ಶ್ರುತಿ ವಿಶ್ವಕರ್ಮ ಹಿಂದುಸ್ತಾನಿ ಗಾಯನ
Team Udayavani, Sep 7, 2018, 6:00 AM IST
ಕುಂದಾಪುರ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಆ.19ರಂದು ಯುವ ಪ್ರತಿಭೆ ಪುಣೆಯ ಕು| ಶ್ರುತಿ ವಿಶ್ವಕರ್ಮ ಪ್ರಸ್ತುತಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಸಂಗೀತವೇ ಆಸ್ತಿಯಾಗಿರುವ ಕುಟುಂಬದಲ್ಲಿ 1992ರಲ್ಲಿ ಜನಿಸಿದ ಶ್ರುತಿ 6 ವರ್ಷದ ಬಾಲೆಯಾಗಿರುವಾಗಲೇ ಕಿರಾಣಾ ಘರಾಣೆಯ ತಾಯಿ ಜಯಂತಿ ವಿಶ್ವಕರ್ಮ ಹಾಗೂ ತಂದೆ ಗಣಪತ್ರಾವ್ ವಿಶ್ವಕರ್ಮರಿಂದ ಸಂಗೀತದ ಮೊದಲ ಪಾಠ ಕಲಿತರು. ಮುಂದೆ ಕೆಲವು ವರ್ಷ ಗ್ವಾಲಿಯರ್ ಘರಾಣೆಯ ಡಾ| ವೀಣಾ ಸಹಸ್ರಬುದ್ಧೆಯವರಿಂದ ತರಬೇತಿ ಪಡೆದು ಪ್ರಸ್ತುತ ಆಗ್ರಾ ಘರಾಣೆ ಹಾಗೂ ಬೆಂಡಿಬಜಾರ್ ಘರಾಣೆಯ ಪಂ. ಕೇದಾರ್ ಬೊಡಾಸ್ ಅವರಿಂದ ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವರು.
ಮಿಯಾಮಲಾರ್ ರಾಗದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪೀಲು, ಕೀರ್ವಾನಿ ಬಳಿಕ ಭೈರವಿ ಹಾಡುವುದರ ಮೂಲಕ ಸಂಪನ್ನಗೊಂಡಿತು. ಸಂವಾದಿನಿಯಲ್ಲಿ ಗೌರೀಶ ಯಾಜಿ, ತಬಲಾದಲ್ಲಿ ವಿಘ್ನೇಶ ಎಸ್. ಕಾಮತ್, ತಾನ್ಪುರದಲ್ಲಿ ಕು| ವೀಣಾ ನಾಯಕ್ ಹಾಗೂ ವಿವೇಕ ಪೈ ಸಹಕರಿಸಿದರು.
ಪಿ.ಜಯವಂತ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