ಸೌಜನ್ಯ ರಾಗದ ಚಂದ್ರಾವಳಿ ಅಮಿತ ಚೈತನ್ಯದ ಲವಕುಶ 


Team Udayavani, Sep 7, 2018, 6:00 AM IST

6.jpg

ಚಂದ್ರಾವಳಿ  ಪುರಾಣದಲ್ಲಿ ಉಲ್ಲೇಖಿತ ಪ್ರಸಂಗ ಅಲ್ಲದಿದ್ದರೂ ಅದಕ್ಕೊಂದು ಚಂದದ ಸಂದೇಶದ ರೂಪ ನೀಡಿ ಹೆಣ್ಣು ಮಕ್ಕಳಿಗೆ ರೂಪದ ಕುರಿತು ಅಹಂಕಾರ ಇರಬಾರದು, ಸೌಂದರ್ಯದ ಮದ ಏರಬಾರದು ಎಂಬ ಸಂದೇಶವನ್ನು ನೀಡುವ ಕಥಾನಕವಾಗಿಸಿ ಪ್ರದರ್ಶಿಸಲಾಗುತ್ತದೆ.

ಉಡುಪಿಯ ಕಿದಿಯೂರು ಹೋಟೆಲ್‌ ಸಭಾಂಗಣ ನಿಗದಿತ ಸಮಯಕ್ಕಿಂತ ಮುಂಚೆಯೇ ಭರ್ತಿಯಾಗಿತ್ತು. ಇಲ್ಲಿನ ಜನ ಅದೆಷ್ಟೋ ಬಾರಿ ನೋಡಿದ ಪ್ರಸಂಗವೇ ಚಂದ್ರಾವಳಿ ವಿಲಾಸ. ಹಾಗಿದ್ದರೂ ನಕ್ಕುನಗಿಸುವ ಪ್ರಸಂಗದ ಮೂಲಕ ಮತ್ತೂಮ್ಮೆ ನಕ್ಕು ಹಗುರಾಗಲು ಜನ ಆಗಮಿಸಿದ್ದರು. ಪ್ರೇಕ್ಷಕರ ನಿರೀಕ್ಷೆಯನ್ನು ಕಲಾವಿದರು ಹುಸಿ ಮಾಡಲಿಲ್ಲ. ಅದಕ್ಕೆ ಮೆಚ್ಚುಗೆ ಸೂಚಿಸಿದ್ದು ತುಂಬಿ ತುಳುಕಿದ ಸಭಾಂಗಣ. 

ಮಧುರ ಕಂಠದ ಹಿರಿಯ ಭಾಗವತ ಸುರೇಶ್‌ ಶೆಟ್ಟಿ ಅವರ ಭಾಗವತಿಕೆಯಲ್ಲಿ ಶಿವಾನಂದ ಕೋಟ ಚೆಂಡೆ, ಎನ್‌.ಜಿ.ಹೆಗಡೆ ಅವರ ಮದ್ದಳೆಯಲ್ಲಿ ಸುಶ್ರಾವ್ಯ ಹಿಮ್ಮೇಳ. ಅಷ್ಟೇ ಚಂದದ ಪ್ರಸ್ತುತಿ ಮುಮ್ಮೇಳದಿಂದ. ಕೃಷ್ಣನ (ದಿನೇಶ್‌ ಕನ್ನಾರು)ಪ್ರವೇಶ, ಇಂಪಾದ ಭಾಗವತಿಕೆಗೆ ವೈವಿಧ್ಯಮಯ ನಾಟ್ಯ ಪ್ರೇಕ್ಷಕರಿಗೆ ಮಹದಾನಂದ ಉಂಟು ಮಾಡಿತು. ಹಳ್ಳಾಡಿಯವರ ಚಂದಗೋಪ, ರಮೇಶ್‌ ಭಂಡಾರಿ ಅವರ ಅಜ್ಜಿ ಜತೆಗೂಡುವಿಕೆ ಎಂದೂ ಸೇರಿದವರಿಗೆ ನಗೆಗೆ ಮೋಸ ಮಾಡದ ಸಾಂಗತ್ಯ. ಅದಕ್ಕೊಪ್ಪುವಂತೆ ತೆಂಕು ಬಡಗಿನಲ್ಲಿ ಹೆಸರು ಗಳಿಸಿದ ಹಿಲಿಯಾಣ ಸಂತೋಷ್‌ ಅವರ ಚಂದ್ರಾವಳಿ, ದಿನೇಶ್‌ ಹೆನ್ನಾಬೈಲು ಅವರ ರಾಧೆ. ಕಾಲಮಿತಿಯಲ್ಲಿ ಒಟ್ಟು ಪ್ರಸಂಗ ಮುಗಿಸುವ ಅವಸರ ಕಂಡರೂ ಎಲ್ಲೂ ಕಥೆಗೆ ಲೋಪವಾಗದಂತೆ ಕೊಂಡೊಯ್ಯುವಲ್ಲಿ ಕಲಾವಿದರ ಪಾಲು ದೊಡ್ಡದಿತ್ತು. ಚಂದ್ರಾವಳಿ  ಪುರಾಣದಲ್ಲಿ ಉಲ್ಲೇಖೀತ ಪ್ರಸಂಗ ಅಲ್ಲದಿದ್ದರೂ ಅದಕ್ಕೊಂದು ಚಂದದ ಸಂದೇಶದ ರೂಪ ನೀಡಿ ಹೆಣ್ಣು ಮಕ್ಕಳಿಗೆ ರೂಪದ ಕುರಿತು ಅಹಂಕಾರ ಇರಬಾರದು , ಸೌಂದರ್ಯದ ಮದ ಏರಬಾರದು ಎಂಬ ಸಂದೇಶವನ್ನು ನೀಡುವ ಕಥಾನಕವಾಗಿಸಿ ಪ್ರದರ್ಶಿಸಲಾಗುತ್ತದೆ. ಸಂಪ್ರದಾಯವಾದಿ ಯಕ್ಷಗಾನ ವಾದಿಗಳು ಈ ಪ್ರಸಂಗದ ಪ್ರದರ್ಶನ ಒಪ್ಪುವುದಿಲ್ಲ. ಆದರೆ ಅಂತಹ ಕಟು ವಿಮರ್ಶೆ ಬದಲಿಗೆ ಸಂದೇಶ ಸಾರುವ ಯಕ್ಷಗಾನ ಹಾಗೂ ಯಕ್ಷಗಾನವೇ ಒಂದು ಪ್ರದರ್ಶನ ಕಲೆ ಎಂಬ ನಿಟ್ಟಿನಲ್ಲಿ ಸ್ವೀಕಾರಾರ್ಹ. 

