ವಿಚಾರ ಪ್ರಚೋದಕ ದಕ್ಷಯಜ್ಞ 


Team Udayavani, Oct 5, 2018, 6:00 AM IST

s-5.jpg

ಯಕ್ಷಗಾನ ಪ್ರಸಂಗ ಪ್ರದರ್ಶನವೊಂದು ಸಹೃದಯರ ಮನಸ್ಸ‌ನ್ನು ತಟ್ಟಿ, ವಿಚಾರಶೀಲರಾಗಿಸಿ, ಯಕ್ಷಗಾನದ ಮೇಲ್ಮೆ„ಯನ್ನು ಪ್ರತಿಪಾದಿಸಬಹುದು ಎಂಬುದಕ್ಕೆ ದೃಷ್ಟಾಂತವಾಗಿ ಇತ್ತೀಚೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು ಇಲ್ಲಿ ಯಕ್ಷಸಿಂಚನ ಟ್ರಸ್ಟ್‌ ಬೆಂಗಳೂರು ಇವರು ನಡೆಸಿಕೊಟ್ಟ “ದಕ್ಷಯಜ್ಞ’ ಪ್ರಸಂಗ ಪ್ರದರ್ಶನ ಸಾಕ್ಷಿಯಾಯ್ತು. 

ಕೆ. ಜೆ. ಗಣೇಶ್‌, ಕೆ.ಜೆ.ಕೃಷ್ಣ, ಕೆ.ಜೆ. ಸುಧೀಂದ್ರ ಇವರ ದಕ್ಷ ಹಿಮ್ಮೇಳ ಪ್ರದರ್ಶನದ ಯಶಸ್ಸಿಗೆ ಕಸುಬುಗಾರಿಕೆಯನ್ನು ಒದಗಿಸಿ ವಿಜೃಂಭಿಸಿತು. ದೇವೇಂದ್ರನ (ಆದಿತ್ಯ ಉಡುಪ) ಪ್ರವೇಶದೊಡನೆ ಆರಂಭವಾದ ಪ್ರಸಂಗ ಉತ್ತಮ ಚಾಲನೆಯಿಂದ ಕೂಡಿತ್ತು. ಜ್ಞಾನಸತ್ರಯಾಗದ ಅಧ್ಯಕ್ಷತೆಗಾಗಿ ಈಶ್ವರನನ್ನು ವಿನಂತಿಸಲು ಹೊರಟಾಗ ಸಂಪ್ರದಾಯದ ಹೆಜ್ಜೆ, ನೃತ್ಯಗಳು ಮೂಡಿ ಬಂತು. ಈಶ್ವರನಾಗಿ (ಶಶಿರಾಜ್‌ ಸೋಮಯಾಜಿ) ಪ್ರವೇಶ ನೃತ್ಯದ ಜತೆಗೆ ತಾಂಡವ ನೃತ್ಯವನ್ನು ನಡೆಸಿ, ರಂಗದ ನಡೆ, ಬದ್ಧತೆಯನ್ನು ನಡೆಸಿಕೊಟ್ಟರು. ಸೊಗಸಾದ ಮಾತಿನಿಂದ ಈಶ್ವರನ ಪಾತ್ರದ ಎತ್ತರ-ಬಿತ್ತರವನ್ನು ಸಾಧಿಸಿದರು. ಜ್ಞಾನ ಸತ್ರಯಾಗಕ್ಕೆ ಪ್ರವೇಶವಾದ ಕಿರೀಟಧಾರಿ, ಗಡ್ಡಕಟ್ಟಿದ ದಕ್ಷ (ರವಿ ಮಡೋಡಿ) ಅಹಂಕಾರ, ದರ್ಪ ವಿಲಾಸವನ್ನು ಪ್ರವೇಶದಿಂದಲೇ ಆಹಾವಿಸಿಕೊಳ್ಳುತ್ತಾ, ನೃತ್ಯ, ಅಭಿನಯ, ರಂಗನಡೆ, ಮಾತಿನಿಂದ ಪ್ರಬುದ್ಧ ದಕ್ಷನನ್ನೆ ಕಟ್ಟಿಕೊಟ್ಟರು. ಶಿವನನ್ನು ನಿಂದಿಸುವ, ಲೇವಡಿ ಮಾಡುವ, ಆ ಐದಾರು ಪದ್ಯಗಳನ್ನು ಗಂಭೀರ ನಡೆಯಲ್ಲಿ ನಡೆಸಿ, ಅರ್ಥಗಾರಿಕೆಯಲ್ಲಿ ವಿಶೇಷ ಹೊಳಹುಗಳಿಂದ ಪುರಾಣದ ಪಾತ್ರವನ್ನು ಮೂಡಿಸಿದ ಬಗೆ ಅಭಿನಂದನೀಯವಾದುದು.

