ಜನಮನ ಜಯಿಸಿದ ಸುದರ್ಶನ  ವಿಜಯ


Team Udayavani, Sep 7, 2018, 6:00 AM IST

10.jpg

ಮಧುಕುಮಾರ್‌ ವಿರಚಿತ “ಸುದರ್ಶನ ವಿಜಯ’ ತೆಂಕುತಿಟ್ಟಿನ ಚಾಲ್ತಿಯ ಪ್ರಸಂಗ . ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನನಿಗೆ ಅಹಂಕಾರವು ಮಿತಿ ಮೀರಿದಾಗ ಶಾಪಕ್ಕೊಳಗಾಗಿ ಕಾರ್ತ್ಯವೀರ್ಯನಾಗಿ ಜನಿಸಿ, ವಿಷ್ಣುವಿನ ಪರಶುರಾಮ ಅವತಾರದಲ್ಲಿ ಮರಣ ಹೊಂದಿ ಪುನರಪಿ 
ವಿಷ್ಣುವಿನ ಕೈ ಸೇರುವ ಕಥಾಹಂದರ . 

 ತೆಂಕುತಿಟ್ಟಿನ ಯಕ್ಷಗಾನ ಕಲಾವಿದರು ತಮ್ಮ ಮಕ್ಕಳನ್ನು ಯಕ್ಷರಂಗಕ್ಕೆ ತಂದುದು ತೀರಾ ವಿರಳ .ಬೆರಳೆಣಿಕೆಯ ಒಬ್ಬಿಬ್ಬರು ಕಲಾವಿದರನ್ನು ಹೊರತುಪಡಿಸಿ ಬೇರಾವ ಕಲಾವಿದರೂ ತಮ್ಮ ಮಕ್ಕಳನ್ನು ಯಕ್ಷರಂಗದಲ್ಲಿ ತೊಡಗಿಸಿಕೊಳ್ಳಲಿಲ್ಲ . ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿಯವರು ತಮ್ಮ ಪುತ್ರಿ ಕು| ಆಜ್ಞಾಸೋಹಂ ಅವರಿಗೆ ಯಕ್ಷಗಾನ ಕಲಿಸಿ , ರಂಗಪ್ರವೇಶಕ್ಕಾಗಿ ಇತ್ತೀಚೆಗೆ ಕಟೀಲಿನಲ್ಲಿ ಸುದರ್ಶನ ವಿಜಯ ಪ್ರದರ್ಶನ ಏರ್ಪಡಿಸಿದ್ದರು. ಈ ಆಟ ಉತ್ತಮ ಪ್ರಸ್ತುತಿಯಲ್ಲಿ ಮೂಡಿಬಂತು . ಪರಂಪರೆಯ ನಾಟ್ಯಗಳಿಗೆ ಒತ್ತು ಕೊಟ್ಟದಲ್ಲದೇ ಕಾಲಮಿತಿಯೊಳಗೆಯೇ ಅಚ್ಚುಕಟ್ಟಾಗಿ ಕಾರ್ಯಕ್ರಮ ಮುಗಿಸಿದುದು ಉಲ್ಲೇಖನೀಯ . 

 ಮಧುಕುಮಾರ್‌ ವಿರಚಿತ “ಸುದರ್ಶನ ವಿಜಯ’ ತೆಂಕುತಿಟ್ಟಿನ ಚಾಲ್ತಿಯ ಪ್ರಸಂಗ . ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನನಿಗೆ ಅಹಂಕಾರವು ಮಿತಿ ಮೀರಿದಾಗ ಶ್ರೀಮನ್ನಾರಾಯಣನ ಸಂಕಲ್ಪದಂತೆ ಶಾಪಕ್ಕೊಳಗಾಗಿ ಕಾರ್ತ್ಯವೀರ್ಯನೆಂಬ ಮಾನವನಾಗಿ ಜನಿಸಿ, ಕೊನೆಗೆ ವಿಷ್ಣುವಿನ ಪರಶುರಾಮ ಅವತಾರದಲ್ಲಿ ಮರಣ ಹೊಂದಿ ಪುನರಪಿ ವಿಷ್ಣುವಿನ ಕೈ ಸೇರುವ ಕಥಾಹಂದರವೇ ಸುದರ್ಶನ ವಿಜಯ . 

ಇದರ ಮುಖ್ಯ ಪಾತ್ರವಾದ ಸುದರ್ಶನನಾಗಿ ಆಜ್ಞಾಸೋಹಂ ಉತ್ತಮ ನಿರ್ವಹಣೆ ನೀಡಿದರು . ಚುರುಕಿನ ಹೆಜ್ಜೆಗಾರಿಕೆ , ತಾಳಗತಿಗನುಗುಣವಾದ ನಾಟ್ಯ , ಭಾವಾಭಿವ್ಯಕ್ತಿಯ ಅಭಿನಯ , ಪಾತ್ರದ ಸ್ವಭಾವವನ್ನು ಅರಿತು ಸ್ವರಗಳ ಏರಿಳಿತದೊಂದಿಗಿನ ಮಾತುಗಾರಿಕೆ – ಎಲ್ಲವೂ ಸುದರ್ಶನ ಪಾತ್ರದ ಯಶಸ್ಸಿಗೆ ಕಾರಣವಾಯಿತು . ಆಜ್ಞಾರದ್ದು ಇದೇ ಪ್ರಥಮ ಪಾತ್ರವಲ್ಲ . ಈ ಹಿಂದೆ ಬಾಲ ಕಲಾವಿದೆಯಾಗಿ ದೇವೇಂದ್ರಬಲ , ರಕ್ಕಸ ಬಲದಂಥಹ ಪಾತ್ರಗಳನ್ನು ನಿರ್ವಹಿಸಿದ್ದರು .ಆದರೆ ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಿದ್ದು ಪ್ರಥಮ . 