ಎರಡನೆ ಯಕ್ಷಗಾನವಾಗಿ ಲವಕುಶ ನಡೆಯಿತು. ಚಂದ್ರಕಾಂತ ಮೂಡುಬೆಳ್ಳೆಯವರು ಭಾಗವತಿಕೆಯಲ್ಲಿ ಹೊಸಮೈಲಿಗಲ್ಲನ್ನು ಸ್ಥಾಪಿಸುತ್ತಿದ್ದು ಅವರ ಅಭಿಮಾನಿ ಬಳಗವನ್ನು ನಿರಾಸೆ ಮಾಡಲಿಲ್ಲ. ಎನ್‌.ಜಿ. ಹೆಗಡೆ ಹಾಗೂ ಸುಬ್ರಹ್ಮಣ್ಯ ಭಂಡಾರಿ ಅವರ ಹಿಮ್ಮೇಳದಲ್ಲಿ ಲವನಾಗಿ ಚಂದ್ರಹಾಸ ಗೌಡ, ಕುಶನಾಗಿ ರಾಜೇಶ್‌ ಭಂಡಾರಿ ಗುಣವಂತೆ ಅಶ್ವಮೇಧದ ಹಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅವರ ಜತೆಗಿದ್ದ ವಟುವಾಗಿ ಅರುಣ್‌ ಜಾರ್ಕಳ ಸಾಂದರ್ಭಿಕವಾಗಿ ರಂಜಿಸಿದರು. ನಾಗರಾಜ ಭಂಡಾರಿಯವರ ಶತ್ರುಘ್ನ, ಜಪ್ತಿ ಹರೀಶ್‌ ಮೊಗವೀರ ಅವರ ಪುಷ್ಕಳ,ದಿನೇಶ್‌ ಕನ್ನಾರು ಅವರ ಚಂದ್ರಕೇತ ಪಾತ್ರಗಳಾಗಿ ಅಚ್ಚುಕಟ್ಟಾದ ಅಭಿನಯವಾದರೆ ರಾಮನಾಗಿ ಬಳ್ಕೂರು ಕೃಷ್ಣಯಾಜಿ ನೆನಪಿನಲ್ಲಿ ಉಳಿಯುವ ಮಾತುಗಾರಿಕೆ. ವಾಲ್ಮೀಕಿಯಾಗಿ ನರಸಿಂಹ ಗಾಂವ್ಕರ್‌, ಸೀತೆಯಾಗಿ ಉಳ್ಳೂರು ಶಂಕರ್‌ ದೇವಾಡಿಗ ಅವರು ಒಟ್ಟು ಪ್ರಸಂಗದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಲವ ಕುಶರ ಗತ್ತುಗಾರಿಕೆ, ವಾಲ್ಮೀಕಿಯ ವಾಗ್‌ವೈಖರಿ, ಸೀತೆಯ ತುಮುಲ, ರಾಮನ ಬದ್ಧತೆ ಎಲ್ಲವೂ ಮನೋಹರವಾಗಿತ್ತು. 
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಸಹಿತ ಐದು ಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆ ದಂಪತಿಗೆ ಶೇಷಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಿತು. 

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.