ಮದಂಗಲ್ಲು ಆನಂದ ಭಟ್‌ಗೆ ಯಕ್ಷ ಬಳಗದ ಸಮ್ಮಾನ 


Team Udayavani, Aug 17, 2018, 6:00 AM IST

c-10.jpg

ಮದಂಗಲ್ಲು ಆನಂದ ಭಟ್‌ ಅವರು ಕಾಯದಲ್ಲಿ ವಾಮನ ಮೂರ್ತಿ. ಸಾಧಿಸಿದ್ದು ತ್ರಿವಿಕ್ರಮ ಕಲಾಸಾಧನೆ. ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದ ಮದಂಗಲ್ಲು ಮನೆಯಲ್ಲಿ ಜನಿಸಿ ನಾಲ್ಕು ದಶಕಗಳಿಂದ ಪುಣೆಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ಗುರುವಾಗಿ ಮಾರ್ಗದರ್ಶಕನಾಗಿ, ನಟನಾಗಿ, ಸಂಘಟಕನಾಗಿ, ಪ್ರಸಾದನ ಕಲಾವಿದನಾಗಿ, ತನ್ನದೇ ವೇಷಭ‌ೂಷಣಗಳೊಂದಿಗೆ ನೇಪಥ್ಯದಲ್ಲೂ ದುಡಿಯುವ ಬಹುಮುಖ ಪ್ರತಿಭೆಯ ಅಪ್ಪಟ ಕಲಾವಿದ. 

ಯಕ್ಷಗಾನ ಪರಂಪರೆಯ ಮನೆತನದಲ್ಲಿ ಜನಿಸಿದ ಆನಂದ ಭಟ್‌ ಬಾಲ್ಯದಿಂದಲೇ ಯಕ್ಷಗಾನದೆಡೆಗೆ ಆಕರ್ಷಿತರಾದವರು. ಒಂದು ವರ್ಷ ಸಂಘ ಸಂಸ್ಥೆಯ ಆಟಗಳಲ್ಲಿ ಹಾಗೂ ಎರಡು ವರ್ಷ ಕುಂಬಳೆ ಶೇಷಪ್ಪರ ಸಂಚಾಲಕತ್ವದ ಉಪ್ಪಳ ಭಗವತಿ ಮೇಳದಲ್ಲಿ ತಿರುಗಾಟ ನಡೆಸಿದರು. ಸ್ವತಃ ಮುಖವರ್ಣಿಕೆ ಬರೆದು ಅನಿವಾರ್ಯಕ್ಕೆ ಹಾಗೂ ಅವಕಾಶಕ್ಕೆ ತಕ್ಕಂತೆ ಬಹುವಿಧ ವೇಷಗಾರಿಕೆ ನಡೆಸಿದವರು, ಅವರ ಭಸ್ಮಾಸುರ, ಅಯ್ಯಪ್ಪ, ಅರ್ಜುನ, ಶೂರ್ಪನಖೀ ಪಾತ್ರಗಳು ಹೆಸರು ಗಳಿಸಿದ್ದವು. ಉದ್ಯೋಗಾರ್ತಿಯಾಗಿ ಪುಣೆಗೆ ತೆರಳಿ ಅಲ್ಲಿ ಬಿಡುವಿನಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಯಕ್ಷಗಾನ ಸಂಘವನ್ನು ಕಟ್ಟಿಕೊಂಡು ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಕಲಾ ಸೇವೆಯನ್ನು ಕೈಗೊಂಡರು. ತನ್ನದೇ ವೇಷಭೂಷಣ ಪ್ರಸಾದನ ಸಂಸ್ಥೆಯನ್ನು ಹುಟ್ಟುಹಾಕಿದರು. ಸ್ತ್ರೀವೇಷವನ್ನು ಹೊರತುಪಡಿಸಿ ಎಲ್ಲಾ ಪ್ರಕಾರದ ವೇಶಗಳಲ್ಲೂ ಮೆರೆದಿರುವ ಇವರಿಗೆ ಭಸ್ಮಾಸುರ, ಕೇತಕಿವರ್ಮ, ಹನುಮಂತ, ಶೂರ್ಪನಖೀ, ರಾವಣ, ಈಶ್ವರ, ಶಕಟಾಸುರ, ದೇವೇಂದ್ರ, ಇತ್ಯಾದಿ ಖ್ಯಾತಿ ತಂದ ವೇಷಗಳು.

ಯಕ್ಷಬಳಗ ಹೊಸಂಗಡಿ ಕಲಾ ಸಂಘಟನೆಯು ತನ್ನ 27ನೇ ವರ್ಷದ ಆಷಾಢ ಮಾಸದ ಸಾಪ್ತಾಹಿಕ ತಾಳಮದ್ದಳೆ ಕೂಟದ ಸಮಾರೋಪ ಸಮಾರಂಭದಲ್ಲಿ ವಾರ್ಷಿಕ ಸಮ್ಮಾನ ಸರಣಿಗೆ ಇವರನ್ನು ಆರಿಸಿದೆ. ಆಗಸ್ಟ್‌ 19ರಂದು ತಾಳಮದ್ದಳೆ “ಅಂಗದ ಸಂಧಾನ’ದ ಜತೆಗೆ ಸಮ್ಮಾನ ಜರಗಲಿದೆ.  

ಯೋಗೀಶ ರಾವ್‌ ಚಿಗುರುಪಾದೆ 

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.