ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ವಂಡ್ಸೆ ನಾಗಯ್ಯ ಶೆಟ್ಟಿ


Team Udayavani, Aug 24, 2018, 5:36 PM IST

3.jpg

ಜೀವನದ ಒಂಭತ್ತು ದಶಕಗಳನ್ನು ಕಂಡ ಹಾಸ್ಯಗಾರ ನಾಗಯ್ಯ ಶೆಟ್ಟರು ಇನ್ನೇನು ಮರೆತೇ ಹೋದರು ಎಂಬಾಗ ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. 

ದರ್ಲಿಯಣಿ ನಾಗಯ್ಯ ಶೆಟ್ಟರು ಜನಿಸಿದ್ದು ಸಪ್ಟೆಂಬರ್‌ 15,1930ರಂದು ಕುಂದಾಪುರ ತಾಲ್ಲೂಕಿನ ವಂಡ್ಸೆಯಲ್ಲಿ; ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಗೆ ಓದು ನಿಲ್ಲಿಸಿ ಯಕ್ಷಗಾನದತ್ತ ಆಕರ್ಷಿತರಾಗಿ ಪ್ರಥಮವಾಗಿ ಸೇರಿದ್ದು ಮಾರಣಕಟ್ಟೆ ಮೇಳವನ್ನು. ಯಕ್ಷಗಾನದ ಹೆಜ್ಜೆಗಾರಿಕೆೆ ಮತ್ತು ತಾಳಗಳನ್ನು ಸ್ವಂತ ಪರಿಶ್ರಮದಿಂದ ಕಲಿತ ಅವರು ವೀರಭದ್ರ ನಾಯಕರನ್ನು ಗುರು ಎಂದು ಸ್ವೀಕರಿಸಿ ನೃತ್ಯ ಹಾಗೂ ಮಾತುಗಾರಿಕೆಯಲ್ಲಿ ಪರಿಣತಿ ಸಾಧಿಸಿದರು. ಕಟ್ಟುವೇಷಗಳನ್ನು ಹಾಸ್ಯ ಪಾತ್ರಗಳಂತೆ ಶ್ರದ್ಧೆಯಿಂದ ಮಾಡಿ ಯಕ್ಷಗಾನದ ವಿವಿಧ ಭೂಮಿಕೆಗಳನ್ನು ನಿರ್ವಹಿಸಿ ಪ್ರಸಿದ್ಧರಾಗಿ ಬಡಗು ತಿಟ್ಟಿನ ಪ್ರಾತಿನಿಧಿಕ ಹಾಸ್ಯಗಾರರೆನಿಸಿದರು.

ಮಾರಣಕಟ್ಟೆ ಮೇಳವೊಂದರಲ್ಲೇ 35 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿರುವ ನಾಗಯ್ಯ ಶೆಟ್ಟರು ವಿಶಿಷ್ಟ ಶೈಲಿಯ ಹಾಸ್ಯದಿಂದ ಜನಪ್ರಿಯರಾದರು. ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಂದರ್ತಿ, ಪೆರ್ಡೂರು, ಕೊಡವೂರು ಹಾಗೂ ಹೆಗ್ಗೊàಡು ಮೇಳಗಳಲ್ಲೂ ಸೇವೆ ಸಲ್ಲಿಸಿರುವ ಶೆಟ್ಟರಿಗೆ 41 ವರ್ಷಗಳ ತಿರುಗಾಟದ ಅನುಭವವಿದೆ. ಕುಶಲವದ “ವಾಲ್ಮೀಕಿ’ ನಳ ದಮಯಂತಿಯ “ಬಾಹುಕ’ ಶೂರ್ಪನಖಾ ವಿವಾಹದ “ವಿದ್ಯುಜ್ಜಿಹ್ವ’, ವಿರಾಟಪರ್ವದ “ಚಿಕ್ಕ’, ಶ್ರೀಕೃಷ್ಣ ಗಾರುಡಿಯ “ಗಾರುಡಿ’ ಇತ್ಯಾದಿ ಪಾತ್ರಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ಅವರಿಗೆ “ಹಾಸ್ಯಗಾರ ನಾಗಯ್ಯ ಶೆಟ್ಟಿ’ ಎಂದೇ ಹೆಸರಾಯಿತು. 

ಕೊಕ್ಕ‌ರ್ಣೆ ನರಸಿಂಹ ನಾಯ್ಕ, ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ, ಬಣ್ಣದ ಸಂಜೀವ ನಾಯ್ಕ, ಹಾಸ್ಯಗಾರ ಮಂಜುನಾಥ ಪರಾಡಿ ಮೊದಲಾದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡಿರುವುದು ಅವರ ಹಿರಿಮೆ. ಗುರು ವೀರಭದ್ರ ನಾಯಕರೊಂದಿಗೆ “ಚಿತ್ರಗುಪ್ತ’, ಶಿರಿಯಾರ ಮಂಜುನಾಥ ನಾಯ್ಕ ಮತ್ತು ವಂಡಾರು ಬಸವ ನಾಯರಿ ಜೊತೆ ಅವರು ಮಾಡುತ್ತಿದ್ದ “ಬಾಹುಕ’ಪಾತ್ರ  ಜನಪ್ರಿಯ. 

ಇದೀಗ ಜಾಗತಿಕ ಬಂಟ ಪ್ರತಿಷ್ಠಾನ ಟ್ರಸ್ಟ್‌ ಡಾ. ಡಿ.ಕೆ ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆನೀಡುವ ಪ್ರಶಸ್ತಿಗೆ 2018-19ರ ಸಾಲಿನಲ್ಲಿ ವಂಡ್ಸೆ ನಾಗಯ್ಯ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಆಗಸ್ಟ್‌ 26ರಂದುಮಂಗಳೂರಿನಲ್ಲಿ ಜರಗುವ ಪ್ರತಿಷ್ಠಾನದ ಮಹಾಸಭೆಯಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವರು.

ಭಾಸ್ಕರ ರೈ ಕುಕ್ಕವಳ್ಳಿ

ಟಾಪ್ ನ್ಯೂಸ್

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.