ಶ್ರುತಿ ವಿಶ್ವಕರ್ಮ ಹಿಂದುಸ್ತಾನಿ ಗಾಯನ
Team Udayavani, Sep 7, 2018, 6:00 AM IST
ಕುಂದಾಪುರ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಆ.19ರಂದು ಯುವ ಪ್ರತಿಭೆ ಪುಣೆಯ ಕು| ಶ್ರುತಿ ವಿಶ್ವಕರ್ಮ ಪ್ರಸ್ತುತಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಸಂಗೀತವೇ ಆಸ್ತಿಯಾಗಿರುವ ಕುಟುಂಬದಲ್ಲಿ 1992ರಲ್ಲಿ ಜನಿಸಿದ ಶ್ರುತಿ 6 ವರ್ಷದ ಬಾಲೆಯಾಗಿರುವಾಗಲೇ ಕಿರಾಣಾ ಘರಾಣೆಯ ತಾಯಿ ಜಯಂತಿ ವಿಶ್ವಕರ್ಮ ಹಾಗೂ ತಂದೆ ಗಣಪತ್ರಾವ್ ವಿಶ್ವಕರ್ಮರಿಂದ ಸಂಗೀತದ ಮೊದಲ ಪಾಠ ಕಲಿತರು. ಮುಂದೆ ಕೆಲವು ವರ್ಷ ಗ್ವಾಲಿಯರ್ ಘರಾಣೆಯ ಡಾ| ವೀಣಾ ಸಹಸ್ರಬುದ್ಧೆಯವರಿಂದ ತರಬೇತಿ ಪಡೆದು ಪ್ರಸ್ತುತ ಆಗ್ರಾ ಘರಾಣೆ ಹಾಗೂ ಬೆಂಡಿಬಜಾರ್ ಘರಾಣೆಯ ಪಂ. ಕೇದಾರ್ ಬೊಡಾಸ್ ಅವರಿಂದ ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವರು.
ಮಿಯಾಮಲಾರ್ ರಾಗದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪೀಲು, ಕೀರ್ವಾನಿ ಬಳಿಕ ಭೈರವಿ ಹಾಡುವುದರ ಮೂಲಕ ಸಂಪನ್ನಗೊಂಡಿತು. ಸಂವಾದಿನಿಯಲ್ಲಿ ಗೌರೀಶ ಯಾಜಿ, ತಬಲಾದಲ್ಲಿ ವಿಘ್ನೇಶ ಎಸ್. ಕಾಮತ್, ತಾನ್ಪುರದಲ್ಲಿ ಕು| ವೀಣಾ ನಾಯಕ್ ಹಾಗೂ ವಿವೇಕ ಪೈ ಸಹಕರಿಸಿದರು.
ಪಿ.ಜಯವಂತ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು