ಸ್ವಾರ್ಥದಿಂದಾಗುವ  ಅನಾಹುತದ ಅನಾವರಣ ಮಾರನಾಯಕ


Team Udayavani, Jun 15, 2018, 6:00 AM IST

bb-6.jpg

ಮಾಂಡಲಿಕ ಪುರದ ರಾಜ ಭದ್ರಪ್ಪ ನಾಯಕನ ನೆಚ್ಚಿನ ಭಂಟ ಸೋದರಳಿಯ ವೀರ ಮಾರನಾಯಕನು ಯುದ್ದದ ಸಂದರ್ಭದಲ್ಲಿ ವೀರಾವೇಷದಿಂದ ಹೋರಾಡಿ ನಾಡನ್ನು ರಕ್ಷಿಸಿದವನು. ಕಾಟೇರಿಗಳ ಪೊಳ್ಳು ಭವಿಷ್ಯವಾಣಿಗೆ ಮರುಳಾಗಿ ತಾನು ರಾಜನಾಗುವ ಮತ್ತು ಮಗ ಚಕ್ರವರ್ತಿಯಾಗುವ ಬ್ರಾಂತಿಗೆ ಒಳಗಾಗಿ, ಮಡದಿ ಮಂಗಳೆಯ ಒತ್ತಾಯಕ್ಕೆ ಮಣಿದು ರಾಜನನ್ನು ಕೊಲ್ಲುತ್ತಾನೆ. ಆ ನಂತರದಲ್ಲಿ ರಾಜನಾದ ಮಾರನಾಯಕ ಔತಣ ಕೂಟದ ಸಂದರ್ಭದಲ್ಲಿ ಭದ್ರಪ್ಪನ ಭೂತ ನೋಡಿ ಭ್ರಮೆಗೆ ಒಳಗಾಗಿ ಆತನನ್ನು ತಾನೇ ಕೊಂದ ಗುಟ್ಟನ್ನು ರಟ್ಟು ಮಾಡುತ್ತಾನೆ, ಪದಚ್ಯುತಿಯೂಗೊಳ್ಳುತ್ತಾನೆ. 

ರಾಜನ ಮಗ ಧೀರ ನಾಯಕನಿಂದ ಮಾರ ನಾಯಕನ ಮಗುವಿನ ಹತ್ಯೆಯಾಗುತ್ತದೆ. ಕಾಟೇರಿಗಳ ಭವಿಷ್ಯ ಸುಳ್ಳಾಗಿರುವುದನ್ನು ತಿಳಿದ ಮಡದಿ ಮಂಗಳೆ ಕಾಡಿನ ಕಡೆ ತೆರಳುತ್ತಾಳೆ. ಆಕೆಯನ್ನು ಹುಡುಕಿಕೊಂಡು ಕಾಡಿಗೆ ಹೋದ ಮಾರನಾಯಕ ಸತ್ತ ಮಗುವನ್ನು ಮತ್ತು ಆತ್ಮಹತ್ಯೆಗೈದ ಮಡದಿಯನ್ನು ಬದುಕಿಸಲು ಕಾಟೇರಿಗಳ ಮಾತಿನಂತೆ ಸಂಜೀವಿನಿಯ ಬಗ್ಗೆ ತಿಳಿಯಲು ಜೈನ ಮುನಿಯನ್ನು ವಿಚಾರಿಸಿ, ಅದನ್ನು ಪಡೆಯಲು ಕಾಡನ್ನು ಕಡಿಯಲು ಪ್ರಾರಂಭಿಸುತ್ತಾನೆ. ಕಡಿದಷ್ಟೂ ಮತ್ತೆ ಮತ್ತೆ ಚಿಗುರುವ ಕಾಡನ್ನು ಕಡಿಯುತ್ತಾ ದುರಂತ ಅಂತ್ಯ ಕಾಣುತ್ತಾನೆ.  ಇದು ಮಾರನಾಯಕ ನಾಟಕದ ಕಥಾಹಂದರ. ಮಾರನಾಯಕನಾಗಿ ಆಕಾಶ್‌ ಕೋಟೇಶ್ವರ, ಮಂಗಳೆಯಾಗಿ ಸುರಭಿ ಹೆಬ್ಟಾರ್‌, ಭದ್ರಪ್ಪ ನಾಯಕನಗಿ ಶ್ರೀನಿವಾಸ, ಕಾಟೇರಿಗಳಾಗಿ ಶ್ರೀನಿಧಿ, ಹರೀಶ್‌, ಪ್ರಶಾಂತ್‌, ದಳವಾಯಿಗಳಾಗಿಹೆರಿಯಾ ಮಾಸ್ಟರ್‌, ಶ್ರೀಧರ ಭಂಡಾರಿ, ಧೀರ ನಾಯಕನಾಗಿ ಶ್ರೀಶ ಭಟ್‌, ಜೈನ ಮುನಿಯಾಗಿ ನರಸಿಂಹ ಐತಾಳ್‌, ವೀರ ನಾಯಕನಾಗಿ ಭರತ್‌ ಚಂದನ್‌, ದೂತನಾಗಿವಿಶ್ವನಾಥ್‌, ಸೇವಕಿಯಾಗಿ ಗಾಯತ್ರಿ ಹೆಬ್ಟಾರ್‌ ಇವರುಗಳು ಇದೇ ಪ್ರಥಮ ಬಾರಿಗೆ ರಂಗವೇರಿದ್ದು, ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಉತ್ಕೃಷ್ಟವಾಗಿತ್ತು. 

ಇದು ವಿಲಿಯಂ ಷೇಕ್ಸ್‌ಪಿಯರ್‌ನ “ಮ್ಯಾಕ್‌ಬೆತ್‌’ ನಾಟಕದ ಕನ್ನಡ ರೂಪಾಂತರ (ರಚನೆ: ಎಚ್‌. ಎಸ್‌. ಶಿವಪ್ರಕಾಶ್‌). ನಮ್ಮ ಮಣ್ಣಿನ ಸೊಗಡಿಗೆ ಹತ್ತಿರವಾದ ಈ ನಾಟಕ ಮನುಷ್ಯ ಮೌಲ್ಯಗಳು ಕುಸಿಯುತ್ತಿರುವ ಇವತ್ತಿನ ವ್ಯಾವಹಾರಿಕ ಜಗ‌‌ತ್ತಿನಲ್ಲಿ ತನ್ನ ಪ್ರಸ್ತುತತೆಯನ್ನು ಎತ್ತಿ ಹಿಡಿಯುತ್ತದೆೆ.

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್‌(ರಿ.), ಗೀತಾನಂದ ಫೌಂಡೇಶನ್‌, ಮಣೂರು, ಯಶಸ್ವಿ ಕಲಾವೃಂದ (ರಿ.), ಕೊಮೆ, ತೆಕ್ಕಟ್ಟೆ ಮತ್ತು ರಂಗ ಸಂಪದ ,ಕೋಟ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ರಂಗ ರಂಗು’ ಎನ್ನುವ ಇಪ್ಪತ್ತು ದಿನಗಳ ನಾಟಕ ತರಬೇತಿ ಶಿಬಿರದ ಕೊನೆಯಲ್ಲಿ ಹಯಗ್ರೀವ ಕಲ್ಯಾಣ ಮಂಟಪ, ತೆಕ್ಕಟ್ಟೆ ಇಲ್ಲಿ ಈ ನಾಟಕ ಹಿರಿಯ ತಂಡದವರಿಂದ ಪ್ರದರ್ಶಿಸಲ್ಪಟ್ಟಿತು.  

ಕೆ.ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.