ನಾಟ್ಯಾಭಿನಯ ಪ್ರವೀಣ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌


Team Udayavani, Jul 6, 2018, 6:00 AM IST

u-6.jpg

ಯಕ್ಷ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಅನುಭವಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌ ತೆಂಕುತಿಟ್ಟಿನ ನೃತ್ಯ ತಜ್ಞ. ಯಕ್ಷಗಾನ ಕುಣಿತ, ಭರತನಾಟ್ಯ, ಕಥಕ್‌, ರಾಮನಾಟ್ಟಂ, ಕೊರಿಯಾಗ್ರಫಿ, ಮೂಡಲಪಾಯಗಳನ್ನು ಬಲ್ಲವರಾದ ವಿಶ್ವೇಶ್ವರ ಭಟ್‌ ಬಹುಮುಖ ಪ್ರತಿಭೆಯ ಯಕ್ಷಗುರು.

ನಾಲ್ಕು ದಶಕಗಳಿಂದ ಸಹಸ್ರಾರು ಯಕ್ಷಗಾನ ಆಸಕ್ತರಿಗೆ ಶುದ್ಧ ಶಾಸ್ತ್ರೀಯ ಯಕ್ಷನಾಟ್ಯದ ಪಾಠವನ್ನು ಬೋಧಿಸುತ್ತಿರುವ, ಮಕ್ಕಳನ್ನು ತಿದ್ದಿ ರಂಗದಲ್ಲಿ ಕುಣಿಸಿದ ಕಲಾಗುರು. ಕೋಡಪದವು ವಿಟ್ಲಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾರ್ಜನೆ. ತಂದೆಯಿಂದಲೇ ಯಕ್ಷಗಾನದ ಪ್ರಾಥಮಿಕ ಅಭ್ಯಾಸ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಭಸ್ಮಾಸುರ ಮೋಹಿನಿ ನಾಟಕದಲ್ಲಿ ಭಸ್ಮಾಸುರನ ಪಾತ್ರ, ಪಂಚವಟಿ ಪ್ರಸಂಗದಲ್ಲಿ ಲಕ್ಷ್ಮಣನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಪಡ್ರೆ ಚಂದು ಅವರು ಗುರುಗಳಾಗಿದ್ದರು. 

ಉಡುಪಿಯ ಬಡಗುತಿಟ್ಟು ಯಕ್ಷಗಾನ ಕೇಂದ್ರದಲ್ಲಿ ಬಡಗುತಿಟ್ಟು ನಾಟ್ಯಾಭ್ಯಾಸ ಮಾಡಿದರು. ತೆಂಕು ಬಡಗು ಎರಡೂ ಶೈಲಿಗಳ ನಾಟ್ಯ ತಿಳಿದಿದ್ದಾರೆ. ಮೂಲ್ಕಿ ರಮೇಶ ಅವರಿಂದ ಭರತನಾಟ್ಯ, ಚೆನ್ನೈಯ ಎಂ.ವಿ.ಗೋಪಾಲಕೃಷ್ಣನ್‌ ಅವರಿಂದ ಕಥಕ್‌ ನೃತ್ಯ ಅಭ್ಯಾಸ ಮಾಡಿದ್ದಾರೆ. ಕೇರಳದ ಪಾಲ್ಗಾಟ್‌ನ ಕೇಶವನ್‌ ನಂಬೂದಿರಿ ಅವರಿಂದ ರಾಮನಾಟ್ಟಂ ಅನ್ನೂ ಕಲಿತಿದ್ದಾರೆ. ಡಾ.ಮಾಯಾರಾವ್‌ ಅವರಿಂದ ಕಥಕ್‌ ಮತ್ತು ಕೊರಿಯಾಗ್ರಫಿ ಕಲಿತ ಇವರ ಕಲಾಸಕ್ತಿ ವಿಸ್ತಾರವಾಗಿದೆ. 

ಕಟೀಲು, ಇಡಗುಂಜಿ, ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿಯೂ ಕೆಲವು ವರ್ಷ ವೃತ್ತಿ ನಿರ್ವಹಿಸಿದ್ದಾರೆ. ವಿಷ್ಣು, ದೇವೇಂದ್ರ, ದಕ್ಷ, ಈಶ್ವರ ಮೊದಲಾದ ವೇಷಗಳು ಇವರಿಗೆ ಪ್ರಸದ್ಧಿ ತಂದುಕೊಟ್ಟಿವೆ. ಪರಂಪರೆಯ ಹನುಮಂತ, ಈಶ್ವರ, ಷಣ್ಮುಖ ಸುಬ್ರಾಯ ಮೊದಲಾದ ವೇಷಗಳನ್ನು ಮತ್ತೆ ರಂಗಸ್ಥಳದಲ್ಲಿ ಕಾಣಿಸಿದರು. 

ತಕಿಟ(ತಿಶ್ರ), ತಕದಿಮಿ(ಚತುರಶ್ರ) ತಕತಕಿಟ(ಖಂಡ), ತಕದಿಮಿ ತಕತಕಿಟ ಸಂಕೀರ್ಣ, ತಾಳಸೂತ್ರದ ಪಂಚಾಂಗವನ್ನು ಆಧರಿಸಿದ ನಾಟ್ಯಪಾಠದ ಪ್ರಥಮ ಪ್ರಯೋಗ ಮಾಡಿದ ಕರ್ಗಲ್ಲು ವಿಶ್ವೇಶ್ವರ ಭಟ್‌ ವಿಶೇಷ ಸಾಧಕರು. 10 ವರ್ಷಗಳ ಕಾಲ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ತೆಂಕುತಟ್ಟು ಯಕ್ಷಗಾನಕ್ಕಾಗಿ ಕರ್ನಾಟಕ ಪಠ್ಯ ಪುಸ್ತಕ ಇಲಾಖೆಯವರಿಗೆ ಯಕ್ಷಗಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಪಠ್ಯವನ್ನು ರಚಿಸಿದ್ದಾರೆ. ಮೂಡಲಪಾಯ ಯಕ್ಷಗಾನಕ್ಕೆ ಶಾಸ್ತ್ರೀಯ ಪಠ್ಯ ರಚನೆ ಮಾಡಿದ್ದಾರೆ. ಈ ಕಾರ್ಯದಲ್ಲಿ ಜಿ.ಎನ್‌.ಅನಂತವರ್ಧನರು ವಿಶೇಷ ಸಹಕಾರ ಒದಗಿಸಿದ್ದಾರೆ. ಡಾ.ಎಚ್‌.ಎಲ್‌.ನಾಗೇಗೌಡರ ಸಹಾಯದಿಂದ ಮೂಡಲಪಾಯ ಯಕ್ಷಗಾನ ಅಭ್ಯಾಸವನ್ನು ಮಾಡಿದ್ದಾರೆ.

 ಜಿ.ಎಂ.ಲಕ್ಷ್ಮೀ ನರಸಿಂಹ ಭಟ್‌ 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.