ನಂದನೇಶ್ವರ ಯಕ್ಷಗಾನ ಮಿತ್ರಮಂಡಳಿ ವಜ್ರಮಹೋತ್ಸವ
Team Udayavani, Aug 17, 2018, 6:00 AM IST
ಆರ್ಥಿಕ ಕೊರತೆಯಿಂದ ಶಿಥಿಲವಾಗಿ ಮರೆಯಾದ ಪಣಂಬೂರು ಮೇಳ ದಿ| ಶ್ಯಾನುಭೋಗ್ ಪದ್ಮನಾಭಯ್ಯನವರ ಉತ್ಸಾಹದಿಂದ ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರ ಮಂಡಳಿಯಾಗಿ ಬೆಳೆಯಿತು. ಸರ್ವಾಂಗೀಣ ಕಲಾವಿದ ದಿ| ವೆಂಕಟ್ರಾಯ ಐತಾಳರ ಕೊಡುಗೆಯೂ ಉಲ್ಲೇಖನೀಯ.
2017-18ಕ್ಕೆ ಮಂಡಳಿಗೆ ವಜ್ರಮಹೋತ್ಸವದ ಸಂಭ್ರಮ. ವರುಷವಿಡೀ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ತಾಳ ಮದ್ದಳೆ ಮತ್ತು ಬಯಲಾಟಗಳನ್ನು ಮಾಡಿ, ಮಂಡಳಿಯಲ್ಲಿ ಸೇವೆಗೈದ ಹಿರಿಯ ಸುಮಾರು 40 ಕಲಾವಿದರನ್ನು ಗೌರವಿಸಲಾಗಿದೆ. ಅಂತೆಯೇ ಸುಮಾರು ಇಪ್ಪತ್ತು ಕಲಾವಿದರ ಮನೆಯವರನ್ನು ಗೌರವಿಸಲಾಗಿದೆ. ವಿವಿಧೆಡೆ ಕಾರ್ಯಕ್ರಮ ಗಳನ್ನು ಸಂಘಟಿಸಲಾಗಿದೆ. ಮೇ 31ರಂದು ಜೂ. 2 ಮತ್ತು 3ರಂದು ವಜ್ರಮಹೋತ್ಸವದ ಸಮಾರೋಪ ಸಮಾರಂಭ ಶ್ರೀ ನಂದನೇಶ್ವರ ದೇವಳದಲ್ಲಿ ಜರಗಿತು. ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಂಬಾ ಗಮನ- ಗಂಗಾಗಮನ ಆಖ್ಯಾನದ ಕೂಟ ಜರಗಿತು. ದ್ವಿತೀಯ ದಿನ ಪಣಂಬೂರು ಮಕ್ಕಳ ಮೇಳದವರಿಂದ “ತರಣಿಸೇನ’ ಬಯಲಾಟ ಮತ್ತು ಮಿತ್ರಮಂಡಳಿಯ ಕಲಾವಿದರಿಂದ “ನರಕಾಸುರ ಮೋಕ್ಷ – ದಾಶರಥಿ ದರ್ಶನ’ ಬಯಲಾಟ ಜರಗಿತು. ತೃತೀಯ ದಿನ ಅಭಿಮನ್ಯು ಕಾಳಗ , ಸೈಂಧವ ವಧೆ, ಘಟೋತ್ಕಚ ವಧೆ ಬಯಲಾಟವು ಸುಮಾರು 45 ಪ್ರಸಿದ್ಧ ಕಲಾವಿದರಿಂದ ಜರಗಿತು.
ಪಿ. ಮಧುಕರ ಭಾಗವತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