ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ವಂಡ್ಸೆ ನಾಗಯ್ಯ ಶೆಟ್ಟಿ


Team Udayavani, Aug 24, 2018, 5:36 PM IST

3.jpg

ಜೀವನದ ಒಂಭತ್ತು ದಶಕಗಳನ್ನು ಕಂಡ ಹಾಸ್ಯಗಾರ ನಾಗಯ್ಯ ಶೆಟ್ಟರು ಇನ್ನೇನು ಮರೆತೇ ಹೋದರು ಎಂಬಾಗ ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. 

ದರ್ಲಿಯಣಿ ನಾಗಯ್ಯ ಶೆಟ್ಟರು ಜನಿಸಿದ್ದು ಸಪ್ಟೆಂಬರ್‌ 15,1930ರಂದು ಕುಂದಾಪುರ ತಾಲ್ಲೂಕಿನ ವಂಡ್ಸೆಯಲ್ಲಿ; ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಗೆ ಓದು ನಿಲ್ಲಿಸಿ ಯಕ್ಷಗಾನದತ್ತ ಆಕರ್ಷಿತರಾಗಿ ಪ್ರಥಮವಾಗಿ ಸೇರಿದ್ದು ಮಾರಣಕಟ್ಟೆ ಮೇಳವನ್ನು. ಯಕ್ಷಗಾನದ ಹೆಜ್ಜೆಗಾರಿಕೆೆ ಮತ್ತು ತಾಳಗಳನ್ನು ಸ್ವಂತ ಪರಿಶ್ರಮದಿಂದ ಕಲಿತ ಅವರು ವೀರಭದ್ರ ನಾಯಕರನ್ನು ಗುರು ಎಂದು ಸ್ವೀಕರಿಸಿ ನೃತ್ಯ ಹಾಗೂ ಮಾತುಗಾರಿಕೆಯಲ್ಲಿ ಪರಿಣತಿ ಸಾಧಿಸಿದರು. ಕಟ್ಟುವೇಷಗಳನ್ನು ಹಾಸ್ಯ ಪಾತ್ರಗಳಂತೆ ಶ್ರದ್ಧೆಯಿಂದ ಮಾಡಿ ಯಕ್ಷಗಾನದ ವಿವಿಧ ಭೂಮಿಕೆಗಳನ್ನು ನಿರ್ವಹಿಸಿ ಪ್ರಸಿದ್ಧರಾಗಿ ಬಡಗು ತಿಟ್ಟಿನ ಪ್ರಾತಿನಿಧಿಕ ಹಾಸ್ಯಗಾರರೆನಿಸಿದರು.

ಮಾರಣಕಟ್ಟೆ ಮೇಳವೊಂದರಲ್ಲೇ 35 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿರುವ ನಾಗಯ್ಯ ಶೆಟ್ಟರು ವಿಶಿಷ್ಟ ಶೈಲಿಯ ಹಾಸ್ಯದಿಂದ ಜನಪ್ರಿಯರಾದರು. ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಂದರ್ತಿ, ಪೆರ್ಡೂರು, ಕೊಡವೂರು ಹಾಗೂ ಹೆಗ್ಗೊàಡು ಮೇಳಗಳಲ್ಲೂ ಸೇವೆ ಸಲ್ಲಿಸಿರುವ ಶೆಟ್ಟರಿಗೆ 41 ವರ್ಷಗಳ ತಿರುಗಾಟದ ಅನುಭವವಿದೆ. ಕುಶಲವದ “ವಾಲ್ಮೀಕಿ’ ನಳ ದಮಯಂತಿಯ “ಬಾಹುಕ’ ಶೂರ್ಪನಖಾ ವಿವಾಹದ “ವಿದ್ಯುಜ್ಜಿಹ್ವ’, ವಿರಾಟಪರ್ವದ “ಚಿಕ್ಕ’, ಶ್ರೀಕೃಷ್ಣ ಗಾರುಡಿಯ “ಗಾರುಡಿ’ ಇತ್ಯಾದಿ ಪಾತ್ರಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ಅವರಿಗೆ “ಹಾಸ್ಯಗಾರ ನಾಗಯ್ಯ ಶೆಟ್ಟಿ’ ಎಂದೇ ಹೆಸರಾಯಿತು. 

ಕೊಕ್ಕ‌ರ್ಣೆ ನರಸಿಂಹ ನಾಯ್ಕ, ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ, ಬಣ್ಣದ ಸಂಜೀವ ನಾಯ್ಕ, ಹಾಸ್ಯಗಾರ ಮಂಜುನಾಥ ಪರಾಡಿ ಮೊದಲಾದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡಿರುವುದು ಅವರ ಹಿರಿಮೆ. ಗುರು ವೀರಭದ್ರ ನಾಯಕರೊಂದಿಗೆ “ಚಿತ್ರಗುಪ್ತ’, ಶಿರಿಯಾರ ಮಂಜುನಾಥ ನಾಯ್ಕ ಮತ್ತು ವಂಡಾರು ಬಸವ ನಾಯರಿ ಜೊತೆ ಅವರು ಮಾಡುತ್ತಿದ್ದ “ಬಾಹುಕ’ಪಾತ್ರ  ಜನಪ್ರಿಯ. 

ಇದೀಗ ಜಾಗತಿಕ ಬಂಟ ಪ್ರತಿಷ್ಠಾನ ಟ್ರಸ್ಟ್‌ ಡಾ. ಡಿ.ಕೆ ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆನೀಡುವ ಪ್ರಶಸ್ತಿಗೆ 2018-19ರ ಸಾಲಿನಲ್ಲಿ ವಂಡ್ಸೆ ನಾಗಯ್ಯ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಆಗಸ್ಟ್‌ 26ರಂದುಮಂಗಳೂರಿನಲ್ಲಿ ಜರಗುವ ಪ್ರತಿಷ್ಠಾನದ ಮಹಾಸಭೆಯಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವರು.

ಭಾಸ್ಕರ ರೈ ಕುಕ್ಕವಳ್ಳಿ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.