ದಾಸ ಸಂಗೀತದೊಂದಿಗೆ ಷಷ್ಟ್ಯಬ್ದ


Team Udayavani, Jan 19, 2018, 3:06 PM IST

19-62.jpg

ಹುಟ್ಟುಹಬ್ಬ, ವೈವಾಹಿಕ ಜೀವನದ ವರ್ಷಾಚರಣೆ, ಷಷ್ಟ್ಯಬ್ದಿ ಪೂರ್ತಿಯಂತಹ ಆಚರಣೆಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಮೋಜಿನ ಪಾರ್ಟಿಗಳಾಗುತ್ತಿರುವ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಗೌರವಿಸಿ, ದಾಸವರೇಣ್ಯರ ಭಾವ ವಿಭೋರವಾಗಿಸುವ ಸಂಗೀತ ಸುಧೆಯನ್ನು ಉಣ ಬಡಿಸಿ ಸಂತಸಪಟ್ಟು, ಮುಂದಿನ ಬದುಕಿಗೆ ಅದನ್ನು ಸ್ಮರಣೀಯ ನೆನಪಿನ ಸಂಜೆಯಾಗಿಸಿಕೊಂಡ ವೈಶಿಷ್ಟ್ಯಮಯ ಷಷ್ಟ್ಯಬ್ದಿಪೂರ್ತಿ ಸಮಾರಂಭ ಇತ್ತೀಚೆಗೆ ಬೈಂದೂರಿನಲ್ಲಿ ನಡೆಯಿತು. 

ಡಿ.25ರಂದು ಉಪ್ಪುಂದ ಮೂಲದ ರಾಯಚೂರಿನ ರಾಮಚಂದ್ರ ಪ್ರಭು ತಮ್ಮ ಷಷ್ಟ್ಯಬ್ದಿಪೂರ್ತಿ ಸಮಾರಂಭದಲ್ಲಿ 10 ಜನ ಮಾಜಿ ಸೈನಿಕರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಿದರು. ಬಳಿಕ ರಾಯಚೂರಿನ ಶೇಷಗಿರಿ ದಾಸರ ಸಂಯೋಜಕತ್ವದಲ್ಲಿ ನಡೆದ ದಾಸವಾಣಿ ಅಂತ್ಯಾಕ್ಷರಿಯಲ್ಲಿ ಬೆಂಗಳೂರಿನ ದಿವ್ಯಾ ಗಿರಿಧರ್‌, ಪ್ರಸನ್ನ ಕೊರ್ತಿ, ಅನನ್ಯಾ ಭಾರ್ಗವ್‌ ಮತ್ತು ಉಡುಪಿಯ ಸಂಗೀತಾ ಬಾಲಚಂದ್ರ ದಾಸ ವಾಣಿಯ ಅಮೃತ ಧಾರೆ ಹರಿಸಿದರು. ಪ್ರಥಮ ಸುತ್ತಿನಲ್ಲಿ ದಿವ್ಯಾ ಗಿರಿಧರ್‌ ಅವರಿಂದ ಮೊದಲ್ಗೊಂಡು ಅಂತ್ಯಾಕ್ಷರವನ್ನು ಹಿಡಿದು ಒಬ್ಬೊಬ್ಬರಾಗಿ ಹಾಡಿದ ಗಾಯಕರು ಎರಡನೇ ಹಂತದಲ್ಲಿ ಶ್ರೋತೃಗಳು ಲಾಟರಿ ಮೂಲಕ ಆರಿಸಿದ ವಿಷಯ ಆಧಾರಿತ ದಾಸರ ಹಾಡು ಹಾಡಿದರೆ ಮೂರನೇ ಸುತ್ತಿನಲ್ಲಿ ಜಾನಪದ ಶೈಲಿಯ ದಾಸರ ಪದಗಳನ್ನು ಹಾಡಿದರು. 

ಅನನ್ಯಾ ಭಾರ್ಗವ ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ….ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ, ಪ್ರಸನ್ನ ಕೊರ್ತಿ ಯಾರ್ಯಾರು ಏನೇನೆಂದರೊ ರಂಗಯ್ಯ…, ಸಂಗೀತಾ ಬಾಲಚಂದ್ರ ಹಾಡಿದ ಹಾಡಿದರೆ ಎನ್ನ ಒಡೆಯನ ಹಾಡುವೆ.. ಹಾಡುಗಳು ಭಾವಪರವಶಗೊಳಿಸಿದವು. ಜಾನಪದ ಶೈಲಿಯ ಸುವಿ..ಸುವಿ.. ಎನ್ನುವ ದಿವ್ಯಾ ಗಿರಿಧರ್‌ ಅವರ ಮತ್ತು ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…. ಎನ್ನುವ ಅನನ್ಯಾ ಭಾರ್ಗವ್‌ ಅವರ ಹಾಡು ದಾಸ ಸಾಹಿತ್ಯದ ಶ್ರೀಮಂತಿಕೆಗೆ ದರ್ಪಣ ಹಿಡಿಯಿತು. ಮೂರು ಶತಮಾನಗಳಷ್ಟು ಹಳೆಯದಾದ ದಾಸರ ಹಾಡುಗಳು ಹೇಗೆ ಇಂದಿನ ದಿನದಲ್ಲೂ ಪ್ರಸ್ತುತವಾಗಿದೆ ಎನ್ನುವುದನ್ನು ಶೇಷಗಿರಿ ದಾಸರು 
ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫ‌ಲವೇನು.. ಎನ್ನುವ ಹಾಡಿನ ಮೂಲಕ ತಿಳಿಸಿದರು. 

ಚಂದ್ರಶೇಖರ ನಾವಡ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.