ಯಕ್ಷದೇಗುಲದಲ್ಲಿ ಉಚಿತ ಯಕ್ಷ ಶಿಕ್ಷಣ ಶಿಬಿರ 


Team Udayavani, Jun 1, 2018, 6:00 AM IST

z-1.jpg

ಪ್ರಸಂಗ,ಅರ್ಥಗಾರಿಕೆ,ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ ನೀಡಲಾಯಿತು 

 ಯಕ್ಷಗುರು ಮಹಾವೀರ ಪಾಂಡಿ ಅವರ ಯಕ್ಷದೇಗುಲ (ರಿ.) ಈ ಬಾರಿ ಹದಿನೈದು ದಿನಗಳ ಪರ್ಯಂತ ಉಚಿತ ಯಕ್ಷ ಶಿಕ್ಷಣದ ಶಿಬಿರ ನಡೆಸಿ ಯಶಸ್ಸು ಕಂಡಿದ್ದಾರೆ.  ಶಿಬಿರಕ್ಕೆ 87 ಮಕ್ಕಳು ನೋಂದಣಿ ಮಾಡಿಕೊಂಡಿದ್ದರು.ನಿರೀಕ್ಷೆಗಿಂತ ದುಪ್ಪಟ್ಟು ಮಂದಿ ಇರುವುದನ್ನು ಗಮನಿಸಿ ಕಿರಿಯ, ಹಿರಿಯ ಹಾಗೂ ಪ್ರೌಢ ವಿಭಾಗ ಎಂಬ ತಂಡಗಳನ್ನಾಗಿ ರೂಪಿಸುವುದು ಅನಿವಾರ್ಯವಾಯಿತು. 

ಶಿಬಿರದಲ್ಲಿ ಬರೀ ನಾಟ್ಯ ಹೇಳಿಕೊಟ್ಟಿಲ್ಲ. ಬದಲಾಗಿ, ಪ್ರಸಂಗ ಮಾಹಿತಿ, ಅರ್ಥಗಾರಿಕೆ, ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾಭಿರುಚಿ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ, ಪರಿಜ್ಞಾನವೊದಗಿಸಲಾಯಿತು.ಮಹೇಶ್‌ ಕನ್ಯಾಡಿ, ರವಿರಾಜ್‌ ಜೈನ್‌, ಚಿದಾ ನಂದ ಕುತ್ಲೂರು ಇವರ ಹಿಮ್ಮೇಳ ದೊಂದಿಗೆ ದಿವಾಣ ಶಿವಶಂಕರ ಭಟ್‌ ಪರಂಪರೆಯ ಪೂರ್ವರಂಗ , ಹರಿರಾಜ್‌ ಶೆಟ್ಟಿಗಾರ್‌ ಯೋಗದೊಂದಿಗೆ ಸಭಾ ಕ್ಲಾಸು, ತೆರೆಕ್ಲಾಸು, ದೀವಿತ್‌ ಎಸ್‌.ಕೆ. ಪೆರಾಡಿ, ಗಣೇಶ್‌ ಶೆಟ್ಟಿ ಸಾಣೂರು ಇವರು ಪರಂಪರೆಯ ಒಡ್ಡೋಲಗ, ನಾಟ್ಯ ಹೇಳಿಕೊಟ್ಟರು. 

 ಕಿನ್ನಿಗೋಳಿಯ ಶ್ರೀಧರ ಡಿ.ಎಸ್‌. , ಉಜಿರೆ ಅಶೋಕ ಭಟ್‌, ಕೆರೆಗದ್ದೆ ವೆಂಕಟರಮಣ ಭಟ್‌, ಗಾಳಿಮನೆ ವಿನಾಯಕ ಭಟ್‌ ಪ್ರಸಂಗ ಮಾಹಿತಿ, ಅರ್ಥಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಹೀಗೆಯೇ ಭಾಗವತ ರಾಮಕೃಷ್ಣ ಮಯ್ಯ (ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ), ಚಂದ್ರನಾಥ ಬಜಗೋಳಿ (ಅಭಿನಯ ಸಿದ್ದಾಂತ), ಎಂ. ನಾ. ಚಂಬಲ್ತಿಮಾರ್‌ (ಯಕ್ಷಗಾನ ಮತ್ತು ಮಾಧ್ಯಮ), ದೇವಾನಂದ ಭಟ್‌ (ಪಾತ್ರಗಳ ಮೌಲ್ಯ ವಿವೇಚನೆ), ಕಾರ್ಕಳದ ವಕೀಲ ಸುಗಂಧ ಕುಮಾರ್‌ (ಯಕ್ಷಗಾನ ಮತ್ತು ಕಾನೂನು), ಶಶಿಕಲಾ ಹೆಗ್ಡೆ ಕಾರ್ಕಳ, ಪೂರ್ಣಿಮಾ (ಯಕ್ಷಗಾನ ಮತ್ತು ಮಹಿಳೆಯರು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದದ ಮನೋಜ್‌ ಶೆಟ್ಟಿಗಾರ್‌ ಮೂರು ದಿನ ಇದ್ದು ಬಣ್ಣಗಾರಿಕೆ, ವೇಷಗಾರಿಕೆಯ ಬಗ್ಗೆ ಕಲಿಸಿಕೊಟ್ಟರು. ಹಿಮ್ಮೇಳದವರು (ದಿವಾಕರ ಆಚಾರ್ಯ, ಆನಂದ ಗುಡಿಗಾರ ಮತ್ತು ರವಿರಾಜ್‌ ಜೈನ್‌) ಇದ್ದು, ಯಾವುದೇ ಹೆಚ್ಚಿನ ತಯಾರಿ ಇಲ್ಲದೆ, ವೇಷ ಕಟ್ಟದೆ “ಸುದರ್ಶನ ವಿಜಯ’ ಯಕ್ಷಗಾನವನ್ನು (ಈ ಹಿಂದೆ ವೇಷ ಹಾಕಿ ಅನುಭವ ಇದ್ದ) ಶಿಬಿರಾರ್ಥಿಗಳು ಕೊನೆಯ ದಿನ ಪ್ರಸ್ತುತಪಡಿಸಿದರು. ಸ್ವಪರಿಚಯದಿಂದ ತೊಡಗಿ ತರಗತಿಯ ಪಾಠಗಳ ಕುರಿತಾಗಿ , ಯಾವುದೇ ಜಿಜ್ಞಾಸೆಯನ್ನು ಸ್ಪಷ್ಟ , ಸುಲಲಿತ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಿಸುವ ಧೈರ್ಯ, ಸಾಮರ್ಥ್ಯವನ್ನು ಉದ್ದೀಪಿಸುವಲ್ಲೂ ಮಹಾವೀರ ಪಾಂಡಿ ಬಹಳಷ್ಟು ಪರಿಶ್ರಮವಹಿಸಿದರು. ಪಾಂಡಿಯವರೊಂದಿಗೆ ಅಧ್ಯಕ್ಷ ಶ್ರೀಪತಿ ರಾವ್‌, ಕೋಶಾಧಿಕಾರಿ ಧರ್ಮರಾಜ ಕಂಬಳಿ ಇವರೇ ಮೊದಲಾದವರು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದ್ದರು.

ಧನಂಜಯ ಮೂಡಬಿದಿರೆ

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.