ಹೆಜ್ಜೆಗೆಜ್ಜೆಯಲ್ಲಿ ಮನಮೋಹಕ ನೃತ್ಯಾಂಜಲಿ 


Team Udayavani, Sep 7, 2018, 6:00 AM IST

3.jpg

ನೂರಾರು ವಿದ್ಯಾರ್ಥಿಗಳಿಗೆ ನೃತ್ಯವಿದ್ಯೆಯನ್ನು ಧಾರೆ ಎರೆಯುತ್ತಾ ಬಂದಿರುವ ಹೆಜ್ಜೆಗೆಜ್ಜೆ ನೃತ್ಯ ಸಂಸ್ಥೆಯು ಇದೀಗ ಇಪ್ಪತ್ತೈದು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದೆ. ನವೀಕೃತಗೊಂಡ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮಗಳು ಕಡಿಮೆಯಾಗುತ್ತಿದ್ದ ಈ ಸಂದರ್ಭದಲ್ಲೇ ವಿದುಷಿ ಯಶ ರಾಮಕೃಷ್ಣರ ಹೆಜ್ಜೆಗೆಜ್ಜೆ ಸಂಸ್ಥೆಯು ಬೆಳ್ಳಿಹೆಜ್ಜೆ ಇಡುತ್ತಿರುವುದು ಉಡುಪಿಯ ಕಲಾರಸಿಕರಿಗೆ ನೃತ್ಯದ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಿದಂತಾಗಿದೆ

ಇತ್ತೀಚೆಗೆ ರಾಜಾಂಗಣದಲ್ಲಿ ಹೆಜ್ಜೆಗೆಜ್ಜೆಯ ರಜತ ಮಹೋತ್ಸವ ಉದ್ಘಾಟನೆಗೊಂಡಿತು. ಅದೇ ದಿನ ಬೆಂಗಳೂರಿನ ಗುರು ಅನುರಾಧಾ ವಿಕ್ರಾಂತ್‌ ಅವರ ದೃಷ್ಟಿ ಡ್ಯಾನ್ಸ್‌ ಎನ್ಸ್‌ಂಬಲ್‌ ನೃತ್ಯ ಕಾರ್ಯಕ್ರಮದ ಮೂಲಕ ನೃತ್ಯಾಂಜಲಿ ಎಂಬ ಸರಣಿ ನೃತ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ನೃತ್ಯಾಂಜಲಿ -1 ರಲ್ಲಿ ಅನುರಾಧಾ ವಿಕ್ರಾಂತ್‌ರ ಶಿಷ್ಯೆಯರಾದ ಶುಭಾ,ಐಶ್ವರ್ಯಾ, ಟಿನ್ಸಿ,ರಮ್ಯಾ ಇವರೊಂದಿಗೆ ಪ್ರದರ್ಶಿಸಿದ ಅಂಜಲಿ ನೃತ್ಯದಲ್ಲಿ ವಿದ್ವಾನ್‌ ಬಾಲಸುಬ್ರಹ್ಮಣ್ಯ ಶರ್ಮ ಅವರ ಹಾಡಿನ ಸಂಯೋಜನೆ ಮತ್ತು ಅನುರಾಧಾ ಅವರ ನೃತ್ಯ ಸಂಯೋಜನೆಯು ವಿಭಿನ್ನವಾಗಿತ್ತು.ಎಲ್ಲರೂ ಮತ್ತೆ ಮತ್ತೆ ಅಭಿನಯಿಸುವ ಚರ್ವಿತಚರ್ವಣ ಅನಿಸುವ ಪುರಂದರದಾಸರ ಜಗನ್ಮೋಹನನೇ ಕೃಷ್ಣ  ಎಂಬ ಹಾಡನ್ನು  ವಿಶಿಷ್ಟ ರಂಗ ವಿನ್ಯಾಸ ದೊಂದಿಗೆ ಉತ್ತಮವಾಗಿ ಅಭಿನಯಿಸಿದ್ದು ಪ್ರಶಂಸನೀಯ.ಮುಂದೆ ಪ್ರದರ್ಶನಗೊಂಡ ಬೃಂದಾವನಿ ರಾಗದ ಆದಿತಾಳದ ಸ್ವಾತಿ ತಿರುನಾಳ್‌ ರಚನೆ ಚಲಿಯೇ ಕುಂಜನಮೊ ಸಿಂಧುಭೈರವಿ ರಾಗದ ಪುರಂದರದಾಸರ ತಂಬೂರಿ ಮೀಟಿದವ, ನಾಟಿಕುರಂಜಿ ರಾಗದ ಪುರಂದರದಾಸರ ಪೋಗುವುದುಚಿತವೇ ನೃತ್ಯಗಳನ್ನು ಅನುರಾಧಾರವರು ಮನಮುಟ್ಟುವಂತೆ ಅಭಿನಯಿಸಿದರು.ದಾಸರ ಹಾಡು ಒಂದರ ಬೆನ್ನಿಗೆ ಇನ್ನೊಂದು ಇರದಿರುತ್ತಿದ್ದರೆ ಸಣ್ಣ ಮಟ್ಟಿನ ಏಕತಾನತೆಯನ್ನು ತಪ್ಪಿಸಬಹುದಿತ್ತು.ಡಿ.ವಿ ಗುಂಡಪ್ಪನವರ ಅಂತಃಪುರ ಗೀತೆಯ ಮುರುಜಾಮೋದೆ ಎಂಬ ಶಿಲಾಬಾಲಿಕೆಯ ವರ್ಣನೆ ಇರುವ ಏನೀ ಮಹಾನಂದವೇ ನೃತ್ಯವನ್ನು ಇಬ್ಬರು ಶಿಲಾಬಾಲಿಕೆಯರ ಸಂಭಾಷಣೆಯಂತೆ ಪೋಣಿಸಿದ್ದು ವಿಶೇಷ.ಕೊನೆಯಲ್ಲಿ ಪ್ರದರ್ಶನಗೊಂಡ ಸುಮನಸರಂಜನಿ ರಾಗದ ಆದಿತಾಳದ ನಾಗವಲ್ಲಿ ನಾಗರಾಜ್‌ ಮತ್ತು ಆರ್‌. ಗಣೇಶ್‌ ವಿರಚಿತ ತಿಲ್ಲಾನವು ವೈವಿಧ್ಯಮಯ ನೃತ್ತ ಚಲನೆಗಳೊಂದಿಗೆ ಚುರುಕಾಗಿ ಮೂಡಿ ಬಂತು. 

