ಮನಸೂರೆಗೊಂಡ ಪೆರ್ಲ ಸಹೋದರಿಯರ ಭರತನಾಟ್ಯ
Team Udayavani, Aug 17, 2018, 6:00 AM IST
ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಚಾರ್ತುಮಾಸ ವ್ರತಾಚರಣೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ನೃತ್ಯ ವಿದುಷಿಯರಾದ ಅರ್ಥಾ ಪೆರ್ಲ ಹಾಗೂ ಆಯನಾ ಪೆರ್ಲ ಇವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು. ಮೊದಲಿಗೆ “ಅಲರಿಪು’ ಭರತನಾಟ್ಯ ಮೊದಲ ನೃತ್ತಬಂಧ ಇಲ್ಲಿ ಪ್ರಸ್ತುತ ಪಡಿಸಿದುದು ಪಂಚಭೂತ ಅಲರಿಪು ಇದರಲ್ಲಿ ಪಂಚಭೂತ ಶಿವನನ್ನು ವರ್ಣಿಸಲಾಗಿದೆ. ಎಡನೆಯದಾಗಿ ಜತಿಸ್ವರ, ವಿವಿಧ ಸ್ವರಗಳ ಜೋಡಣೆ ಇರುವ ಸಂಗೀತದ ಜತಿಸ್ವರವನ್ನೇ ಇಲ್ಲಿ ಅಳವಡಿಸಲಾಗಿದೆ. ಇದನ್ನು ಪೆರ್ಲ ಸಹೋದರಿಯರು ಬಹಳ ಮಾರ್ಮಿಕವಾಗಿ ಸಾದರಪಡಿಸಿದರು. ನಂತರ ಶಿವಪಂಚಾಕ್ಷರಿ ನೃತ್ಯ, ಮುಂದೆ ಪದವರ್ಣ ಇದರಲ್ಲಿ ನಂದಗೋಪಾಲನನ್ನು ಹೊಗಳುವ ಸಾಧ್ಯತೆ ಹೊಂದಿದೆ. ನೃತ್ತ ಹಾಗೂ ಸಾಹಿತ್ಯ ಎರಡಕ್ಕೂ ಸಮಾನ ಪ್ರಧಾನ್ಯವನ್ನು ಇಲ್ಲಿ ಕಾಣಬಹುದಾಗಿತ್ತು. ಮುಂದೆ ಮೊಮುಚುಪುರಾ ಎಂಬ ತೆಲುಗು ದೇವರ ನಾಮವನ್ನು ಪ್ರಸ್ತುತಪಡಿಸಿದರು. ಮುದ್ದು ಕೃಷ್ಣನ ತುಂಟಾಟದ ಚಿತ್ರಣ ಸೊಗಸಾಗಿ ಮೂಡಿಬಂತು. ಕೊನೆಯ ಪ್ರಸ್ತುತಿ ದಿಕ್ಕು ತೆರಿಯಾದ ಕಾಟಿಲ್ ನಾಟ್ಯಾಭಿನಯ ಆಮೋಘವಾಗಿತ್ತು.
ಪ್ರಸಾದ್ ಮೈರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?