ಗುರು ಮಾಂಬಾಡಿಯವರಿಗೆ ಸಮ್ಮಾನ
Team Udayavani, Sep 7, 2018, 6:00 AM IST
ಮಾಂಬಾಡಿ ಸುಬ್ರಹ್ಮಣ್ಯ ಭಟ್ 50 ವರ್ಷಗಳಿಂದ ಹಿಮ್ಮೇಳ ತರಬೇತಿ ನಡೆಸುತ್ತಾ ಬಂದಿದ್ದಾರೆ. ತೀರ್ಥರೂಪರಿಂದಲೇ ಹಿಮ್ಮೇಳ ಕರಗತ ಮಾಡಿಕೊಂಡ ಬಳಿಕ ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ನಡೆಸಿ ಇದೀಗ ಮೇಳದ ಬದುಕಿಗೆ ವಿರಾಮ ಹಾಡಿ ಆಸಕ್ತರಿಗೆ ಹಿಮ್ಮೇಳ ಕಲಿಸುತ್ತಿದ್ದಾರೆ.
ಚೆಂಡೆ ಮದ್ದಳೆ ಎರಡರಲ್ಲೂ ಅವರದ್ದು ಪಳಗಿದ ಕೈ. ಕಲಿಯಲು ಬರುವ ಪ್ರತಿಯೋರ್ವ ವಿದ್ಯಾರ್ಥಿಯನ್ನೂ ಹುರಿದುಂಬಿಸುತ್ತಾ ಆತನಿಗೆ ಧೈರ್ಯ ಆತ್ಮವಿಶ್ವಾಸ ತುಂಬುತ್ತಾ ಕಲಿಸುವ ಪರಿ ಅಮೋಘವಾದದ್ದು. ಆದ್ಧರಿಂದಲೇ ಇಂದು ಒಂದು ಸಾವಿರಕ್ಕೂ ಮಿಕ್ಕ ಯಕ್ಷಗಾನ ಶಿಷ್ಯರನ್ನು ಹೊಂದಿರುವ ನಿಜಾರ್ಥದ ಗುರು.
ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ದೇಗುಲದಲ್ಲಿ ಸೆಪ್ಟಂಬರ್ 8 ರಂದು ಜರಗುವ ವೇದಮೂರ್ತಿ ಗಣೇಶ ನಾವಡ ಹಾಗೂ ಬಳಗದವರ ಸೇವಾರೂಪದ ಉದಯೋನ್ಮುಖ ಭಾಗವತರ ಯಕ್ಷಗಾನಾರ್ಚನೆ ಜರಗಲಿದ್ದು ಈ ಸಂದರ್ಭ ಸುಬ್ರಹ್ಮಣ್ಯ ಭಟ್ ಅವರ ಕಲಾ ಸಾಧನೆಯನ್ನು ಸಮ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಲಾಗುವುದು.
ಯೋಗೀಶ ರಾವ್ ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