್ತಿ, ಸುರಭಿ ಹಾಗೂ ನಿಯತಿಯವರು ಒಂದಾಗಿ ನರ್ತಿಸಿದರು. ಒಡೆಯರ ಕೃತಿ ಅಠಾಣ ರಾಗದ ಮಹಾಗಣಪತಿಂನಿಂದ ಯುಗಳ ನೃತ್ಯ ಪ್ರಾರಂಭಗೊಂಡರೆ, ಮುಂದೆ ತ್ರಿವಳಿಯವರು ಕುಪ್ಪು ಸ್ವಾಮಿಯವರ ನಾಟಿ ಕುರಂಜಿ ಪದವರ್ಣವನ್ನು ಅಭಿನಯಿಸಿ ದರು. ದೀಕ್ಷಿತರ ಕುಮುದಪ್ರಿಯ ರಾಗದ ಅರ್ಧನಾರೀಶ್ವರ ಕೃತಿಯನ್ನು ಮೈತ್ರಿ ಹಾಗೂ ರೋಶನ್‌ ಜಂಟಿಯಾಗಿ ಪ್ರದರ್ಶಿಸಿದರು. ಪರಮೇಶ್ವರನ ಅರ್ಧನಾರೀಶ್ವರ ವ್ಯಕ್ತಿತ್ವವನ್ನು ವರ್ಣಿಸುವ ಲಾಸ್ಯ, ತಾಂಡವ ಭಂಗಿಗಳ ಹಾಗೂ ಭಾವಾಭಿನಯದ ನರ್ತನ ಕಳೆಗಟ್ಟಿತು. ಪೂರ್ವಿ ಕಲ್ಯಾಣಿ ರಾಗದ ಆನಂದ ನಟನಂ ಎಂಬ ಚಿದಂಬರೇಶ್ವರ ನಟರಾಜನ ಭಂಗಿಗಳ ವರ್ಣನೆ ಹಾಗೂ ಅಲಂಕಾರಗಳ ಚಿತ್ರಣವನ್ನು ತ್ರಿವಳಿಗಳು ಹಂಚಿಕೊಂಡು ನರ್ತಿಸಿದ ರೀತಿ ಚೆನ್ನಾಗಿತ್ತು. ಮುಂದೆ ಚಾರುಕೇಶಿ ರಾಗದ ಲಾಲ್‌ಗ‌ುಡಿಯವರ “ಇನ್ನುಂ ಎನ್‌ ಮನಂ’ ಎಂಬ ಪದವರ್ಣವು ಮಾಧವ ಹಾಗೂ ನಾಯಕಿಯ ನಡುವಿನ ಪ್ರೇಮ ನಿವೇದನೆ ಸಮರ್ಪಣೆಗಳನ್ನು ರೋಶನ್‌ ಮಾಧವನಾಗಿ, ಮೈತ್ರಿ ನಾಯಕಿಯಾಗಿ ಮನಸ್ಸಿಗೆ ಆಪ್ತವಾಗುವಂತೆ ಅಭಿನಯಿಸಿದ್ದಲ್ಲದೆ, ವರ್ಣದ ನೃತ್ತಭಾಗದ ಜತಿ, ಚರಣಸ್ವರಗಳನ್ನೂ ಅಂಗಶುದ್ಧಿ, ಉತ್ತಮ ಅಡವು ವಿನ್ಯಾಸಗಳ ಸಹಿತ ನಿರ್ವಹಿಸಿ ಕೃತಿಯ ಭಾವ ಪೋಷಣೆಗೆ ನ್ಯಾಯವಿತ್ತರು. ಕೊನೆಯದಾಗಿ ಅತ್ಯಂತ ಕ್ಲಿಷ್ಟ ಹಾಗೂ ಚುಂಬಕ ಶಕ್ತಿಯುಳ್ಳ ಊತ್ತುಕಾಡು ಅವರ ಗಂಭೀರ ನಾಟದ ಕಾಳಿಂಗ ನರ್ತನ ತಿಲ್ಲಾನವನ್ನು ತ್ರಿವಳಿಗಳು ಬಾಲಕೃಷ್ಣನ ನೃತ್ಯೋಪಾದಿಯಲ್ಲೇ ಕುಣಿದು ಕುಪ್ಪಳಿಸಿ ನರ್ತಿಸಿದ್ದು ಒಂದು ಸವಾಲೇ ಸೈ. 

