ಟೋಪೋಗ್ರಫಿ ಕಲೆ -ಕಲಿತರೆ ಜೀವನೋಪಾಯ 


Team Udayavani, Apr 13, 2018, 6:00 AM IST

13.jpg

 ಟೋಪೋಗ್ರಫಿ ಕಲೆ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಅವಿಭಾಜ್ಯ ಅಂಗವಾಗಿದೆ. ಟೋಪೋಗ್ರಫಿ ಕಲೆಯನ್ನೇ ಚೆನ್ನಾಗಿ ಕಲಿತರೂ ಅದೇ ಉದ್ಯೋಗ ಮಾಡಿ ಜೀವನ ಸಾಗಿಸಬಹುದು. ಇದಕ್ಕೆ ಜಾಣ್ಮೆ ಹಾಗೂ ಕಲಾತ್ಮಕ ಮನಸ್ಸು ಇದ್ದರೆ ಸಾಕು. ಒಂದು ಭೂಭಾಗದ ಪಕ್ಷಿನೋಟದ ಮಾದರಿಯನ್ನು ರೂಪಿಸುವುದಕ್ಕೆ ಟೋಪೋಗ್ರಫಿ ಕಲೆ ಎನ್ನುತ್ತಾರೆ. ಇದರಲ್ಲಿ ಕಟ್ಟಡಗಳು, ನಗರ ಪ್ರದೇಶ, ನದಿ ಬೆಟ್ಟಗುಡ್ಡ ಪ್ರದೇಶ, ಜಲಪಾತ, ಕರಾವಳಿ ತೀರದ ನೋಟಗಳು ಬರುತ್ತವೆ. ಈ ನೋಟಗಳನ್ನು ಎತ್ತರದಿಂದ ನೋಡಿದ ಹಾಗೆ ವಿವಿಧ ಕಚ್ಛಾವಸ್ತುಗಳನ್ನು ಬಳಸಿ ಮಾದರಿ ತಯಾರಿಸುವುದು. ಅಂದರೆ ಪಕ್ಷಿನೋಟದಿಂದ ಕಾಣುವಾಗ ಭೂಭಾಗದ ಎತ್ತರ ಕಡಿಮೆ ಕಾಣುತ್ತದೆ ಹಾಗೂ ಭೂಪ್ರದೇಶದಲ್ಲಿ ಹರಡಿರುವ ಅಥವಾ ನಿರ್ಮಿಸಿರುವ ವಸ್ತುಗಳು ವಿವರವಾಗಿ ಕಾಣುತ್ತವೆ. . ಒಂದು ಪ್ರದೇಶದ ಗುರುತಿಸುವಿಕೆಗೆ ಇದು ಸಹಾಯಕವಾಗುತ್ತದೆ. 

