ಡಯಟ್‌ನ ಗೋಡೆಯಲ್ಲಿ ಅರಳಿದ ವರ್ಲಿ ಕಲೆ 


Team Udayavani, Mar 30, 2018, 6:00 AM IST

10.jpg

ಪಠ್ಯವನ್ನು ಸರಳಗೊಳಿಸಬೇಕಾದರೆ ಚಿತ್ರಕಲೆ ಬಹುಮುಖ್ಯವಾಗುತ್ತದೆ. ಅದಕ್ಕಾಗಿಯೇ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ಚಿತ್ರಗಳನ್ನು ಮುದ್ರಿಸಿರುತ್ತಾರೆ. ಹೊಸ ಪಠ್ಯ ಪುಸ್ತಕ ಕೈಗೆ ಸಿಕ್ಕಿದೊಡನೆ ಮಕ್ಕಳು ಮೊದಲು ಅದರೊಳಗೆ ಎಷ್ಟು ಚಿತ್ರಗಳಿವೆ ಎಂದು ಹುಡುಕುತ್ತಾರೆ. ಚಿತ್ರಗಳೇ ಇಲ್ಲದ ಪುಸ್ತಕ ಯಾರ ಮನಸ್ಸನ್ನೂ ಗೆಲ್ಲಲಾರದು.

 ಬಲ್ಲವರು ಹೇಳುತ್ತಾರೆ, ಚಿತ್ರವೆಂಬುದು ಅಡುಗೆಯಲ್ಲಿ ಕರಿಬೇವು ಇದ್ದಂತೆ. ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ. ಚಿತ್ರಗಳಿಲ್ಲದ ಪಾಠ ಮನಸ್ಸಿಗೆ ಮುದಕೊಡಲಾರದು. ಈ ಅಂಶವನ್ನು ಬಲ್ಲವರು ಚಿತ್ರಕಲೆಗೆ ಉತ್ತಮ ಸ್ಥಾನಮಾನವನ್ನು ಕೊಡುತ್ತಾರೆ. ದಿನನಿತ್ಯದ ಚಟುವಟಿಕೆಗಳಲ್ಲಿ ಅದನ್ನು ಹೊಂದಿಸಿಕೊಳ್ಳುತ್ತಾರೆ. ಚಿತ್ರಕಲೆ ಹೊಂದಿರುವ ಸಭಾಭವನ, ದೇಗುಲ, ಮನೆ. ಗೋಡೆ ಎಲ್ಲವೂ ನಮ್ಮನ್ನು ಆಕರ್ಷಿಸುತ್ತವೆ. ನಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಅಂತಹ ಸಾಂಸ್ಕೃತಿಕ ಕಲಾ ಪರಂಪರೆ ಉಡುಪಿ ಡಯಟ್‌ನ (ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ) ಗೋಡೆಗಳಲ್ಲಿ ಇತ್ತೀಚೆಗೆ ಮೂಡಿತು. ಶಿಕ್ಷಣ ಪ್ರೇಮಿಗಳನ್ನು, ದಾರಿಹೋಕರನ್ನು ಆಕರ್ಷಿಸುವ ಕೇಂದ್ರವಾಯಿತು. ಇದಕ್ಕೆ ಕಾರಣಕರ್ತರಾದವರು ಜಿಲ್ಲೆಯ ಚಿತ್ರಕಲಾ ಶಿಕ್ಷಕರು. ಬೆನ್ನುತಟ್ಟಿ ಹುರಿದುಂಬಿಸಿದವರು ಡಯಟ್‌ನ ಪ್ರಭಾರ ಪ್ರಾಂಶುಪಾಲರಾದ ಚಂದ್ರಶೇಖರ್‌ . 

