ಮದಂಗಲ್ಲು ಆನಂದ ಭಟ್‌ಗೆ ಯಕ್ಷ ಬಳಗದ ಸಮ್ಮಾನ 


Team Udayavani, Aug 17, 2018, 6:00 AM IST

c-10.jpg

ಮದಂಗಲ್ಲು ಆನಂದ ಭಟ್‌ ಅವರು ಕಾಯದಲ್ಲಿ ವಾಮನ ಮೂರ್ತಿ. ಸಾಧಿಸಿದ್ದು ತ್ರಿವಿಕ್ರಮ ಕಲಾಸಾಧನೆ. ಕಾಸರಗೋಡು ಜಿಲ್ಲೆಯ ಮೀಯಪದವು ಸಮೀಪದ ಮದಂಗಲ್ಲು ಮನೆಯಲ್ಲಿ ಜನಿಸಿ ನಾಲ್ಕು ದಶಕಗಳಿಂದ ಪುಣೆಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ಗುರುವಾಗಿ ಮಾರ್ಗದರ್ಶಕನಾಗಿ, ನಟನಾಗಿ, ಸಂಘಟಕನಾಗಿ, ಪ್ರಸಾದನ ಕಲಾವಿದನಾಗಿ, ತನ್ನದೇ ವೇಷಭ‌ೂಷಣಗಳೊಂದಿಗೆ ನೇಪಥ್ಯದಲ್ಲೂ ದುಡಿಯುವ ಬಹುಮುಖ ಪ್ರತಿಭೆಯ ಅಪ್ಪಟ ಕಲಾವಿದ. 

ಯಕ್ಷಗಾನ ಪರಂಪರೆಯ ಮನೆತನದಲ್ಲಿ ಜನಿಸಿದ ಆನಂದ ಭಟ್‌ ಬಾಲ್ಯದಿಂದಲೇ ಯಕ್ಷಗಾನದೆಡೆಗೆ ಆಕರ್ಷಿತರಾದವರು. ಒಂದು ವರ್ಷ ಸಂಘ ಸಂಸ್ಥೆಯ ಆಟಗಳಲ್ಲಿ ಹಾಗೂ ಎರಡು ವರ್ಷ ಕುಂಬಳೆ ಶೇಷಪ್ಪರ ಸಂಚಾಲಕತ್ವದ ಉಪ್ಪಳ ಭಗವತಿ ಮೇಳದಲ್ಲಿ ತಿರುಗಾಟ ನಡೆಸಿದರು. ಸ್ವತಃ ಮುಖವರ್ಣಿಕೆ ಬರೆದು ಅನಿವಾರ್ಯಕ್ಕೆ ಹಾಗೂ ಅವಕಾಶಕ್ಕೆ ತಕ್ಕಂತೆ ಬಹುವಿಧ ವೇಷಗಾರಿಕೆ ನಡೆಸಿದವರು, ಅವರ ಭಸ್ಮಾಸುರ, ಅಯ್ಯಪ್ಪ, ಅರ್ಜುನ, ಶೂರ್ಪನಖೀ ಪಾತ್ರಗಳು ಹೆಸರು ಗಳಿಸಿದ್ದವು. ಉದ್ಯೋಗಾರ್ತಿಯಾಗಿ ಪುಣೆಗೆ ತೆರಳಿ ಅಲ್ಲಿ ಬಿಡುವಿನಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಯಕ್ಷಗಾನ ಸಂಘವನ್ನು ಕಟ್ಟಿಕೊಂಡು ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಕಲಾ ಸೇವೆಯನ್ನು ಕೈಗೊಂಡರು. ತನ್ನದೇ ವೇಷಭೂಷಣ ಪ್ರಸಾದನ ಸಂಸ್ಥೆಯನ್ನು ಹುಟ್ಟುಹಾಕಿದರು. ಸ್ತ್ರೀವೇಷವನ್ನು ಹೊರತುಪಡಿಸಿ ಎಲ್ಲಾ ಪ್ರಕಾರದ ವೇಶಗಳಲ್ಲೂ ಮೆರೆದಿರುವ ಇವರಿಗೆ ಭಸ್ಮಾಸುರ, ಕೇತಕಿವರ್ಮ, ಹನುಮಂತ, ಶೂರ್ಪನಖೀ, ರಾವಣ, ಈಶ್ವರ, ಶಕಟಾಸುರ, ದೇವೇಂದ್ರ, ಇತ್ಯಾದಿ ಖ್ಯಾತಿ ತಂದ ವೇಷಗಳು.

ಯಕ್ಷಬಳಗ ಹೊಸಂಗಡಿ ಕಲಾ ಸಂಘಟನೆಯು ತನ್ನ 27ನೇ ವರ್ಷದ ಆಷಾಢ ಮಾಸದ ಸಾಪ್ತಾಹಿಕ ತಾಳಮದ್ದಳೆ ಕೂಟದ ಸಮಾರೋಪ ಸಮಾರಂಭದಲ್ಲಿ ವಾರ್ಷಿಕ ಸಮ್ಮಾನ ಸರಣಿಗೆ ಇವರನ್ನು ಆರಿಸಿದೆ. ಆಗಸ್ಟ್‌ 19ರಂದು ತಾಳಮದ್ದಳೆ “ಅಂಗದ ಸಂಧಾನ’ದ ಜತೆಗೆ ಸಮ್ಮಾನ ಜರಗಲಿದೆ.  

ಯೋಗೀಶ ರಾವ್‌ ಚಿಗುರುಪಾದೆ 

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.