ಪ್ರವಿತಾ ಅವರ ಹೊಸ ಸಾಧ್ಯತೆಗಳ ಬಗ್ಗೆ ಇರುವ ತುಡಿತ, ಅಂಗ ಶುದ್ಧಿ ಹಸ್ತ ಪಾದಗಳ ನರ್ತನ ವಿನ್ಯಾಸ, ಅಡವು ನಿರ್ವಹಣೆ, ಅಭಿನಯದ ಸಂಯೋಜನೆ, ಭಂಗಿಗಳು, ಜತಿಗಳ ವೈವಿಧ್ಯತೆ, ಮೇಲ್ಪಟ್ಟ ರಂಗ ನಿರ್ದೇಶನ , ಸಂಗೀತ ಕಚೇರಿಯ ಕೃತಿಗಳ ಹೆಚ್ಚಿನ ಆಯ್ಕೆ, ವೇಷ ಭೂಷಣದ ಬಗ್ಗೆ ಇರುವ ಕಲ್ಪನೆ ಇವು ಈ ಪ್ರದರ್ಶನದಲ್ಲಿ ಗುರು ಹಾಗೂ ಶಿಷ್ಯರ ನರ್ತನದ ನಿರ್ದೇಶನದ ವಿಶೇಷ ಪರಿಣಾಮ ಬೀರಿದ ಅಂಶಗಳು. ಒಂದು ಪ್ರದರ್ಶನದಲ್ಲಿ ಎರಡು ಪದವರ್ಣಗಳು, ಎರಡು ಒಂದೇ ವಸ್ತುವಿನ ನೃತ್ಯ ಬಂಧಗಳು ಇರುವುದು ಅಷ್ಟು ಸಮಂಜಸವಲ್ಲದಿದ್ದರೂ ಇಲ್ಲಿ ಈ ಕಲಾ ವಿದ್ಯಾರ್ಥಿಗಳ ಪ್ರೌಢಿಮೆಯ ಪ್ರದರ್ಶನದ ಮಾನದಂಡ ಇದಾದುದರಿಂದ, ಇದು ಸಂಪ್ರದಾಯ ರೀತಿಯ ಪ್ರದರ್ಶನವಾಗದೇ ಇದ್ದುದರಿಂದ ಇದನ್ನು ಸ್ವೀಕರಿಸಬಹುದು. ಒಟ್ಟಾರೆ ಈ ಪ್ರದರ್ಶನ ಗುರು ಮತ್ತು ಶಿಷ್ಯಂದಿರುಗಳಿಗೆ ಉತ್ಕೃಷ್ಟ ವೇದಿಕೆಯಾಯಿತು.

ಹಿಮ್ಮೇಳದಲ್ಲಿ ಪ್ರವಿತಾ ನಟ್ಟುವಾಂಗ ನಡೆಸಿದರು. ಹಾಡು ಗಾರಿಕೆಯಲ್ಲಿ ಸ್ವತಃ ನೃತ್ಯ ಕಲಾವಿದೆಯೂ ಆಗಿರುವ ವಿ| ಪ್ರೀತಿಕಲಾ ಅವರು ಒಪ್ಪವಾಗಿ ಹಾಡಿದರು. ಕಾಳಿಂಗ ನರ್ತನ ತಿಲ್ಲಾನವನ್ನು ಅತ್ಯಂತ ಸುಲಲಿತವಾಗಿ ಹಾಡಿ ನೃತ್ಯಾಂಗನೆಯರಿಗೆ ಉತ್ಸಾಹ ನೀಡಿದರು. ಮೃದಂಗದ ಬಾಲಚಂದ್ರ ಭಾಗವತರು ಚೆನ್ನಾದ ನುಡಿತಗಳಿಂದ ನೃತ್ಯಕ್ಕೆ ಬೆಂಬಲ ನೀಡಿದರು. ಕೊಳಲಿನ ಮುರಲೀಧರ್‌, ವಯಲಿನ್‌ನ ಶರ್ಮಿಲಾ ರಾವ್‌ ತಮ್ಮ ವಾದನದಿಂದ ಭಾವಸು#ರಣೆಗೆ ಸಹಕಾರವಿತ್ತರು. 

ಮನೋರಂಜಿನಿ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.