 ಹೊಸತೊಂದರ ನಿರ್ಮಾಣವಾಗುವಾಗ ಇಂಜಿನಿಯರ್‌ ಪ್ಲ್ರಾನ್‌ನಲ್ಲಿ ನಕ್ಷೆ ತಯಾರಿಸುತ್ತಾರೆ. ನಂತರ ನಿರ್ಮಾಣಗೊಳ್ಳುವ ಕಟ್ಟಡ, ಸೇತುವೆ, ಅಣೆಕಟ್ಟು, ಕಾಲುವೆ, ಉದ್ಯಾನವನ ಮುಂತಾದುವುಗಳು ಬದಿನೋಟ-ಎದುರುನೋಟ ಹಾಗೂ ಮೇಲ್ನೋಟದಿಂದ ಕಾಣುವಂತೆ ಚಿತ್ರರಚಿಸಿ ಹಾಕುತ್ತಾರೆ. ಅದನ್ನೇ ಟೋಪೋಗ್ರಫಿ ಕಲೆಯಲ್ಲಿ ಮಾದರಿಯನ್ನು ತಯಾರಿಸಿ ಗಾಜಿನ ಚೌಕಟ್ಟಿನೊಳಗಿಟ್ಟು ವೀಕ್ಷಕರಿಗೆ ನಿರ್ಮಿತಿಯ ಪೂರ್ಣ ಪರಿಕಲ್ಪನೆ ನೀಡುತ್ತಾರೆ. ಟೋಪೋಗ್ರಫಿ ಕಲೆಯಲ್ಲಿ ನಿರ್ಮಿತಿಯ ಚಿಕ್ಕ ಮಾದರಿಯಿದ್ದು ನೋಡಲು ಆಕರ್ಷಕವಾಗಿರುತ್ತದೆ. ಟೋಪೋಗ್ರಫಿ ಕಲಾಕೃತಿ ರಚಿಸಲು ಒಂದು ರಟ್ಟಿನ ತಳಹದಿಯ ಮೇಲೆ ನಿಯೋಜಿತ ಭೂಪ್ರದೇಶದ ಮಾದರಿಯನ್ನು ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಪುಡಿ, ರಟ್ಟಿನ ತುಂಡು, ನಿರುಪಯೋಗಿ ಬಾಕ್ಸ್‌ಗಳು, ರೀಲ್‌ ಕೊಳವೆಗಳು, ಸರಿಗೆ, ಕಲ್ಲು, ಮರಳು, ಹತ್ತಿ, ಬ್ಯಾಂಡೇಜ್‌ ಬಟ್ಟೆ ಇತ್ಯಾದಿಗಳನ್ನು ಅಂಟಿನೊಂದಿಗೆ ಬಳಸಿ ನಿರ್ಮಿಸುತ್ತಾರೆ. ಬೇಕಾದೆಡೆ ಬಣ್ಣಗಳನ್ನು ಕೊಟ್ಟು ಸಾದೃಶ್ಯ ರೂಪವನ್ನು ತರುತ್ತಾರೆ. ಇದನ್ನು ಸ್ವಾಗತ ಕೋಣೆಗಳಲ್ಲಿ ವೀಕ್ಷಿಸಲು ಇಡುತ್ತಾರೆ. ಕೆಲವೊಮ್ಮೆ ಉಡುಗೊರೆ ಕೊಡಲೂ ಬಳಸುತ್ತಾರೆ. ಟೋಪೋಗ್ರಫಿ ಕಲೆಯ ತರಬೇತಿ ಹಾಗೂ ನಿರ್ಮಾಣ ಶಿಬಿರ ಇತ್ತೀಚೆಗೆ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಉಡುಪಿ ಜಿಲ್ಲಾ ಡಯಟ್‌ನ ಆಶ್ರಯದಲ್ಲಿ ನಡೆಯಿತು. ಅನೇಕ ಭೂಪ್ರದೇಶಗಳ ನಿರ್ಮಾಣ ನಡೆಯಿತು. ಪಶ್ಚಿಮ ಘಟ್ಟ ತಪ್ಪಲು, ಜಲಪಾತ, ಕಾಪು ದೀಪಸ್ತಂಭ, ಕಡಲ ಕಿನಾರೆ, ಕರ್ನಾಟಕ ರಾಜ್ಯ, ಭಾರತದ ಭೂಪಟ ಇತ್ಯಾದಿ. ಒಟ್ಟಿನಲ್ಲಿ ಟೋಪೋಗ್ರಫಿ ಕಲೆ ಆಕರ್ಷಕ ಹಾಗೂ ಸಂಗ್ರಹಯೋಗ್ಯ. ಚೆನ್ನಾಗಿ ಕಲಿತರೆ ಇದು ಜೀವನ ನಿರ್ವಹಣೆಗೆ ದಾರಿಯೂ ಆಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಕರಕುಶಲ ಮಾದರಿ ತಯಾರಿಗೆ ಇದು ಒಂದು ಉತ್ತಮ ವಿಷಯ. ಚಿತ್ರದಲ್ಲಿ ಕಾಪು ದೀಪಸ್ತಂಭದ ಮಾದರಿಯನ್ನು ನೋಡಬಹುದು. 

ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.