 ಡಯಟ್‌ನಲ್ಲಿ ವರ್ಷವಿಡೀ ಉಳಿದ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನಡೆಯುತ್ತಿರುತ್ತದೆ. ಆದರೆ ಚಿತ್ರಕಲಾ ಶಿಕ್ಷಕರಿಗೆ ಇಂತಹ ಅವಕಾಶ ವಿರಳ. ಏಕೆಂದರೆ ಅವರಲ್ಲಿ ಎಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ ಎಂಬ ಪ್ರತಿಪಾದನೆಯಿದೆ. ಆದರೆ ಈ ಬಾರಿ ಆರ್‌.ಎಂ.ಎಸ್‌.ಎ. ಅನುದಾನದಡಿಯಲ್ಲಿ ಬೆಂಗಳೂರಿನ ಡಿ.ಎಸ್‌.ಇ.ಆರ್‌.ಟಿ. ಸಂಸ್ಥೆ ಪ್ರತಿ ಜಿಲ್ಲಾ ಡಯಟ್‌ನ ಮೂಲಕ ಚಿತ್ರಕಲಾ ಶಿಕ್ಷಕರಿಗೆ ಹತ್ತು ದಿನಗಳ ತರಬೇತಿಯನ್ನು ನಡೆಸಿತು. ಇದೊಂದು ಶೈಕ್ಷಣಿಕ ಯೋಜನೆಯ ತರಬೇತಿಯಾಗಿದ್ದರೂ ಇದನ್ನು ಹೇಗೆ ಮತ್ತಷ್ಟು ಕಲಾತ್ಮಕಗೊಳಿಸಬಹುದೆಂದು ಚಿಂತಿಸಲಾಯಿತು. ತರಬೇತಿಯ ಹೊಣೆಯನ್ನು ಹೊತ್ತಿದ್ದ ಪ್ರಾಂಶುಪಾಲರಾದ ಚಂದ್ರಶೇಖರ್‌ ಅವರು ಚಿತ್ರಕಲಾ ಶಿಕ್ಷಕರಲ್ಲಿರುವ ಸೃಜನಶೀಲತೆಯನ್ನು ಬಳಸಿಕೊಂಡು ಡಯಟ್‌ನ ಗೋಡೆಗಳಲ್ಲಿ ವರ್ಲಿ ಕಲೆಯನ್ನು ಚಿತ್ರಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪರಿಣಾಮವಾಗಿ ಡಯಟ್‌ನ ಗೋಡೆಗಳು ಕಾವಿ ಚಿತ್ರಗಳಿಂದ ಕಂಗೊಳಿಸಿದವು. ವರ್ಲಿ ಚಿತ್ರಕಲೆಯ ವಿವಿಧ ರೂಪಗಳು ಮೂಡಿಬಂದವು. ಜನಪದ ಆಚರಣೆಗಳಾದ ಯಕ್ಷಗಾನ, ಭೂತದ ಕೋಲ, ಆಟಿಕಳಂಜ, ಕಂಬಳ, ನಾಗಮಂಡಲ, ರಥೋತ್ಸವ, ಗೋಪೂಜೆ, ಮೆರವಣಿಗೆ, ಗ್ರಾಮೀಣ ಬದುಕು, ಕೃಷಿ ಕೆಲಸಗಳು, ಕರಾವಳಿ ತೀರ, ಬೆಸ್ತರು, ಜಾತ್ರೆ, ಸಂಭ್ರಮಾಚರಣೆ ಮುಂತಾದ ಅನೇಕ ವಿಷಯಗಳು ಗೋಡೆಯ ಮೇಲೆ ಮೂಡಿಬಂದುವು. ವರ್ಲಿಕಲೆಯ ಶೈಲಿಯನ್ನು ಮೂಲಾಧಾರವಾಗಿಟ್ಟುಕೊಂಡು ಸೃಜನಶೀಲ ಕಲಾಕೃತಿಗಳು ಚಿತ್ರಕಲಾ ಶಿಕ್ಷಕರ ಕೈಯ್ಯಲ್ಲಿ ರೂಪುಗೊಂಡವು. 

 ಉಡುಪಿ ಡಯಟ್‌ ಪ್ರಾಂಶುಪಾಲರು ಚಿತ್ರಕಲೆಗೆ ಪೂರಕ ಚಿಲುಮೆಯಾಗಿದ್ದಾರೆ. ಅವರ ಕಾಳಜಿಯಿಂದಾಗಿ ಡಯಟ್‌ ತನ್ನ ಸ್ವರೂಪದಲ್ಲಿ ಹೊಸತನವನ್ನು ಕಾಣುವಂತಾಯ್ತು. ತರಬೇತಿಯ ಸಂದರ್ಭದಲ್ಲಿ ಡಯಟ್‌ಗೆ ಭೇಟಿಕೊಟ್ಟ ಬೆಂಗಳೂರಿನ ಆರ್‌.ಎಂ.ಎಸ್‌.ಎ. ನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹಾಗೂ ಉಡುಪಿ ಡಿ.ಡಿ.ಪಿ.ಐ. ಶೇಷಶಯನ ಕಾರಿಂಜರವರು ಚಿತ್ರಕಲಾ ಶಿಕ್ಷಕರ ಕೈಚಳಕದಿಂದ ಮೂಡಿದ ಡಯಟ್‌ನ ಸುಂದರ ದೃಶ್ಯವನ್ನು ಕಂಡು ಶ್ಲಾ ಸಿದರು. ಶಿಕ್ಷಕರು, ಶಿಕ್ಷಣ ತಜ್ಞರು ಆಗಮಿಸುವ ಈ ಸ್ಥಳ ಸುಂದರವಾಗಿದ್ದರೆ ಇಡಿಯ ಶಿಕ್ಷಣ ವ್ಯವಸ್ಥೆಯೇ ಸುಂದರಗೊಳ್ಳುವುದು ಎಂದರು. ಹಾಗಿರುವಾಗ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪುರುಸೋತ್ತು ಇರುವಾಗ ಡಯಟ್‌ಗೆ ಬಂದು ಒಮ್ಮೆ ಚಿತ್ರಗಳನ್ನು ನೋಡಿಕೊಂಡು ಹೋದರೆ ಸಾಂಸ್ಕೃತಿಕ ಜ್ಞಾನ ಹೆಚ್ಚುವುದು ಖಂಡಿತ.

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.