ರೇಖೆಗಳಲ್ಲಿ ಅರಳಿದ ಅಮೂರ್ತ ಕಲ್ಪನೆ 


Team Udayavani, May 4, 2018, 6:00 AM IST

s-17.jpg

ರೇಖಾಚಿತ್ರ, ಛಾಯಾಚಿತ್ರ, ವರ್ಣಚಿತ್ರ ಮತ್ತು ವಿವಿಧ ಮಾಧ್ಯಮ ಚಿತ್ರ ಎಂಬುದಾಗಿ ಚಿತ್ರವನ್ನು ನಾಲ್ಕು ವಿಧಗಳಿಂದ ರಚಿಸಬಹುದು. ಬರಿಯ ರೇಖೆಗಳಿಂದಲೇ ಚಿತ್ರವನ್ನು ಪೂರ್ಣಗೊಳಿಸಿದಾಗ ಅದು ರೇಖಾಚಿತ್ರವಾಗುತ್ತದೆ. ರೇಖೆಗಳನ್ನೇ ಸೂಕ್ಷ್ಮವಾಗಿ ಹತ್ತಿರ ಹತ್ತಿರ ಎಳೆದಾಗ ಅದೇ ಛಾಯಾಚಿತ್ರದ ಪರಿಣಾಮವನ್ನು ತೋರಿಸುತ್ತದೆ. ರೇಖಾಚಿತ್ರವು ಒಂದು ವರ್ಣದಲ್ಲಿ ಇರುವ ಕಾರಣ ಅದು ವರ್ಣಚಿತ್ರವೂ ಹೌದು. ರೇಖಾಚಿತ್ರಗಳು ಭಾವ ಚಿತ್ರ ಮತ್ತು ವ್ಯಂಗ್ಯಚಿತ್ರಗಳ ಜೀವಾಳ. ಇವು ಸುಲಭ ರೀತಿಯಲ್ಲಿ ಚಿತ್ರ ರಚನೆಗೆ ದಾರಿ. ರೇಖೆಗಳನ್ನು ಎಳೆಯದೆ ಚಿತ್ರರಚನೆ ಕಷ್ಟಸಾಧ್ಯ.  ಪ್ರಕೃತಿಯಲ್ಲಿ ರೇಖೆಗಳಿಲ್ಲ ಎಂದು ವಾದಿಸುವವರು ಇದ್ದಾರೆ. ರೇಖೆಗಳೇ ಇಲ್ಲದಿದ್ದರೆ ಯಾವುದರ ಆಕಾರವೂ ಗುರುತಿಸಲಾಗದೆ ಎಲ್ಲವೂ ಅಮೂರ್ತವಾಗಬಹುದು. ಸೌಂದರ್ಯವೂ ಶೂನ್ಯವಾಗುವುದು. ರೇಖೆಗಳಲ್ಲಿ ಇಷ್ಟೊಂದು ಶಕ್ತಿ ಇರುವಾಗ ಅದನ್ನೆ ಬಳಸಿ ಯಾಕೆ ವೈವಿಧ್ಯಮಯ ಚಿತ್ರಗಳನ್ನು ರಚಿಸಬಾರದು ಎಂಬ ಕನಸು ಕಂಡ ಉಡುಪಿಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಚಿತ್ರಗಳ ಮೂಲಕ ರೂಪಿಸಿದರು. ಬ್ಲ್ಯಾಕ್‌ ಲೈನ್‌ ಶೀರ್ಷಿಕೆಯಡಿ ಅನೇಕ ಕಲಾಕೃತಿಗಳನ್ನು ರಚಿಸಿ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶಿಸಿದರು. ತಮ್ಮ ಚಾಕಚಕ್ಯತೆಯನ್ನು ರೇಖೆಗಳ ಮೂಲಕ ಅನಾವರಣಗೊಳಿಸಿದರು. 

 ಯುವ ಕಲಾವಿದರೆಂದರೆ ಹೊಸತನದ ಹುಡುಕಾಟದಲ್ಲಿರುವವರು. ಹಿರಿಯರ ಕಲಾಕೃತಿಗಳನ್ನು ಕಂಡು ಅದನ್ನು ಸಾಧ್ಯವಾದಷ್ಟು ಅರಗಿಸಿಕೊಂಡು ತಮ್ಮದೇ ಆದ ಶೈಲಿಯನ್ನು ಕಂಡುಕೊಂಡು ಮುಂದುವರಿಯುವವರು. ಅಂತಹ ಹುಡುಕಾಟದೊಂದಿಗೆ ಹೊರಟ ಈ ಯುವ ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ರೇಖಾಕೌಶಲ್ಯದೊಂದಿಗೆ ಮೂರ್ತ-ಅಮೂರ್ತ ರೇಖಾಚಿತ್ರಗಳನ್ನು ರಚಿಸಿಟ್ಟಿದ್ದಾರೆ. ಕಲಾವಿದರಾದ ಹರೀಶ್‌ ನಾಯ್ಕ, ಪ್ರದೀಪ್‌ ಕುಮಾರ್‌, ರಂಜಿತ್‌ ಬಂಗೇರ, ಕೀರ್ತಿ ಕುಮಾರ್‌, ತೇಜರಾಜ್‌, ಮೇಘಾ ಹೆಗಡೆ, ಅಕ್ಷತಾರವರ ರೇಖಾಚಿತ್ರಗಳು ನವುರಾದ ರೇಖೆಗಳೊಂದಿಗೆ ಅರ್ಥಗರ್ಭಿತವಾಗಿ ಮೂಡಿದ್ದವು. ಭರತ್‌, ಅಶ್ವತ್‌ ಕುಮಾರ್‌, ವಿಕ್ರಮ್‌, ಚೇತನ್‌, ಪ್ರಶಾಂತ್‌ ಕುಮಾರ್‌, ಅವ್ಯಕ್ತಾ, ಜಾಹ್ನವಿ ಮೊದಲಾದವರ ರೇಖಾಚಿತ್ರಗಳು ವೈವಿಧ್ಯಮಯವಾಗಿದ್ದವು.  

 ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.