ಮಕ್ಕಳ ಭವಿಷ್ಯ ಕಟ್ಟುವ ಸ್ಪರ್ಧಾಲೋಕ


Team Udayavani, Sep 28, 2018, 6:00 AM IST

d-1.jpg

ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ವರ್ಷವಿಡೀ ಪ್ರತಿಭಾ ಪುರಸ್ಕಾರಗಳು ನಡೆಯುತ್ತಿರುತ್ತವೆ. ಇದಕ್ಕಾಗಿಯೇ ಸ್ಥಾಪಿಸಿದ ಟ್ರಸ್ಟ್‌ಗಳು ಸರಾಸರಿ ಶೇ. 90-95 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ದೊಡ್ಡಮಟ್ಟದಲ್ಲಿ ಉತ್ತೇಜನ ನೀಡಿವೆ. ಜ್ಞಾನಾರ್ಜನೆಯ ಹೊರತಾಗಿ ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲೂ ಪೈಪೋಟಿ ಏರ್ಪಡಿಸಿ ಪ್ರಶಸ್ತಿಗೆ ಅರ್ಹತೆಯನ್ನು ಅಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಗಳೂ ಶೈಕ್ಷಣಿಕ ಪ್ರತಿಭಾ ಪುರಸ್ಕಾರದಂಥ ಸಮಾಜ ಮುಖೀ ಕಾರ್ಯಗಳತ್ತ ಹರಿಸಿರುವುದು ಸ್ತುತ್ಯಾರ್ಹ. ಕ್ರಿಯಾಶೀಲ ಮಕ್ಕಳನ್ನು ಕಾಣಬೇಕಾದರೆ ಗಣೇಶೋತ್ಸವ ಬರಬೇಕು. ಪ್ರತೀ ವರುಷ ಗಣೇಶೋತ್ಸವದ ಪೂರ್ವಭಾವಿಯಾಗಿ ಚಿತ್ರಕಲೆ, ಆವೆಮಣ್ಣಿನ ಕಲೆ, ಪೇಪರ್‌ ಕ್ರಾಫ್ಟ್, ರಂಗೋಲಿ, ಛದ್ಮವೇಷ, ನೃತ್ಯ, ಭಕ್ತಿಗೀತೆ, ಸಂಗೀತ ವಾದ್ಯ ವಾದನ ಮುಂತಾದ ಹತ್ತು ಹಲವು ಸ್ಪರ್ಧೆಗಳನ್ನು ಮಕ್ಕಳಿಗಾಗಿ ಅಯೋಜಿಸುತ್ತಾರೆ. ಈ ಸಮಯದಲ್ಲಿ ಮಕ್ಕಳಿಗಿಂತ ಅವರ ಹೆತ್ತವರಿಗೆ, ಪೋಷಕರಿಗೆ, ಕಲಾಶಿಕ್ಷಕರಿಗೆ ಕೈ ತುಂಬಾ ಕೆಲಸ ! ತಮ್ಮ ಮಕ್ಕಳು ಉತ್ತಮ ಪ್ರದರ್ಶನ ನೀಡುವಂತೆ ತಲೆಕೆಡಿಸಿಕೊಳ್ಳುವ ಮನೆ ಮಂದಿಯ ಆಲೋಚನೆಗಳನ್ನು ಮಕ್ಕಳು ಕಾರ್ಯರೂಪಕ್ಕೆ ತರುವಲ್ಲಿ ಸಾಕಷ್ಟು ಬದಲಾವಣೆಗಳಾಗಿ ಬೈಗುಳ ರೂಪ ಪಡೆದುಕೊಳ್ಳುವುದೂ ಇದೆ. 

ಹೆಚ್ಚಿನ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ಸ್ಪರ್ಧೆಯ ಕಣಕ್ಕೆ ಇಳಿಯುತ್ತಾರೆ. ಉಳಿದವರು ಶಾಸ್ತ್ರೀಯವಾಗಿ ಕಲಿತುಕೊಂಡು ಬಂದ ವಿದ್ಯೆಗಳನ್ನು ಪ್ರದರ್ಶಿಸುವ ಸಮಯವದು. ಎಲ್ಲಾ ರೀತಿಯ ಸಂಗ್ರಹಗಳಿಂದ ಆಯ್ದ ಕೃತಿಗಳಿಗೆ ಇನ್ನಷ್ಟು ಮಸಾಲೆ ರುಚಿ ಸೇರಿಸಿ ಕಲಿಸಿಕೊಟ್ಟರೂ ಕೊನೆಯ ಫ‌ಲಿತಾಂಶ ಆ ಮಗುವಿನ ಪ್ರತಿಭೆಯಂದಲೇ ಹೊರಹೊಮ್ಮಬೇಕು. ಬಹುಮಾನ ಬಾರದಿದ್ದರೆ ತೀರ್ಪುಗಾರರನ್ನು ತರಾಟೆಗೆ ತೆಗೆದುಕೊಳ್ಳುವ ಘಟನೆಗಳು ಕೂಡ ನಡೆಯುತ್ತವೆ. ಒಂದೇ ದಿನ ಹಲವಾರು ಕಡೆ ವಿವಿಧ ಸ್ಪರ್ಧೆಗಳು ನಡೆಯುವ ಸಂದರ್ಭ, ತಂದೆ ತಾಯಂದಿರು ಯೋಜನೆ ರೂಪಿಸಿ ಗುಣಮಟ್ಟದ ಬಹುಮಾನ ವ್ಯವಸ್ಥೆ ಇರುವಲ್ಲಿ ಮಕ್ಕಳನ್ನು ಕರೆದು ಕೊಂಡು ಭಾಗವಹಿಸುತ್ತಾರೆ. ಕೆಲವೊಮ್ಮೆ ಮುಂಜಾನೆಯಿಂದ ಸಂಜೆ ತನಕ ಭಾಗವಹಿಸಿದ ಉದಾಹರಣೆಗಳಿವೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚು ಕಮ್ಮಿ 1000 ಕಡೆ ಸಂಘ ಸಂಸ್ಥೆಗಳು ಗಣೇಶೋತ್ಸವವನ್ನು ಆಚರಿಸುತ್ತವೆ. ಇಲ್ಲೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಎಳೆಯ ಪ್ರಬುದ್ಧ ಕಲಾವಿದರು ನೃತ್ಯ -ಸಂಗೀತ ಪರಿಣತಿ ಹೊಂದಿದವ‌ರೇ. ಹಿಂದೆ ಸ್ಪರ್ಧೆಗಳಿಂದಲೇ ತಯಾರಾದವರು ಎಂಬುದು ವಿಶೇಷ. ಈ ಮಕ್ಕಳ ಭವಿಷ್ಯ ಕಟ್ಟುವ ಸ್ಪರ್ಧಾ ಲೋಕ, ಜೀವನ ಸಂತೃಪ್ತಿಯ ಜತೆಗೆ ಹಣ ಮತ್ತು ಗೌರವ ಸಂಪಾದನೆಯ ಮೆಟ್ಟಿಲು ಎಂದೇ ಹೇಳಬಹುದು.

ಜೀವನ್‌ ಶೆಟ್ಟಿ 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.