ನೃತ್ಯ-2ನ್ನು  ವೈ.ಜಿ.ಶ್ರೀಲತಾ ಅವರು ತಮ್ಮ ಪುಟ್ಟ ಶಿಷ್ಯೆಯರೊಂದಿಗೆ ನಡೆಸಿಕೊಟ್ಟರು.ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಆರಂಭಗೊಂಡು ನಂತರ ಕ್ರಮವಾಗಿ ಮುತ್ತುಸ್ವಾಮಿ ದೀಕ್ಷಿತರ ಗಜಾನನಯುತಂ ದಯಾನಂದ ಸರಸ್ವತಿಯವರ ಭೋಶಂಭೋ, ನರಸಿಂಹ ಕೌತ್ವಂ, ದ್ವಾರಕಿ ಕೃಷ್ಣಸ್ವಾಮಿಯವರ ಆನಂದ ತಾಂಡವೇಶ್ವರನ, ದಾಸರುಗಳ ಆಡಿದನೋ ರಂಗ, ಯಮನೆಲ್ಲೂ ಕಾಣನೆಂದು,ಜಗದೋದ್ಧಾರನ ಮತ್ತು ಕೊನೆಯಲ್ಲಿ ಶಿವಕಲ್ಯಾಣಿ ತಿಲ್ಲಾನದೊಂದಿಗೆ ಸಮಾಪ್ತಿ ಗೊಂಡಿತು ಶ್ರೀಲತಾರವರ ಅಂಗ ಶುದ್ಧತೆ,ಸ್ಪಷ್ಟ ಹೆಜ್ಜೆಗಾರಿಕೆ,ಹಿತಮಿತವಾದ ಅಭಿನಯ,ನೃತ್ತರೇಖೆಗಳ ನಿಖರತೆ ಪ್ರದರ್ಶನದ ಶ್ಲಾಘನಾರ್ಹ ಸಂಗತಿ.ಇವರ ಶಿಷ್ಯೆಯರಾದ ಸ್ಫೂರ್ತಿ, ಪೆ¤àಕ್ಷಾ, ಶ್ರೀಲಾಸ್ಯ,ಶ್ರಾವಣಿ ವಯಸ್ಸಿಗೆ ತಕ್ಕಂತೆ ಅಚ್ಚುಕಟ್ಟಾಗಿ ನರ್ತಿಸಿದ್ದರೂ ಇನ್ನಷ್ಟು ಅನುಭವ ಪಡೆದು ಹೆಚ್ಚಿನ ಅಂಗಶುದ್ಧಿ,ಅಭಿನಯ, ಹೊಂದಾಣಿಕೆಯೊಂದಿಗೆ ನೃತ್ಯಗಳನ್ನು ಪ್ರದರ್ಶಿಸಿದ್ದರೆ ಕಾರ್ಯಕ್ರಮದ ಮಟ್ಟ ಇನ್ನಷ್ಟು ಏರುತ್ತಿತ್ತೇನೋ.

ವಿ| ಮಾನಸಿ ಸುಧೀರ್‌ 

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.