ಮಕ್ಕಳ ಕೈಯ್ಯಲ್ಲಿ ಮಾತನಾಡಿದ ಗೊಂಬೆಗಳು


Team Udayavani, Aug 3, 2018, 6:00 AM IST

1.jpg

ಜಾದೂ ಮಾಡುವವರ ಕೈಯ್ಯಲ್ಲಿ ಮಾತನಾಡುವ ಗೊಂಬೆಯನ್ನು ನಾವು ಕಾಣುತ್ತೇವೆ. ಜಾದೂ ವೀಕ್ಷಿಸಿದವರೆಲ್ಲರನ್ನೂ ಅದು ಮೂಕವಿಸ್ಮಿತರಾನ್ನಾಗಿ ಮಾಡುತ್ತದೆ. ಮಕ್ಕಳಂತೂ ಬಹಳ ಮೋಜು ಪಡೆಯುತ್ತಾರೆ. ಅಂತಹುದೇ ಗೊಂಬೆಯನ್ನು ತಾವೂ ಮಾಡಿ ಮಾತನಾಡಿಸಬೇಕೆಂಬ ಹಂಬಲ ಮಕ್ಕಳಲ್ಲಿ ನಿರಂತರವಾಗಿರುತ್ತದೆ. ಆದರೆ ಇದು ಹೇಗೆ? ಎಂಬ ಪ್ರಶ್ನೆ ಮಕ್ಕಳನ್ನು ಕಾಡುತ್ತಿರುತ್ತದೆ. ಅದಕ್ಕೆ ಉತ್ತರವೆಂಬಂತೆ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಾತನಾಡುವ ಗೊಂಬೆ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆಸಲಾಯಿತು. ಮಕ್ಕಳು ಕುತೂಹಲಭರಿತರಾಗಿ ನೋಡಿ ತಾವೂ ಕಲಿತುಕೊಂಡರು. ಕೈಯ್ಯಲ್ಲಿ ಗೊಂಬೆಗಳನ್ನು ಧರಿಸಿ ಮಾತಿನೊಂದಿಗೆ ಭಾವಭಂಗಿ ಮೂಡಿಸಿ ಪ್ರದರ್ಶಿಸಿ ಖುಷಿಪಟ್ಟರು. 

 ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ರಕಲಾ ಶಿಕ್ಷಕ ಹಾಗೂ ಕಲಾವಿದ ರಮೇಶ್‌ ಬಂಟಕಲ್‌ ಆಗಮಿಸಿ ಗೊಂಬೆ ತಯಾರಿಯ ವಿಧಾನವನ್ನು ಮಕ್ಕಳಿಗೆ ತಿಳಿಸಿದರು. ಬಣ್ಣದ ಕಾಗದವನ್ನು ಬೇಕಾದಂತೆ ಮಡಚಿ ಕತ್ತರಿಸಿ ಗೊಂಬೆಯ ಮುಖವನ್ನು ಮೊದಲು ತಯಾರಿಸಬೇಕು. ಮುಖವು ಮಾಮೂಲಿಯಾಗಿರದೆ ಸ್ವಲ್ಪ ವಿಕೃತವಾಗಿದ್ದರೆ ನೋಡಲು ಖುಷಿಯಾಗುತ್ತದೆ. ಆನಂತರ ಬಣ್ಣದ ಕಾಗದವನ್ನು ಕೋನಾಕೃತಿಯಲ್ಲಿ ಮಡಚಿ ಕೈಬೆರಳುಗಳಿಗೆ ಸಿಕ್ಕಿಸುವ ಗೊಂಬೆಯ ಕೈಯ್ಯನ್ನು ಬೆರಳುಗಳ ಸಹಿತ ರಚಿಸಬೇಕು. ಬಳಿಕ ಒಂದು ಬಣ್ಣದ ವಸ್ತ್ರವನ್ನು ಕೈಗೆ ಸಿಕ್ಕಿಸಿಕೊಂಡು ಮಧ್ಯದ ಬೆರಳಿಗೆ ಗೊಂಬೆಯ ಮುಖವನ್ನು, ಕಿರುಬೆರಳು ಮತ್ತು ತೋರುಬೆರಳಿಗೆ ಗೊಂಬೆಯ ಕೈಗಳನ್ನು ಸಿಕ್ಕಿಸಿಕೊಂಡು ಮಾತನಾಡುತ್ತಾ ಅದಕ್ಕೆ ಸರಿಯಾಗಿ ಗೊಂಬೆಯ ಹಾವಭಾವವನ್ನು ಪ್ರದರ್ಶಿಸಿದಾಗ ಗೊಂಬೆ ಮಾತನಾಡಿದಂತೆ ಕಾಣುತ್ತದೆ. ವೇಗವಾಗಿ ಮತ್ತು ಹಾಸ್ಯಮಯವಾಗಿ ಬೇರೆ ಬೇರೆ ಸ್ವರಗಳಲ್ಲಿ ಮಾತನಾಡಿ ಇತರರನ್ನು ಸಂತೋಷಗೊಳಿಸಬಹುದು. 

ಅನಂತರ ಬಣ್ಣಕಾಗದದಿಂದ ಆನೆ, ಇಲಿ, ಕುದುರೆ, ಹಕ್ಕಿ ಮುಂತಾದುವುಗಳ ಮುಖವಾಡ ರಚಿಸುವ ವಿಧಾನ ಹಾಗೂ ಅದನ್ನು ಮುಖಕ್ಕೆ ಧರಿಸಿ ಅವುಗಳಂತೆ ವರ್ತಿಸುವ ವಿಧಾನವನ್ನು ಮಾಡಿ ತೋರಿಸಿದರು. ಇನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಖುಷಿಯಿಂದ ಮುಖವಾಡ ರಚಿಸಿ ಮುಖಕ್ಕೆ ಸಿಕ್ಕಿಸಿ ನಲಿದಾಡಿದರು. 

ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.