ಬಡಗುತಿಟ್ಟಿನ ನಾಟ್ಯವನ್ನು ಬನ್ನಂಜೆ ಸಂಜೀವ ಸುವರ್ಣರಿಂದ ಕಲಿತಿರುವ ಆಜ್ಞಾ ಉಭಯ ತಿಟ್ಟುಗಳಲ್ಲೂ ಪರಿಣತರು . ಭರತನಾಟ್ಯವನ್ನೂ ಅಭ್ಯಸಿಸಿರುವ ಆಜ್ಞಾ ಕರಾಟೆಯಲ್ಲೂ ಬ್ಲ್ಯಾಕ್‌ ಬೆಲ್ಟ… ಪಡೆದಿರುವ ಪ್ರತಿಭಾವಂತೆ . ಪ್ರಸ್ತುತ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. 

 ವಿಷ್ಣುವಾಗಿ ತಾರಾನಾಥ ವರ್ಕಾಡಿಯವರ ನಿರ್ವಹಣೆ ಅತ್ಯುತ್ತಮವಾಗಿತ್ತು . ಪೀಠಿಕೆಯಲ್ಲಿ ನಾನು ಎಂದರೆ ಶೂನ್ಯ ಎಂಬುದನ್ನು ಉದಾಹರಣೆ ಸಹಿತ ನಿರೂಪಿಸಿ ಪ್ರಸಂಗವು ಪ್ರಾರಂಭದಲ್ಲೇ ಪ್ರೇಕ್ಷಕರನ್ನು ಹಿಡಿದಿಟ್ಟಿತು . ಸುದರ್ಶನನೊಂದಿಗಿನ ಸಂವಾದದಲ್ಲಿ ದೇವರು ಕೈ ಹಿಡಿದವರನ್ನು ಎಂದಿಗೂ ಬಿಡುವುದಿಲ್ಲ. ಆದರೆ ದೇವರ ಕೈಯಿಂದ ತಾನಾಗಿ ಜಾರಿದವನನ್ನು ಯಾವ ದೇವರಾದರೂ ರಕ್ಷಿಸಲು ಸಾಧ್ಯವೇ ? ಎಂದು ಹೇಳಿ ಸುದರ್ಶನನ ಅಹಂಕಾರವೇ ಅವನ ಅಧಃಪತನಕ್ಕೆ ಕಾರಣವೆಂದು ಸೂಚ್ಯವಾಗಿ ಪ್ರತಿಪಾದಿಸಿದರು . ಸುದರ್ಶನ – ವಿಷ್ಣು – ಲಕ್ಷ್ಮೀ ಸಂವಾದವೂ ಚೆನ್ನಾಗಿ ಮೂಡಿಬಂತು . ಮೂಲತಃ ತೆಂಕುತಿಟ್ಟಿನ ಹವ್ಯಾಸಿ ಕಲಾವಿದರಾದರೂ , ಇತ್ತೀಚೆಗೆ ಬಡಗುತಿಟ್ಟಿನಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುವ ಮಾಲತಿ ಪ್ರಭು ಲಕ್ಷ್ಮಿಯ ಚಿತ್ರಣವನ್ನು ಚೆನ್ನಾಗಿ ಕಟೆದು ನಿಲ್ಲಿಸಿದರು . ಈ ಸಂಭಾಷಣೆಯ ಭಾಗದಲ್ಲಿ ಮಾಮೂಲಾಗಿ ಬರುವ ಸಂಭಾಷಣೆಯನ್ನು ಕೈಬಿಟ್ಟು ಹೊಸ ಸಂವಾದ ಬಳಸಿದ್ದುದು ಉಲ್ಲೇಖನೀಯ . ಸುದರ್ಶನನಿಗೆ ತಲೆಗೇರಿದ ಅಹಂಕಾರವನ್ನು ಆಜ್ಞಾಸೋಹಂ ಸಮರ್ಪಕವಾಗಿ ಚಿತ್ರಿಸಿ ಮೆಚ್ಚುಗೆಗೆ ಪಾತ್ರರಾದರು .ಸಂಭಾಷಣೆಯಲ್ಲೂ ನೈಪುಣ್ಯತೆ ತೋರಿದರು . ತನ್ನದು ಪ್ರಥಮ ಪ್ರದರ್ಶನ ಎಂಬುದು ಎಲ್ಲಿಯೂ ತೋರ್ಪಡಿಸದ ರೀತಿಯಲ್ಲಿ ವೃತ್ತಿಪರರಂತೆಯೇ ಪಾತ್ರವನ್ನು ಚಿತ್ರಿಸಿದರು .ಶತ್ರುಪ್ರಸೂದನನಾಗಿ ತಾರಾನಾಥ ವರ್ಕಾಡಿಯವರ ಯಕ್ಷ ಗುರುಗಳಾದ ಕೆ.ಗೋವಿಂದ ಭಟ್ಟರ ನಿರ್ವಹಣೆ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು ಗುರು – ಶಿಷ್ಯ – ಪ್ರಶಿಷ್ಯೆ ( ಶಿಷ್ಯನ ಪುತ್ರಿಯೂ ಹೌದು ) ಸಮಾಗಮದಲ್ಲಿ ಆಜ್ಞಾಸೋಹಂರವರ ಪ್ರಥಮ ರಂಗಪ್ರವೇಶ ಯಶಸ್ವಿಯಾಗಿ ಪ್ರಸ್ತುತಗೊಂಡಿತು . 

ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.