ದಾಕ್ಷಾಯಿಣಿಯಾಗಿ (ಮನೋಜ್‌ ಭಟ್‌, ಸಾಲಿಗ್ರಾಮ) ಪಾತ್ರ ಪೋಷಣೆಯಲ್ಲಿ ಕಂಡು ಬಂದ ಸಾಮರ್ಥ್ಯ ಅನುಸರಣೀಯವಾಗಿತ್ತು. ಶಿವನನ್ನು ಒತ್ತಾಯಿಸುವ ಸಂದರ್ಭ ತವರು ಮನೆಯ ಮೋಹ, ಗಂಡನ ಮಾತನ್ನು ಮೀರಲಾರದ ಸತಿಯ ತುಮುಲ, ದ್ವಂದ್ವಗಳನ್ನು ಚೆನ್ನಾಗಿ ಪ್ರಕಟಿಸಿ ಪ್ರೇಕ್ಷಕರೆ ದಾಕ್ಷಾಯಿಣಿ ಪರವಾಗಿ ನಿಲ್ಲುವಂತೆ ಸಹಜವಾದ ಅಭಿನಯ ನಡೆಸಿದರು. 

ವೃದ್ಧ ಬ್ರಾಹ್ಮಣರಾಗಿ (ಶ್ರೀಕೃಷ್ಣ ಶಾಸ್ತ್ರಿ, ಮುದೂರು) ರಂಗದ ನಡೆಯಲ್ಲಿ ಕುಣಿದು ಪ್ರಸಂಗದ ನಡೆಗೆ ಪೂರಕರಾದರು. ಕೊನೆಯ ಸನ್ನಿವೇಶದಲ್ಲಿ ದಕ್ಷ, ದಾಕ್ಷಾಯಿಣಿಯರ ಅಭಿನಯ, ಮಾತು, ರಂಗನಡೆ ಮತ್ತು ಹಿಮ್ಮೇಳದ ಪ್ರಭಾವಪೂರ್ಣವಾದ ಭಾವ ತೀವ್ರತೆಗಳಿಂದ ಉನ್ನತ ಮಟ್ಟದ ರಂಗ ಸಾಕಾರವಾಯ್ತು. ತಂಡದ ಪೂರ್ಣ ಪ್ರಯತ್ನ ಕಲಾರಾಧನೆಯೇ ಆಗಿ, ಕವಿ ಯಾವ ಆಶಯ ಚಿಂತಿಸಿ ಪ್ರಸಂಗ ರಚಿಸಿದ್ದಾನೆಯೋ ಅದಕ್ಕಿಂತಲೂ ತುಂಬಾ ಎತ್ತರದಲ್ಲಿ ಅದನ್ನು ಪ್ರತಿಪಾದಿಸಿ, ಪಾತ್ರಧಾರಿಯು ವೈಯಕ್ತಿಕ ಪ್ರತಿಭೆ ಮುಖ್ಯವಲ್ಲ, ಎಲ್ಲರ ಒಟ್ಟು ಪ್ರಯತ್ನ ಮುಖ್ಯ ಎಂದು ಅರ್ಥಪೂರ್ಣವಾಗಿ ಬಿಂಬಿಸಿದಂತಾಯ್ತು.

ಎರಡು ದೀವಟಿಗೆಯ ಮೂಲಕ ಪ್ರವೇಶ ಮಾಡಿದ ರುದ್ರನಾದ ವೀರಭದ್ರ (ಶಶಾಂಕ್‌ ಎಮ್‌. ಕಾಶಿ) ಬಣ್ಣದ ತಟ್ಟಿಯಲ್ಲಿಯೇ ಕಾಣಿಸಿಕೊಂಡು ಬಣ್ಣದ ವೇಷದ ಸೊಬಗನ್ನು ಮೆರೆಸಿದರು. ದಕ್ಷ ವಧೆಯಾದ ಬಳಿಕ ಮತ್ತೆ ಶಿವನು ಕಾಣಿಸಿಕೊಂಡು, ದಕ್ಷನನ್ನು ಮರು ಬದುಕಿಸಿ, ಆತನಿಗೆ ಆಡಿನ ತಲೆ ಜೋಡಿಸಿ, ಯಾಗ ಪೂರ್ಣಗೊಳಿಸಿ, ಉಪಸಂಹಾರದ ಮಾತುಗಳನ್ನಾಡಿ, ಕೋಪ, ರಾಗ, ದ್ವೇಷ, ಮತ್ಸರ, ಹಗೆತನಗಳು ನಾಶವನ್ನೂ, ಆಪತ್ತನ್ನೂ ತರುವುದರಿಂದ ಮುಂದೆ ಹಾಗಾಗಕೂಡದು ಎಂಬ ಸಂದೇಶವನ್ನು ಸಾರಿದರು.    

ಮನೋಹರ ಎಸ್‌. ಕುಂದರ್‌ 

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.